MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬಿಎಂಟಿಎಸಿ, ಕೆಎಸ್​ಆರ್​ಟಿಸಿ ಟಿಕೆಟ್​ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್​

ಬಿಎಂಟಿಎಸಿ, ಕೆಎಸ್​ಆರ್​ಟಿಸಿ ಟಿಕೆಟ್​ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್​

ಶಕ್ತಿ ಯೋಜನೆ, ಇಂಧನ ದರ ಏರಿಕೆ ಮತ್ತು ಸರ್ಕಾರದ ಬಾಕಿ ಅನುದಾನದಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ನಷ್ಟವನ್ನು ಸರಿದೂಗಿಸಲು, ಅಧಿಕಾರಿಗಳು ಶೇಕಡಾ 25 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

2 Min read
Author : Suchethana D
Published : Jun 22 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
16
ಶಕ್ತಿ ಯುದ್ಧದ ಪರಿಣಾಮ
Image Credit : Asianet News

ಶಕ್ತಿ- ಯುದ್ಧದ ಪರಿಣಾಮ

ಮಹಿಳೆಯರಿಗೆ ನೀಡುತ್ತಿರುವ ಶಕ್ತಿ ಯೋಜನೆ ಹಾಗೂ ಯುದ್ಧದ ಪರಿಣಾಮ ಏರಿರುವ ಇಂಧನದ ಬೆಲೆಯಿಂದಾಗಿ ಇದಾಗಲೇ ಅಪಾರ ಸಂಕಷ್ಟದಲ್ಲಿರುವ ಬಿಎಂಟಿಎಸ್​ ಮತ್ತು ಕೆಎಸ್​ಆರ್​ಟಿಸಿ ಇದಾಗಲೇ ವರ್ಷದ ಹಿಂದಷ್ಟೇ ಶೇಕಡಾ 15ರಷ್ಟು ದರ ಹೆಚ್ಚಳ ಮಾಡಿತ್ತು. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್ಸನ್ನು ರದ್ದುಗೊಳಿಸಿ ಸ್ಲೀಪರ್​ ಕೋಚ್​ ಬಸ್ಸಷ್ಟೇ ಬಿಡಲಾಗಿದೆ. ಇದರಿಂದ ಅನಿವಾರ್ಯವಾಗಿ ಹೆಚ್ಚು ದರ ಕೊಟ್ಟು ಹೋಗುವ ಪರಿಸ್ಥಿತಿ ಸದ್ಯಕ್ಕೆ ಇದೆಯಾದರೂ, ಅದೇನೇ ಮಾಡಿದರೂ ಸರ್ಕಾರದ ಮೇಲಿನ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅನುದಾನ ಬಾಕಿ
Image Credit : Social Media

ಅನುದಾನ ಬಾಕಿ

ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಅದರ ಜೊತೆಗೆ ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.

Related Articles

Related image1
ಮೋದಿ-ಮೆಲೋನಿ ಫೋಟೋ ನೋಡಿ ಹೊಟ್ಟೆ ಉರಿದುಕೊಂಡ ಟ್ರಂಪ್​? ಎಡವಟ್ಟು ಹೇಳಿಕೆ ನೀಡಿ ಮುಖಭಂಗ
Related image2
ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ: ದಿನಪೂರ್ತಿ ಇರಲ್ಲ ಕರೆಂಟ್​ - ನಿಮ್​ ಏರಿಯಾ ಇದ್ಯಾ ಚೆಕ್​ ಮಾಡಿಕೊಳ್ಳಿ
36
ಶೇಕಡಾ 25ಕ್ಕೆ ಏರಿಕೆ?
Image Credit : BMTC

ಶೇಕಡಾ 25ಕ್ಕೆ ಏರಿಕೆ?

ಆದ್ದರಿಂದ ಈ ಸಲ ಟಿಕೆಟ್​ ದರವನ್ನು ಶೇಕಡಾ 25ಕ್ಕೆ ಏರಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಇದಾಗಲೇ ಪೆಟ್ರೋಲ್​, ಡೀಸೆಲ್​ ಬೆಲೆ ಪ್ರತಿ ಲೀಟರ್‌ಗೆ 8 ರೂಪಾಯಿಯಷ್ಟು ಹೆಚ್ಚಾಗಿರುವ ಕಾರಣದಿಂದ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

46
40 ಕೋಟಿ ರೂ. ನಷ್ಟ
Image Credit : Kannada Prabha

40 ಕೋಟಿ ರೂ. ನಷ್ಟ

ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಹೀಗೆ ಆಗಿದ್ದೇ ಆದಲ್ಲಿ, ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆಎಸ್ಆರ್‌ಟಿಸಿ (KSRTC), ಬಿಎಂಟಿಸಿ (BMTC), ಈಶಾನ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ಬೆಲೆ ಏರಿಕೆ ಮಾಡುವಂತೆ ಅಧಿಕಾರಿಗಳು ಇದಾಗಲೇ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.

56
 100 ರೂ.ಗೆ 125 ರೂ.
Image Credit : Asianet News

100 ರೂ.ಗೆ 125 ರೂ.

ಈಗ ಮಾಡಿಕೊಂಡಿರುವ ಮನವಿಯ ಪ್ರಕಾರ ಶೇಕಡಾ 25ರಷ್ಟು ದರ ಹೆಚ್ಚು ಮಾಡುವಂತೆ ಕೋರಲಾಗಿದೆ ಎಂದು ವರದಿಯಾಗಿದೆ. ಇದರ ಅರ್ಥ 100 ರೂಪಾಯಿ ಇದ್ದ ಟಿಕೆಟ್​ ಇನ್ನುಮುಂದೆ 125 ರೂಪಾಯಿ ಆಗುವ ಸಾಧ್ಯತೆ ಇದೆ.

66
ಶಕ್ತಿ ಯೋಜನೆ ಕೈಬಿಡಲು ಒತ್ತಾಯ
Image Credit : our own

ಶಕ್ತಿ ಯೋಜನೆ ಕೈಬಿಡಲು ಒತ್ತಾಯ

ಆದರೆ ಇದಾಗಲೇ ಮಹಿಳೆಯರೂ ಸೇರಿ ಹಲವರು ಶಕ್ತಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇದಾಗಲೇ ವಿದ್ಯುತ್​ ರೇಟ್​ ಹೆಚ್ಚಾಗಿದೆ. ವಾಣಿಜ್ಯ ಬಳಕೆಗೆ ಕರೆಂಟ್​ ಬಿಲ್​ ಪಾವತಿ ಮಾಡುತ್ತಿರುವವರಿಗೆ ಮೂರು ಪಟ್ಟು ಹೆಚ್ಚು ಬಿಲ್​ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ, ನೀರಿನ ಬಿಲ್​ ಕೂಡ ಹೆಚ್ಚಿದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಇನ್ನು ಟಿಕೆಟ್​ ದರ ಏರಿಸುವ ಬದಲು ಶಕ್ತಿ ಯೋಜನೆಯನ್ನೇ ಕೈಬಿಡಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ನಾಟಕ ಸರ್ಕಾರ
ಸರ್ಕಾರಿ ಯೋಜನೆಗಳು
ಡಿ.ಕೆ. ಶಿವಕುಮಾರ್
ಸಾರಿಗೆ
ಕೆಎಸ್ಆರ್ಟಿಸಿ
ಬಿಎಂಟಿಸಿ

Latest Videos
Recommended Stories
Recommended image1
ಅರಣ್ಯ ಇಲಾಖೆ ಜಾಣ ಕುರುಡು: ಆನೆ ಹಿಂಡು ಇರೋ ಜಾಗದಲ್ಲಿ ಬಿರಿಯಾನಿ, ಕಸದ ರಾಶಿ: ಪಿಕ್‌ನಿಕ್‌ ಸ್ಪಾಟ್‌ ಆದ Kabini Backwaters!
Recommended image2
ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!
Recommended image3
ಮಳೆ ಬರದಿದ್ದರೆ ಬೆಂಗಳೂರಿಗೆ ತೀವ್ರ ಜಲ ಕಂಟಕ: ಕಾವೇರಿ ನೀರಿಗಾಗಿ ಜಲಮಂಡಳಿ ಭವಿಷ್ಯದ ಹೆಜ್ಜೆ!
Related Stories
Recommended image1
ಮೋದಿ-ಮೆಲೋನಿ ಫೋಟೋ ನೋಡಿ ಹೊಟ್ಟೆ ಉರಿದುಕೊಂಡ ಟ್ರಂಪ್​? ಎಡವಟ್ಟು ಹೇಳಿಕೆ ನೀಡಿ ಮುಖಭಂಗ
Recommended image2
ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ: ದಿನಪೂರ್ತಿ ಇರಲ್ಲ ಕರೆಂಟ್​ - ನಿಮ್​ ಏರಿಯಾ ಇದ್ಯಾ ಚೆಕ್​ ಮಾಡಿಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved