MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿಯನ್ನು ಪರಲೋಕಕ್ಕೆ ಕಳಿಸಲು ಪ್ಲಾನ್! ಆಮೇಲೆ ಸಿನಿಮಾ ಕಥೆ ಕಟ್ಟಿದ ಕಿಲಾಡಿ ಲೇಡಿ

ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿಯನ್ನು ಪರಲೋಕಕ್ಕೆ ಕಳಿಸಲು ಪ್ಲಾನ್! ಆಮೇಲೆ ಸಿನಿಮಾ ಕಥೆ ಕಟ್ಟಿದ ಕಿಲಾಡಿ ಲೇಡಿ

ತೆಲಂಗಾಣ: ಈಗ ಕೌಟುಂಬಿಕ ಕಲಹಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇವೆ. ಇವೆಲ್ಲದರ ನಡುವೆ ಇಲ್ಲೊಬ್ಬಳು ಪಾಪಿ ಪತ್ನಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಪತಿಯನ್ನು ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪರಲೋಕಕ್ಕೆ ಕಳಿಸಿದ್ದಾಳೆ. ಏನಿದು ಘಟನೆ ಯಾಕೆ ಹೀಗೆ ಮಾಡಿದ್ಲು ಅನ್ನೋದನ್ನು ನೋಡೋಣ ಬನ್ನಿ. 

2 Min read
Author : Naveen Kodase
Published : Feb 20 2026, 02:39 PM IST
Share this Photo Gallery
  • FB
  • TW
  • Linkdin
  • Whatsapp
16
ಪತಿಯ ಕಾಟ, ಚಟ್ಟ ಕಟ್ಟಿದ ಪತ್ನಿ
Image Credit : Instagram

ಪತಿಯ ಕಾಟ, ಚಟ್ಟ ಕಟ್ಟಿದ ಪತ್ನಿ

ಇತ್ತೀಚೆಗೆ ವಿವಾಹೇತರ ಅಕ್ರಮ ಸಂಬಂಧಕ್ಕೆ ಸುಂದರ ಕುಟುಂಬಗಳು ನಾಶವಾಗುವ ಸುದ್ದಿಗಳು ದೇಶಾದ್ಯಂತ ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇವೆ. ಇದಕ್ಕಾಗಿ ಒಬ್ಬರನ್ನು ಸಾಯಿಸಿಯಾದರೂ ಮತ್ತೊಬ್ಬರ ಜತೆ ಸೇರಲು ತಯಾರಾಗಿರುತ್ತಾರೆ. ಆದರೆ ಅಪರಾಧಿಗಳು ಎಷ್ಟೇ ಚಾಲಾಕಿಗಳಾದರೂ ಪೊಲೀಸರು ಕೊ*ಲೆಗಾರರನ್ನು ಪತ್ತೆ ಹಚ್ಚದೇ ಬಿಡುವುದಿಲ್ಲ.

26
ಪತಿಯ ಕಿರಿಕಿರಿ ತಾಳಲಾರದೇ ಕೊ*ಲೆ
Image Credit : Asianet News

ಪತಿಯ ಕಿರಿಕಿರಿ ತಾಳಲಾರದೇ ಕೊ*ಲೆ

ಇದೀಗ ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಒಂದು ಇಂಟ್ರೆಸ್ಟಿಂಗ್ ಕೊ*ಲೆ ಬೆಳಕಿಗೆ ಬಂದಿದೆ. ಮೌನಿಕ ಎನ್ನುವ ಪತ್ನಿಯು ತನ್ನ ಗಂಡನ ಕಿರಿಕಿರಿ ತಾಳಲಾರದೇ ಮಟನ್ ಗ್ರೇವಿಯಲ್ಲಿ ಬರೋಬ್ಬರಿ 15 ವಯಾಗ್ರಾ ಮಾತ್ರೆಗಳನ್ನು ಬೆರೆಸಿ ಪತಿ ಸುರೇಶ್ ಅವರನ್ನು ಕೊ*ಲೆ ಮಾಡಲು ಪ್ರಯತ್ನಿಸಿದ್ದಾಳೆ. ಅದು ವಿಫಲವಾದಾಗ ಮತ್ತೊಂದು ಪ್ಲಾನ್ ಮಾಡಿದ್ದಾಳೆ.

Related Articles

Related image1
ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿ ಕನಸು ಬಿದ್ರೆ ಸಾಕು, ರಾತ್ರೋರಾತ್ರಿ ನಿಮ್ಮ ಲೈಫೇ ಚೇಂಜ್ ಆಗುತ್ತೆ!
Related image2
Now Playing
40 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
36
ಮದ್ಯ ವ್ಯಸನಿಯಾಗಿ ಬದಲಾದ ಸುರೇಶ
Image Credit : Social Medis

ಮದ್ಯ ವ್ಯಸನಿಯಾಗಿ ಬದಲಾದ ಸುರೇಶ

ಮೌನಿಕ ಹಾಗೂ ಸುರೇಶ್ ಸುಂದರ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಸಹವಾಸ ದೋಷದಿಂದ ಸುರೇಶ್ ಮದ್ಯ ವ್ಯಸನಿಯಾಗಿಬಿಟ್ಟರು. ಕುಡಿತದ ಬಳಿಕ ಹೆಂಡತಿ ಮೌನಿಕಗೆ ಇನ್ನಿಲ್ಲದಂತೆ ನಿಂದಿಸುವುದು ಹಾಗೂ ಪತ್ನಿಯ ಹಣವನ್ನೂ ಕಸಿದುಕೊಂಡು ಹೋಗಿ ಎಣ್ಣೆ ಹೊಡೆಯಲಾರಂಭಿಸಿದ್ದ.

46
ಪತಿಯನ್ನು ಪರಲೋಕಕ್ಕೆ ಕಳಿಸಲು ಮಾಸ್ಟರ್ ಪ್ಲಾನ್
Image Credit : google

ಪತಿಯನ್ನು ಪರಲೋಕಕ್ಕೆ ಕಳಿಸಲು ಮಾಸ್ಟರ್ ಪ್ಲಾನ್

ಇದನ್ನೆಲ್ಲ ನೋಡಿ ರೋಸಿ ಹೋದ ಮೌನಿಕ, ಕೊನೆಗೆ ಯಾರಿಗೂ ಅನುಮಾನ ಬಾರದಂತೆ ಸುರೇಶನನ್ನು ಪರಲೋಕಕ್ಕೆ ಕಳಿಸಲು ಮಾಸ್ಟರ್ ಪ್ಲಾನ್ ಮಾಡಿದಳು. ಇದಕ್ಕೆ ಆಕೆಯ ಗೆಳೆಯ ಸಾಥ್ ಕೊಟ್ಟ. ಮೆಡಿಕಲ್ ಮಾಲೀಕ ಮಟನ್‌ನಲ್ಲಿ 15 ವಯಾಗ್ರಾ ಮಾತ್ರೆ ಸೇರಿಸಿ ಊಟ ಹಾಕುವಂತೆ ಐಡಿಯಾ ಕೊಟ್ಟ. ಆದರೆ ಸುರೇಶ ಮಟನ್ ವಾಸನೆ ಬದಲಾಗಿದ್ದನ್ನು ಕಂಡು ಹಿಡಿದ. ಹೀಗಾಗಿ ಈ ಪ್ಲಾನ್ ಫೇಲ್ ಆಯ್ತು.

56
ಸಿನಿಮಾ ಕಥೆ ಕಟ್ಟಿದ್ದ ಮೌನಿಕ
Image Credit : Asianet News

ಸಿನಿಮಾ ಕಥೆ ಕಟ್ಟಿದ್ದ ಮೌನಿಕ

ಇದಾದ ಬಳಿಕ ಕಳೆದ ಸೆಪ್ಟೆಂಬರ್ 17, 2025ರಂದು ಮೌನಿಕ ತನ್ನ ಗೆಳೆಯನ ಜತೆಗೂಡಿ ಸುರೇಶನಿಗೆ ಮದ್ಯದಲ್ಲಿ ಬಿಪಿ, ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪುವಂತೆ ಮಾಡಿದರು. ಆ ಬಳಿಕ ಮೌನಿಕಳ ಗೆಳೆಯ ಹಾಗೂ ಮತ್ತವರ ಸಹಚರರು ಕತ್ತುಹಿಸುಕಿ ಕೊ*ಲೆ ಮಾಡಿದ್ದರು. ಆ ಮೇಲೆ ಪೊಲೀಸರಿಗೆ ಲೈಂ*ಗಿಕ ಕ್ರಿಯೆ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕಥೆ ಕಟ್ಟಿದ್ದಳು.

66
ಸಿಕ್ಕಿಬಿದ್ದಿದ್ದು ಹೇಗೆ?
Image Credit : Asianet News

ಸಿಕ್ಕಿಬಿದ್ದಿದ್ದು ಹೇಗೆ?

ಮೊದಲಿಗೆ ಇದನ್ನು ಸಹಜ ಸಾವು ಎಂದೇ ಭಾವಿಸಲಾಗಿತ್ತು. ಆದರೆ ಆಕೆಯ ಕುಟುಂಬಸ್ಥರು ಸುರೇಶನಿಗೆ ಮಾಡಿಸಲಾಗಿದ್ದ ಇನ್‌ಶ್ಯೂರೆನ್ಸ್ ಕ್ಲೈಮ್ ಮಾಡಲು ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಮೌನಿಕ ಮೇಲೆ ಒತ್ತಡ ಹೇರಿದರು. ಆಗ ಮರಣೋತ್ತರ ಪರೀಕ್ಷೆಯಲ್ಲಿ ಸುರೇಶನ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿತ್ತು. ಆಗ ಹೆಚ್ಚಿನ ರೀತಿಯಲ್ಲಿ ತನಿಖೆ ಮಾಡಿದಾಗ ಮೌನಿಕ, ತಾವು ಗಂಡನನ್ನು ಸಾಯಿಸಿರುವುದು ಒಪ್ಪಿಕೊಂಡಿದ್ದಾಳೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರೈಮ್ ನ್ಯೂಸ್
ತೆಲಂಗಾಣ
ಸಂಬಂಧಗಳು
ಅಕ್ರಮ ಸಂಬಂಧ

Latest Videos
Recommended Stories
Recommended image1
ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ ಜಾಬ್ ಸೇಫಾ?IMF ಮುಖ್ಯಸ್ಥೆ ಸ್ಫೋಟಕ ಭವಿಷ್ಯ
Recommended image2
ಸೂಪರ್ ಸ್ಟಾರ್ ರಣವೀರ್ ಸಿಂಗ್‌ಗೆ ಎದುರಾಗಿದೆ ಆತಂಕಕಾರಿ ಜೀವ ಬೆದರಿಕೆ.. ಮುಂದೇನು ಈ ನಟನ ಗತಿ?
Recommended image3
ಪೆಟ್ರೋಲ್ ತುಂಬಿಸುವಾಗ ಸಿಗರೇಟ್ ಎಳಿಬೇಡ ಎಂದಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಹುಚ್ಚ..!
Related Stories
Recommended image1
ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿ ಕನಸು ಬಿದ್ರೆ ಸಾಕು, ರಾತ್ರೋರಾತ್ರಿ ನಿಮ್ಮ ಲೈಫೇ ಚೇಂಜ್ ಆಗುತ್ತೆ!
Recommended image2
Now Playing
40 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved