MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಒಂದೇ ಒಂದು ಪದದಿಂದ ಜನರ ಮನಸ್ಸನ್ನು ಬದಲಿಸಿದ Thalapathy Vijay; ಆಡಳಿತದಲ್ಲಿದ್ದ ಪಕ್ಷಕ್ಕೆ ಪೆಟ್ಟು ಕೊಟ್ಟ ನಟ

ಒಂದೇ ಒಂದು ಪದದಿಂದ ಜನರ ಮನಸ್ಸನ್ನು ಬದಲಿಸಿದ Thalapathy Vijay; ಆಡಳಿತದಲ್ಲಿದ್ದ ಪಕ್ಷಕ್ಕೆ ಪೆಟ್ಟು ಕೊಟ್ಟ ನಟ

Thalapathy Vijay: ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಒಂದೇ ಒಂದು ಪದದಿಂದ ಜನರ ಮತವನ್ನು ತಮ್ಮತ್ತ ಸೆಳೆಯುವ ಹಾಗೆ ಮಾಡಿದ್ದರು. ವಿಜಯ್ ಅವರ ಈ ಸೌಮ್ಯ ನಡೆ ಎಲ್ಲರನ್ನು ಆಕರ್ಷಿಸಿದ್ದು, ಡಿಎಂಕೆಯ ಆಕ್ರಮಣಕಾರಿ ರಾಜಕೀಯ ಶೈಲಿಗೆ ತಣ್ಣೀರೆರಚಿದೆ. 

2 Min read
Author : Padmashree Bhat
Published : May 04 2026, 01:54 PM IST
Share this Photo Gallery
  • FB
  • TW
  • Linkdin
  • Whatsapp
15
ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ
Image Credit : ANI

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ

ತಮಿಳುನಾಡು ರಾಜಕೀಯ ಅಂದ್ರೆ ಬರೀ ಬೈಗುಳ, ವೈಯಕ್ತಿಕ ನಿಂದನೆ ಅನ್ನೋ ಮಾತು ಸಾಮಾನ್ಯ. ಎದುರಾಳಿಗಳನ್ನು ಏಕವಚನದಲ್ಲಿ ಬೈಯುವುದು, ಕೀಳಾಗಿ ಟೀಕಿಸುವುದು ಅಲ್ಲಿನ ರಾಜಕೀಯದ ಭಾಗವಾಗಿದೆ. ಆದರೆ, 'ತಮಿಳಗ ವೆಟ್ರಿ ಕಳಗಂ' ಪಕ್ಷದ ನಾಯಕ ವಿಜಯ್, ಈ ಹಳೆಯ ರಾಜಕೀಯ ಶೈಲಿಯನ್ನು ಮುರಿದಿದ್ದಾರೆ. ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು 'ಸ್ಟಾಲಿನ್ ಅಂಕಲ್' ಎಂದು ಕರೆದಿದ್ದು, ಇದೊಂದು ಗೌರವದ ಪದದಂತೆ ಕಂಡರೂ, ಇದರ ಹಿಂದಿನ ರಾಜಕೀಯ ಲೆಕ್ಕಾಚಾರ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಕಂಗೆಡಿಸಿದೆ.
25
ಡಿಎಂಕೆಯ 'ದೊಡ್ಡಣ್ಣ' ಇಮೇಜ್‌ಗೆ ಪೆಟ್ಟು
Image Credit : PTI

ಡಿಎಂಕೆಯ 'ದೊಡ್ಡಣ್ಣ' ಇಮೇಜ್‌ಗೆ ಪೆಟ್ಟು

ಡಿಎಂಕೆ ಯಾವಾಗಲೂ ತನ್ನನ್ನು ಒಂದು ದೊಡ್ಡ ದ್ರಾವಿಡ ಶಕ್ತಿ, ಯಾರಿಂದಲೂ ಅಲುಗಾಡಿಸಲಾಗದ ಪಕ್ಷ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ, ವಿಜಯ್ ತುಂಬಾ ಸರಳವಾಗಿ 'ಸ್ಟಾಲಿನ್ ಅಂಕಲ್' ಎಂದು ಕರೆದು, ಡಿಎಂಕೆಯ ಆ 'ರಾಜಕೀಯ ಇಮೇಜ್' ಅನ್ನು ಸಾಮಾನ್ಯಗೊಳಿಸಿದ್ದಾರೆ. 'ನಾವು ಆಡಳಿತದಲ್ಲಿದ್ದೇವೆ, ನಾವು ದೊಡ್ಡವರು' ಎಂಬ ಡಿಎಂಕೆಯ ಗತ್ತಿಗೆ, ಒಬ್ಬ ತಮ್ಮ ಅಥವಾ ಮಗನ ಸ್ಥಾನದಲ್ಲಿ ನಿಂತು ವಿಜಯ್ ಪ್ರಶ್ನಿಸಿದ್ದು ಜನರ ಗಮನ ಸೆಳೆದಿದೆ. ಇದು ಡಿಎಂಕೆಯ ಆಕ್ರಮಣಕಾರಿ ರಾಜಕೀಯವನ್ನು ಮಂಕಾಗಿಸುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.

Related Articles

Related image1
Thalapathy Vijay: ಕ್ರಿಶ್ಚಿಯನ್‌ ಆದ್ರೂ ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ್ರು, ಹಿಂದೂ ದೇವರ ಆರಾಧಿಸೋ ವಿಜಯ್‌!
Related image2
Election 2026: ದಳಪತಿ ವಿಜಯ್‌, ಮಮತಾ ಬ್ಯಾನರ್ಜಿ, ಪಳನಿಸ್ವಾಮಿ, ಸ್ಟಾಲಿನ್‌ ಜಾತಕ ಹೇಗಿದೆ? ಯಾರು ಗೆಲ್ತಾರೆ?
35
ಎಲ್ಲ ವರ್ಗದವರನ್ನು ಸೆಳೆದ 'ಸಂಬಂಧ'
Image Credit : X/ TVKPartyHQ

ಎಲ್ಲ ವರ್ಗದವರನ್ನು ಸೆಳೆದ 'ಸಂಬಂಧ'

ರಾಜಕೀಯದಲ್ಲಿ ವಿಜಯ್ ಬಳಸಿದ ಈ ಪದ ದೊಡ್ಡ ಮ್ಯಾಜಿಕ್ ಮಾಡಿದೆ. ಅದರಲ್ಲೂ ಯುವಜನರ ಮೇಲೆ ಇದು ಭಾರಿ ಪರಿಣಾಮ ಬೀರಿದೆ. 'ರಾಜಕಾರಣಿಗಳು ಅಂದ್ರೆ ಬರೀ ಜಗಳ ಆಡೋರು' ಎಂಬ ಭಾವನೆಯನ್ನು ಬದಲಿಸಿ, ವಿಜಯ್ ತಮ್ಮನ್ನು ಒಂದು ಕುಟುಂಬದ ಸದಸ್ಯನಂತೆ ಬಿಂಬಿಸಿಕೊಂಡಿದ್ದಾರೆ. ಯುವಕರು: ಇಂದಿನ ಪೀಳಿಗೆಗೆ ಹಳೆಯ ಕಾಲದ ಡೈಲಾಗ್‌ಗಳಿಗಿಂತ, ಸದ್ಯದ ಟ್ರೆಂಡ್‌ಗೆ ತಕ್ಕಂತೆ ಮಾತನಾಡುವ ನಾಯಕರೇ ಇಷ್ಟ. 

'ಅಂಕಲ್' ಎಂಬ ಪದ ಅವರನ್ನು ವಿಜಯ್ ಜೊತೆ ಸುಲಭವಾಗಿ ಕನೆಕ್ಟ್ ಮಾಡಿದೆ. ಮಹಿಳೆಯರು: ಡಿಎಂಕೆ ಮೇಲೆ ಮುನಿಸಿಕೊಂಡಿದ್ದ ಮಹಿಳಾ ಮತದಾರರಿಗೆ, ವಿಜಯ್ ಅವರ ಈ ಸೌಮ್ಯ ನಡೆ ಒಂದು ಸುರಕ್ಷತೆಯ ಭಾವನೆ ನೀಡಿದೆ. ಹೀಗೆ ಒಂದೇ ಪದದಿಂದ ವಿಜಯ್, ತಟಸ್ಥ ಮತದಾರರಿಂದ ಹಿಡಿದು ಗೃಹಿಣಿಯರವರೆಗೂ ಎಲ್ಲರನ್ನೂ ತಮ್ಮತ್ತ ಸೆಳೆದಿದ್ದಾರೆ.

45
'ಸ್ಟಾಲಿನ್ ಅಂಕಲ್' - ಒಂದು ಸೌಮ್ಯ ಅಸ್ತ್ರ
Image Credit : X/ TVKPartyHQ

'ಸ್ಟಾಲಿನ್ ಅಂಕಲ್' - ಒಂದು ಸೌಮ್ಯ ಅಸ್ತ್ರ

ವಿಜಯ್ ಈ ಪದವನ್ನು ಬಳಸುವ ಮೂಲಕ, ಡಿಎಂಕೆ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಕಾರಿಲ್ಲ. ಆದರೆ, 'ಅಂಕಲ್.. ನೀವು ಇದನ್ನೆಲ್ಲಾ ಮಾಡಿಲ್ಲವಲ್ಲ' ಎಂದು ಅವರು ಹಕ್ಕಿನಿಂದ ಕೇಳಿದ್ದು, ಡಿಎಂಕೆ ನಾಯಕರಿಗೆ ಉತ್ತರ ಕೊಡಲಾಗದ ಧರ್ಮಸಂಕಟ ತಂದಿಟ್ಟಿದೆ. 

ಒಬ್ಬರನ್ನು ಬೈದರೆ ಪ್ರತ್ಯುತ್ತರ ಕೊಡಬಹುದು, ಆದರೆ ಒಬ್ಬ ವ್ಯಕ್ತಿ ಗೌರವದಿಂದ ಮತ್ತು ಹಕ್ಕಿನಿಂದ ಪ್ರಶ್ನಿಸಿದರೆ ಉತ್ತರ ಕೊಡುವುದು ಕಷ್ಟ. ಇದೇ ಸಂಕಷ್ಟದಲ್ಲಿ ಡಿಎಂಕೆ ಈಗ ಸಿಲುಕಿದೆ. ವಿಜಯ್ ಅವರ ಈ ಒಂದು ಮಾತು, ಡಿಎಂಕೆಯ ಹಲವು ವರ್ಷಗಳ ರಾಜಕೀಯ ಅನುಭವವನ್ನೇ ಒಂದು ಕ್ಷಣ ಯೋಚಿಸುವಂತೆ ಮಾಡಿದೆ.

55
ಹೊಸ ರಾಜಕೀಯದ ಆರಂಭ
Image Credit : Asianet News

ಹೊಸ ರಾಜಕೀಯದ ಆರಂಭ

ವಿಜಯ್ ತಮಿಳುನಾಡು ರಾಜಕೀಯಕ್ಕೆ ಕಾಲಿಟ್ಟ ಕೂಡಲೇ, ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನು ಒಂದು ಸೌಮ್ಯ ಪದದ ಮೂಲಕ ರಕ್ಷಣಾತ್ಮಕ ಸ್ಥಿತಿಗೆ ತಳ್ಳಿದ್ದು ಅವರ ರಾಜಕೀಯ ಪ್ರಬುದ್ಧತೆಯನ್ನು ತೋರಿಸುತ್ತದೆ. 'ಸ್ಟಾಲಿನ್ ಅಂಕಲ್' ಎಂಬ ಆ ಒಂದು ಮಾತು, ಮುಂಬರುವ ಚುನಾವಣೆಗಳಲ್ಲಿ ಒಂದು ದೊಡ್ಡ ಬದಲಾವಣೆಯ ಬೀಜ ಬಿತ್ತಿದೆ. 

ಜನರನ್ನು ಪ್ರೀತಿಯಿಂದ ಒಂದುಗೂಡಿಸುವುದು, ಅದೇ ಸಮಯದಲ್ಲಿ ಸರ್ಕಾರದ ತಪ್ಪುಗಳನ್ನು ಹಕ್ಕಿನಿಂದ ತೋರಿಸುವುದೇ ಒಬ್ಬ ಉತ್ತಮ ನಾಯಕನ ಲಕ್ಷಣ ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ಮುಂದಿನ ದಿನಗಳು ಈ 'ಪ್ರೀತಿಯ ರಾಜಕೀಯ' ಮತ್ತು 'ಅಧಿಕಾರದ ರಾಜಕೀಯ' ನಡುವಿನ ರೋಚಕ ಸ್ಪರ್ಧೆಗೆ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ದಳಪತಿ ವಿಜಯ್
ಮನರಂಜನಾ ಸುದ್ದಿ
ರಾಜಕೀಯ ಪಕ್ಷ
ರಾಜಕೀಯ ಸುದ್ದಿ
ತಮಿಳುನಾಡು

Latest Videos
Recommended Stories
Recommended image1
ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ, ಸನ್ ಟಿವಿ ಷೇರುಗಳು ದಿಢೀರ್ ಕುಸಿತ, ಕಾರಣವಾಗಿದ್ದು ಈ ಪಕ್ಷ!
Recommended image2
ತ್ರಿಶಾಳಿಂದಲೇ ವಿಜಯ್‌ ಸಂಸಾರದಲ್ಲಿ ಬಿರುಕು; Thalapathy Vijay ಗೆಲ್ಲುತ್ತಲೇ ದಳಪತಿ ಮನೆಗೆ ಬಂದ ನಟಿ!
Recommended image3
ಈಗ ತಮಿಳುನಾಡಿನ ಬೀದಿಗಳಲ್ಲಿ ದಳಪತಿ ವಿಜಯ್ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಗೈದ ಪಂಚ್ ಡೈಲಾಗ್‌ಗಳ ಅಬ್ಬರ!
Related Stories
Recommended image1
Thalapathy Vijay: ಕ್ರಿಶ್ಚಿಯನ್‌ ಆದ್ರೂ ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ್ರು, ಹಿಂದೂ ದೇವರ ಆರಾಧಿಸೋ ವಿಜಯ್‌!
Recommended image2
Election 2026: ದಳಪತಿ ವಿಜಯ್‌, ಮಮತಾ ಬ್ಯಾನರ್ಜಿ, ಪಳನಿಸ್ವಾಮಿ, ಸ್ಟಾಲಿನ್‌ ಜಾತಕ ಹೇಗಿದೆ? ಯಾರು ಗೆಲ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved