MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು

ಶಾಸಕ ಎಂ.ಆರ್. ಮಂಜುನಾಥ್ ಅವರ ಪ್ರಯತ್ನದಿಂದ 30 ವರ್ಷಗಳ ರೈತರ ಕನಸಾಗಿದ್ದ ರಾಮನಗುಡ್ಡ ಕೆರೆಗೆ ಕಾವೇರಿ ನೀರು ಹರಿಸಲಾಗಿದೆ. ಈ ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟವೂ ವೃದ್ಧಿಯಾಗುವ ನಿರೀಕ್ಷೆಯಿದೆ.

2 Min read
Author : Kannadaprabha News
Published : Jan 17 2026, 08:29 AM IST
Share this Photo Gallery
  • FB
  • TW
  • Linkdin
  • Whatsapp
17
ಕೆರೆ
Image Credit : MLA MR Manjunath Facebook

ಕೆರೆ

ಚಾಮರಾಜನಗರ: ಹನೂರು ತಾಲೂಕಿಗೆ ಸಿಎಂ ಸಿದ್ದರಾಮಯ್ಯ 25 ಕೋಟಿ ರು. ವಿಶೇಷ ಅನುದಾನ ನೀಡಿದ್ದು 4 ಕೋಟಿ ರು. ಹಣವನ್ನು ಕೆರೆಗಳ ಹೂಳೆತ್ತಲೆಂದೆ ಮೀಸಲಿಸಿರಿದ್ದೇನೆ. ಹಂತಹಂತವಾಗಿ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಿದ್ದು ಹನೂರು ತಾಲೂಕನ್ನು ಹಸನು ಮಾಡಲು ಶ್ರಮವಹಿಸುತ್ತೇನೆ ಎಂದು ಶಾಸಕ ಎಂಆರ್ ಮಂಜುನಾಥ್ ಭರವಸೆ ನೀಡಿದರು.

27
ರಾಮನಗುಡ್ಡ ಕೆರೆ
Image Credit : MLA MR Manjunath Facebook

ರಾಮನಗುಡ್ಡ ಕೆರೆ

ರಾಮನಗುಡ್ಡ ಕೆರೆ ಬಳಿಕ ಭೌಗೋಳಿಕವಾಗಿ ವಿಸ್ತಾರವಾಗಿ ದೊಡ್ಡ ತಾಲೂಕಿನ ಹುಬ್ಬೆಹುಣಸೆ ಜಲಾಶಯ ಹಾಗೂ ಉಡುತೊರೆ ಜಲಾಶಯ ತುಂಬಲು ಡಿಪಿಆರ್ ಸಿದ್ಧಗೊಳ್ಳುತ್ತಿದ್ದು ಹನೂರು ತಾಲೂಕಿನ ರೈತರಿಗೆ ಮೆಗಾ ನೀರಾವರಿ ಯೋಜನೆ ಬಂದಾತಗಲಿದೆ ಎಂದು ತಿಳಿಸಿದರು.

Related Articles

Related image1
ಕೆರೆ ವಿಸ್ತೀರ್ಣ ಆಧರಿಸಿ ಬಫರ್‌ ಜೋನ್‌ ನಿಗದಿ ವಿಧೇಯಕಕ್ಕೆ ಪರಿಷತ್ತಲ್ಲೂ ಅಸ್ತು
Related image2
ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ
37
30 ವರ್ಷಗಳ ರೈತರ ಕಾತರ
Image Credit : MLA MR Manjunath Facebook

30 ವರ್ಷಗಳ ರೈತರ ಕಾತರ

ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ ನೀಗಿದಂತಾಗಿದೆ. ಭೂತಾಯಿಯ ಒಡಲನ್ನು ತುಂಬಲು ಕೊನೆಗೂ ಕಾವೇರಿ ಹರಿದಿದ್ದು 30 ವರ್ಷಗಳ ರೈತರ ಕಾತರ ನನಸಾಗಿದೆ ಎಂದರು.

47
ರಾಮನಗುಡ್ಡ ಕೆರೆ ಅಚ್ಚಕಟ್ಟು ಪ್ರದೇಶ
Image Credit : MLA MR Manjunath Facebook

ರಾಮನಗುಡ್ಡ ಕೆರೆ ಅಚ್ಚಕಟ್ಟು ಪ್ರದೇಶ

ನೀರಿಗಾಗಿ ಸತತ ಒತ್ತಾಯ, ಮನವಿ, ಕನಸು ಕಡೆಗೂ ಈಡೇರಿದ್ದು ಬತ್ತಿದ ನೆಲದಲ್ಲಿ ಗಂಗೆ ಭೋರ್ಗರೆದು ಬಂದಿದ್ದನ್ನು ಕಂಡ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮನಗುಡ್ಡ ಕೆರೆ ಅಚ್ಚಕಟ್ಟು ಪ್ರದೇಶದ ರೈತರು ಹರ್ಷಗೊಂಡಿದ್ದಾರೆ. ಸತತ 30 ವರ್ಷಗಳಿಂದ ಕೆರೆ ತುಂಬಲು ಕಾತರದಿಂದ ಕಾಯುತ್ತಿದ್ದ ಅನ್ನದಾತರ ಕ್ಷಣ ಶುಕ್ರವಾರ ಈಡೇರಿದೆ ಎಂದರು.

57
92 ಎಕರೆ ವಿಸ್ತೀರ್ಣದ ರಾಮನಗುಡ್ಡ ಕೆರೆ
Image Credit : MLA MR Manjunath Facebook

92 ಎಕರೆ ವಿಸ್ತೀರ್ಣದ ರಾಮನಗುಡ್ಡ ಕೆರೆ

2.5 ಕೋಟಿ ರು. ವೆಚ್ಚದಲ್ಲಿ 1.45 ಕಿಮೀ ಪೈಪ್ ಲೈನ್ ನಿರ್ಮಾಣ ಕಾಮಗಾರಿಯನ್ನು ಮೂರುವರೆ ತಿಂಗಳಲ್ಲಿ ಮುಕ್ತಾಯಗೊಂಡು ಇಂದು 92 ಎಕರೆ ವಿಸ್ತೀರ್ಣದ ರಾಮನಗುಡ್ಡ ಕೆರೆಗೆ ನೀರು ಹರಿಸಲು ಚಾಲನೆ ನೀಡಿದ್ದು ಇನ್ನು ಒಂದು ತಿಂಗಳಲ್ಲಿ 98 ಎಕರೆ ವಿಸ್ತೀರ್ಣದ ಕೆರೆ ತುಂಬುವ ನಿರೀಕ್ಷೆ ಇದೆ ಎಂದರು.

67
26 ಚೆಕ್ ಡ್ಯಾಂ
Image Credit : MLA MR Manjunath Facebook

26 ಚೆಕ್ ಡ್ಯಾಂ

ಕಳೆದ 30 ವರ್ಷಗಳ ಯೋಜನೆ ಇದಾಗಿದ್ದು ಕಾವೇರಿ ನದಿಯಿಂದ ನೀರು ತುಂಬಲು ಆರಂಭಿಸಿದ ಹಿನ್ನೆಲೆ 1 ಸಾವಿರಕ್ಕೂ ಅಧಿಕ ಎಕರೆ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಅಭಾವವಿಲ್ಲದೇ ಬೆಳೆ ತೆಗೆಯುವ ನಿರೀಕ್ಷೆ ಗರಿಗೆದರಿದೆ. ರಾಮನಗುಡ್ಡ ಕೆರೆಗೆ ನೀರು ಹರಿಸುವ ಸಲುವಾಗಿ 26 ಚೆಕ್ ಡ್ಯಾಂ ಗಳನ್ನು ಭರ್ತಿ ಮಾಡಿರುವುದರಿಂದ ರೈತರಿಗೆ ಸಾಕಷ್ಟು ಅನೂಕೂಲವಾಗಲಿದೆ ಎಂದರು.

ಇದನ್ನೂ ಓದಿ: ಮೊದಲ ಸಂಕ್ರಾಂತಿ ಆಚರಣೆಗೆಂದು ಮನೆಗೆ ಬಂದ ಅಳಿಯನಿ 290 ವಿವಿಧ ರೀತಿಯ ಖಾದ್ಯ

77
ಕುಣಿದು ಕುಪ್ಪಳಿಸಿದ ರೈತರು
Image Credit : MLA MR Manjunath Facebook

ಕುಣಿದು ಕುಪ್ಪಳಿಸಿದ ರೈತರು

3 ,4, ದಶಕಗಳ ಕನಸು ಈಡೇರಿದ್ದರಿಂದ ಸವಾಲುಗಳ ನಡುವೆ ನೀರು ಹರಿಸಿದ್ದರಿಂದ ಸ್ಥಳೀಯ ಶಾಸಕ ಮಂಜುನಾಥ್ ಅವರನ್ನು ಅಚ್ಚುಕಟ್ಟು ಪ್ರದೇಶದ ರೈತರು ಒಂದೂವರೆ ಕಿಮೀ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸಿದರು.

ಹನೂರು ತಾಲೂಕಿನ ಬೂದು ಬಾಳು ಗ್ರಾಮದ ಬಳಿ ಶಾಸಕ ಎಂಆರ್ ಮಂಜುನಾಥ್ ನೂತನವಾಗಿ ನಿರ್ಮಾಣ ಮಾಡಲಾಗಿರುವ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ರಾಮನಗುಡ್ಡ ಕೆರೆಗೆ ನೀರು ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಚಾಮರಾಜನಗರ
ಸರೋವರ

Latest Videos
Recommended Stories
Recommended image1
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್
Recommended image2
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ
Recommended image3
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಲೋಹದ ಹಕ್ಕಿಯ ಹಾರಾಟ ಆರಂಭ ಯಾವಾಗ?
Related Stories
Recommended image1
ಕೆರೆ ವಿಸ್ತೀರ್ಣ ಆಧರಿಸಿ ಬಫರ್‌ ಜೋನ್‌ ನಿಗದಿ ವಿಧೇಯಕಕ್ಕೆ ಪರಿಷತ್ತಲ್ಲೂ ಅಸ್ತು
Recommended image2
ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved