MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • Expensive Plant: ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?

Expensive Plant: ಚಿನ್ನಕ್ಕಿಂತಲೂ ದುಬಾರಿ ಈ ಗಿಡ, ಎಲ್ಲಿ ಸಿಗುತ್ತೆ? ಎಷ್ಟಿದೆ ಬೆಲೆ?

ಹಿಮಾಲಯದಲ್ಲಿ ಸಿಗುವ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಮಲೇರಿಯಾ, ಕಣ್ಣಿನ ಸಮಸ್ಯೆಗಳಂತಹ ಹಲವು ರೋಗಗಳಿಗೆ ರಾಮಬಾಣವಾಗಿರುವ ಈ ಗಿಡವು, ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ ಇಂದು ಅಳಿವಿನಂಚಿನಲ್ಲಿದೆ.

2 Min read
Author : Mahmad Rafik
Published : Aug 12 2026, 02:58 PM IST
Share this Photo Gallery
  • FB
  • TW
  • Linkdin
  • Whatsapp
15
ಬೆಲೆಬಾಳುವ ಗಿಡ ಮೂಲಿಕೆ
Image Credit : Gemini

ಬೆಲೆಬಾಳುವ ಗಿಡ ಮೂಲಿಕೆ

ಜಗತ್ತಿನಲ್ಲೇ ಅತ್ಯಂತ ಬೆಲೆಬಾಳೋ ಲೋಹ ಅಂದ್ರೆ ಚಿನ್ನ ಅಂತ ನಮಗೆಲ್ಲಾ ಗೊತ್ತು. ಆದ್ರೆ, ನಮ್ಮ ದೇಶದಲ್ಲಿ ಚಿನ್ನಕ್ಕಿಂತ ಸಾವಿರ ಪಟ್ಟು ಹೆಚ್ಚು ಬೆಲೆಬಾಳೋ ಒಂದು ಗಿಡ ಇದೆ ಅನ್ನೋದು ನಿಮಗೆ ಗೊತ್ತಾ? ಈ ಗಿಡದ ಎಲೆಗಳಿಗೆ ಸಾವಿರಾರು ರೂಪಾಯಿ ಬೆಲೆಯಿದೆ. ಚೀನಾ ಕೂಡ ಈ ಸಸ್ಯವನ್ನು ಅಕ್ರಮವಾಗಿ ಕದ್ದು, ಮಾರಾಟ ಮಾಡುತ್ತಿದೆ. ಆ ಗಿಡದ ಹೆಸರೇ 'ಮಿಶ್ಮಿ ತೀತಾ'. ಅಷ್ಟಕ್ಕೂ ಈ ಗಿಡ ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು? ಇದಕ್ಕೆ ಯಾಕಿಷ್ಟು ಬೆಲೆ? ಆ ವಿವರ ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೆಲೆಬಾಳುವ ಔಷಧೀಯ ಸಸ್ಯ
Image Credit : Gemini

ಬೆಲೆಬಾಳುವ ಔಷಧೀಯ ಸಸ್ಯ

ಮಿಶ್ಮಿ ತೀತಾ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಇದರ ವೈಜ್ಞಾನಿಕ ಹೆಸರು 'ಕಾಪ್ಟಿಸ್ ತೀತಾ'. ಇದು ನಮಗೆ ಹಿಮಾಲಯದಲ್ಲಿ ಮಾತ್ರ ಸಿಗುತ್ತದೆ. ಇದರ ಬೇರುಗಳು ತುಂಬಾ ಕಹಿಯಾಗಿರುತ್ತವೆ. ಈಶಾನ್ಯ ಭಾರತದ ಭಾಷೆಗಳಲ್ಲಿ 'ತೀತಾ' ಅಂದ್ರೆ ಕಹಿ ಅಂತ ಅರ್ಥ. ಅದಕ್ಕೇ ಇದಕ್ಕೆ ಈ ಹೆಸರು ಬಂದಿದೆ.

Related Articles

Related image1
14 ಲಕ್ಷ ಸಂಬಳವಿದ್ದರೂ ಇನ್ಫೋಸಿಸ್ ನೀಡಿದ್ದು ಎಷ್ಟು ಗೊತ್ತಾ? ಟೆಕ್ಕಿ ಕೊಟ್ಟ ರಿಲ್ಯಾಕ್ಸ್ಡ್ 'ರಿವೇಂಜ್' ಈಗ ವೈರಲ್!
Related image2
14 ಮಕ್ಕಳನ್ನು ಒಟ್ಟಿಗೇ ಮದುವೆ ಮಾಡಿದ ರೈತ? ವೈರಲ್​ ವಿಡಿಯೋ ಹಿಂದಿದೆ ಕುತೂಹಲದ ಸ್ಟೋರಿ
35
ಯಾವ ರೋಗಗಳಿಗೆ ರಾಮಬಾಣ?
Image Credit : Gemini

ಯಾವ ರೋಗಗಳಿಗೆ ರಾಮಬಾಣ?

ಸಾಂಪ್ರದಾಯಿಕ ಆಯುರ್ವೇದ, ಚೀನೀ ವೈದ್ಯ ಪದ್ಧತಿ ಮತ್ತು ಈಶಾನ್ಯ ಭಾರತದ ಬುಡಕಟ್ಟು ವೈದ್ಯಕೀಯದಲ್ಲಿ ಇದನ್ನು ಹಲವು ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯದ ಎಲೆಗಳಲ್ಲಿ 'ಬರ್ಬೆರಿನ್' ಎಂಬ ಪ್ರಮುಖ ರಾಸಾಯನಿಕವಿದೆ. ಇದರಿಂದಾಗಿ ಮಲೇರಿಯಾ, ಕಣ್ಣಿನ ಸಮಸ್ಯೆಗಳು, ಹೊಟ್ಟೆಯ ತೊಂದರೆಗಳು, ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕುಗಳನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

45
ಎಲ್ಲಿ ಸಿಗುತ್ತೆ?
Image Credit : Gemini

ಎಲ್ಲಿ ಸಿಗುತ್ತೆ?

ಇದು ಅರುಣಾಚಲ ಪ್ರದೇಶದ 'ಮಿಶ್ಮಿ ಬೆಟ್ಟ'ಗಳಲ್ಲಿ (Mishmi Hills) ಹೆಚ್ಚಾಗಿ ಬೆಳೆಯುತ್ತದೆ. ಜೊತೆಗೆ ಚೀನಾದ ಟಿಬೆಟ್ ಗಡಿ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿ ಅರಣ್ಯಗಳಲ್ಲಿಯೂ ಅಪರೂಪವಾಗಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 2,000 ರಿಂದ 3,000 ಮೀಟರ್ ಎತ್ತರದ, ತೇವಾಂಶ ಮತ್ತು ತಂಪಾಗಿರುವ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇದು ಬೆಳೆಯುತ್ತದೆ. ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ, ಈ ಸಸ್ಯ ಈಗ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿದೆ.

55
ಬೆಲೆ ಎಷ್ಟು?
Image Credit : Gemini

ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಮಿಶ್ಮಿ ತೀತಾ ಬೆಲೆಯು ಅದರ ಗುಣಮಟ್ಟ ಮತ್ತು ಲಭ್ಯತೆಯನ್ನು ಅವಲಂಬಿಸಿ ಪ್ರತಿ ಕಿಲೋಗ್ರಾಂಗೆ ಸುಮಾರು ₹3,000 ರಿಂದ ₹9,000 ವರೆಗೆ ಇರುತ್ತದೆ. ಉತ್ತಮ ಗುಣಮಟ್ಟದ ಒಣಗಿದ ಬೇರುಗಳ (Dry Roots) ಸಗಟು ಮಾರುಕಟ್ಟೆ ಬೆಲೆ ಸಾಮಾನ್ಯವಾಗಿ ಪ್ರತಿ ಕೆಜಿಗೆ ₹4,000 ರಿಂದ ₹5,000 ಇರುತ್ತದೆ.

ಅತ್ಯಂತ ಅಪರೂಪದ ಮತ್ತು ಸಂಸ್ಕರಿಸಿದ ಆರ್ಗಾನಿಕ್ ಮೆಡಿಸಿನ್ ಗ್ರೇಡ್ ಬೇರುಗಳ ಬೆಲೆ ಪ್ರತಿ ಕೆಜಿಗೆ ₹8,000 - ₹9,000 ಅಥವಾ ಅದಕ್ಕಿಂತ ಹೆಚ್ಚಿರಬಹುದು. ಚಿಲ್ಲರೆಯಾಗಿ ಪುಡಿ (Powder) ರೂಪದಲ್ಲಿ ಖರೀದಿಸಿದರೆ 100 ಗ್ರಾಂಗೆ ₹300 ರಿಂದ ₹500 ವರೆಗೆ ಇರುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವೈರಲ್ ಸುದ್ದಿ
ಭಾರತ ಸುದ್ದಿ
Latest Videos
Recommended Stories
Recommended image1
ನಿಮ್ಮ ಚೇತರಿಕೆ ಸಂತೋಷ ತಂದಿದೆ, ಪೊಲೀಸ್ ಮೃತಪಟ್ಟ 42 ದಿನ ಬಳಿಕ ಪತ್ನಿಗೆ ಬಂತು ಆಯುಷ್ಮಾನ್ ಮೆಸೇಜ್
Recommended image2
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸ್ತಿದ್ರೂ ಸರ್ಕಾರ ಮೌನ; ಗೃಹಸಚಿವ ಅಮಿತ್ ಶಾ ವಿರುದ್ಧ ಪ್ರಿಯಾಂಕಾ ಗರಂ
Recommended image3
ಎಲೆಕ್ಟ್ರಿಕ್ ಅವತಾರದಲ್ಲಿ ಮರಳಿ ಬರಲಿದೆಯೇ ಟಾಟಾ ನ್ಯಾನೋ? ಹೊಸ ಊಹಾಪೋಹಗಳಿಗೆ ಕಾರಣವಾದ ಕಂಪನಿಯ ಹೇಳಿಕೆ
Related Stories
Recommended image1
14 ಲಕ್ಷ ಸಂಬಳವಿದ್ದರೂ ಇನ್ಫೋಸಿಸ್ ನೀಡಿದ್ದು ಎಷ್ಟು ಗೊತ್ತಾ? ಟೆಕ್ಕಿ ಕೊಟ್ಟ ರಿಲ್ಯಾಕ್ಸ್ಡ್ 'ರಿವೇಂಜ್' ಈಗ ವೈರಲ್!
Recommended image2
14 ಮಕ್ಕಳನ್ನು ಒಟ್ಟಿಗೇ ಮದುವೆ ಮಾಡಿದ ರೈತ? ವೈರಲ್​ ವಿಡಿಯೋ ಹಿಂದಿದೆ ಕುತೂಹಲದ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved