MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಮದುವೆ ಮನೆಗಳೇ ಟಾರ್ಗೆಟ್; ₹24 ಲಕ್ಷ ನಗದು, 1.7 ಕೆಜಿ ಚಿನ್ನ-ಬೆಳ್ಳಿ ಕಳ್ಳತನ!

ಬೆಂಗಳೂರು ಮದುವೆ ಮನೆಗಳೇ ಟಾರ್ಗೆಟ್; ₹24 ಲಕ್ಷ ನಗದು, 1.7 ಕೆಜಿ ಚಿನ್ನ-ಬೆಳ್ಳಿ ಕಳ್ಳತನ!

ಬೆಂಗಳೂರಿನಲ್ಲಿ ಮನೆಯವರು ಮದುವೆಗೆ ತೆರಳಿದ್ದ ವೇಳೆ ಕಳ್ಳರು 24 ಲಕ್ಷ ರೂಪಾಯಿ, 1.5 ಕೆಜಿ ಚಿನ್ನಾಭರಣ ಕದ್ದಿದ್ದಾರೆ. ಪೆಪ್ಸಿ ರಘು ಸಹಚರರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.

1 Min read
Sathish Kumar KH
Published : Jun 17 2025, 11:25 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಬೆಂಗಳೂರಿನಲ್ಲಿ ಮದುವೆಗೆಂದು ಮನೆ ಬಿಟ್ಟು ಹೋಗಿದ್ದನ್ನು ಅವಕಾಶವನ್ನಾಗಿ ಪರಿಗಣಿಸಿ, ಕಳ್ಳರು ಟೆರಸ್ ಮೂಲಕ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೆಪ್ಸಿ ರಘು ಸಹಚರರನ್ನು ಪೊಲೀಸರು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿ ಪೆಪ್ಸಿ ರಘು ಪರಾರಿಯಾಗಿದ್ದಾನೆ.

27
Image Credit : Asianet News

ಪೆಪ್ಸಿ ರಘು ತಂಡದಿಂದ ಕಳ್ಳತನ:

ಜೈಲಿನಲ್ಲಿ ಪರಿಚಯವಾದ ಶಿಷ್ಯರನ್ನು ಬಳಸಿಕೊಂಡು ಮನೆಗಳ್ಳತನ ಮಾಡಿಸುತ್ತಿದ್ದ ಕುಖ್ಯಾತ ಮನೆಗಳ್ಳ ಪೆಪ್ಸಿ ರಘು, ಇನ್ಸ್ಟಾಗ್ರಾಮ್‌ನ ಸಂದೇಶಗಳ ಮೂಲಕ ಕಳ್ಳತನಕ್ಕೆ ನಿರ್ದೇಶನ ನೀಡುತ್ತಿದ್ದ ಎನ್ನಲಾಗಿದೆ. ಪೆಪ್ಸಿ ರಘು ತನ್ನ ಸಹಚರರಿಗೆ ಯಾವ ಮನೆಯಲ್ಲಿ ಜನರಿಲ್ಲ ಎಂಬ ಮಾಹಿತಿ ನೀಡುತ್ತಿದ್ದನು.  ನಂತರ ಶಿಷ್ಯಂದಿರು ಮನೆಗೆ ನುಗ್ಗಿ ಕಳ್ಳತನ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದನು.

Related Articles

Related image1
ಮನೆಯವರೆಲ್ಲ ಅಜ್ಜಿ ತಿಥಿ ಕಾರ್ಯದಲ್ಲಿದ್ದಾಗ ಚಿನ್ನ ಕಳ್ಳತನ, ಬಂಗಾರವಿಲ್ಲದೆ ಮಗಳ ಮದುವೆ ಮುಂದೂಡಿಕೆ!
Related image2
ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು ₹11.5 ಲಕ್ಷ ಕಳ್ಳತನ
37
Image Credit : Asianet News

ವಿಶ್ವನಾಥ್ ಮನೆಗೆ ನುಗ್ಗಿದ ದಾಳಿ:

ಕತ್ರಿಗುಪ್ಪೆ ನಿವಾಸಿ ವಿಶ್ವನಾಥ್ ಅವರ ಮನೆಯವರು ಮದುವೆಗಾಗಿ ಚಿಕ್ಕಮಗಳೂರಿಗೆ ತೆರಳಿದ ಸಂದರ್ಭದಲ್ಲಿ ಮೇ 21ರಂದು ರಾತ್ರಿ ಈ ತಂಡ ದಾಳಿ ನಡೆಸಿದೆ. ಟೆರಸ್ ಮೂಲಕ ನುಗ್ಗಿದ ಆರೋಪಿಗಳು ಮನೆಯೊಳಗೆ ನುಗ್ಗಿ ₹24 ಲಕ್ಷ ನಗದು, 175 ಗ್ರಾಂ ಚಿನ್ನಾಭರಣ ಮತ್ತು ಸುಮಾರು 1.5 ಕೆಜಿ ಬೆಳ್ಳಿಯ ನಾಣ್ಯಗಳನ್ನು ಕದ್ದಿದ್ದಾರೆ.

47
Image Credit : Asianet News

ಮೋಜು-ಮಸ್ತಿಗಾಗಿ ಕದ್ದ ಹಣ ಬಳಕೆ:

ಆರೋಪಿಗಳು ಕದ್ದ ಹಣವನ್ನು ಗೋವಾದಲ್ಲಿ ಮೋಜು ಮಸ್ತಿಗಾಗಿ ಹಾಗೂ ಕ್ಯಾಸಿನೊಗಳಲ್ಲಿ ಬಳಸಿದ್ದು, ಕೆಲವೊಂದು ಭಾಗವನ್ನು ಹುಡುಗಿಯರ ಮೇಲೆ ಖರ್ಚು ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

57
Image Credit : Asianet News

ಪೆಪ್ಸಿ ರಘು ನಾಪತ್ತೆ:

ಪ್ರಮುಖ ಆರೋಪಿ ಪೆಪ್ಸಿ ರಘು ಅಲಿಯಾಸ್ ರಘುವನಹಳ್ಳಿ ರಘು ಈವರೆಗೂ ಪೊಲೀಸರಿಂದ ತಪ್ಪಸಿಕೊಂಡಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ. ಈತನ ಬಂಧನಕ್ಕೆ ನಿರಂತರ ಕಾರ್ಯಾಚರಣೆ ಮುಂದುವರಿದಿದೆ.

67
Image Credit : Asianet News

ಮೌಲ್ಯದ ವಸ್ತುಗಳು ವಶ:

ಮೂವರು ಬಂಧಿತರಿಂದ ₹9 ಲಕ್ಷ ನಗದು, 175 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ ನಾಣ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

77
Image Credit : Asianet News

ಬಂಧಿತ ಆರೋಪಿಗಳು:

ಶಿವಪ್ರಸಾದ್, ಲಿಖಿತ್ ಅಲಿಯಾಸ್ ಕಡ್ಡಿ ಹಾಗೂ ಜಯದೀಪ್ ಎಂಬ ಮೂವರು ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ. ಈ ಮೂವರು ಪೆಪ್ಸಿ ರಘು ಸಹಚರರು ಎನ್ನಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಕ್ರೈಮ್ ನ್ಯೂಸ್
ಮದುವೆ
ಬೆಂಗಳೂರು ನಗರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved