MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ

ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ

ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.

2 Min read
Author : Chethan Kumar
Published : May 09 2026, 05:44 PM IST
Share this Photo Gallery
  • FB
  • TW
  • Linkdin
  • Whatsapp
15
ನಿರೀಕ್ಷೆಗೂ ಮೀರಿದ ತಿರುವು
Image Credit : Asianet News

ನಿರೀಕ್ಷೆಗೂ ಮೀರಿದ ತಿರುವು

ತಮಿಳುನಾಡು ರಾಜಕೀಯ ನಿರೀಕ್ಷೆಗೂ ಮೀರಿದ ತಿರುವು ಪಡೆದುಕೊಳ್ಳುತ್ತಿದೆ. ವಿಸಿಕೆ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲ ಭೇಟಿಗೆ ಅವಕಾಶ ಕೇಳಿದೆ. ಸದ್ಯ 120 ಶಾಸಕರ ಬೆಂಬಲದೊಂದಿಗೆ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮಾಡಲಿದೆ. ಆದರೆ ಇದೀಗ ಎಐಎಡಿಎಂಕೆ ಪಕ್ಷದಲ್ಲಿ ಭಾರಿ ಬಂಡಾಯ ಎದ್ದಿದೆ.

Add Asianetnews Kannada as a Preferred SourcegooglePreferred
25
ತಮಿಳುನಾಡಿನಲ್ಲಿ ಬಂಡಾಯ ರಾಜಕೀಯ
Image Credit : Asianet News

ತಮಿಳುನಾಡಿನಲ್ಲಿ ಬಂಡಾಯ ರಾಜಕೀಯ

ಎಐಎಡಿಎಂಕೆ ಪಕ್ಷದಲ್ಲಿ ದೊಡ್ಡ ಬಂಡಾಯ ಶುರುವಾಗಿದೆ. ಪಕ್ಷದ ಒಂದು ಬಣದ ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಇದರಿಂದ ಎಐಎಡಿಎಂಕೆ ಇಬ್ಭಾಗವಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವರಾದ ಎಸ್.ಪಿ. ವೇಲುಮಣಿ, ಸಿ.ವಿ. ಷಣ್ಮುಗಂ ಮತ್ತು ವಿಜಯಭಾಸ್ಕರ್ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಂಡಾಯ ಶಾಸಕರು ನಟ ವಿಜಯ್‌ಗೆ ಬೆಂಬಲ ನೀಡುವ ಕುರಿತು ಪಕ್ಷದಲ್ಲಿ ಇಬ್ಬಗೆ ಅಭಿಪ್ರಾಯ ವ್ಯಕ್ತವಾಗಿತ್ತು.

Related Articles

Related image1
BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!
Related image2
ವಿಜಯ್ ಗೆಲುವಿನಿಂದ ತಮಿಳು ಸಿನಿರಂಗಕ್ಕೆ ಶಾಕ್: ರಜನಿಕಾಂತ್-ಕಮಲ್​​ ಹಾಸನ್ ಸಿನಿಮಾ ಭವಿಷ್ಯ ಏನು?
35
ಇಪಿಎಸ್ ಮನೆಗೆ ಶಾಸಕರ ದೌಡು
Image Credit : Asianet News

ಇಪಿಎಸ್ ಮನೆಗೆ ಶಾಸಕರ ದೌಡು

ಎಐಎಡಿಎಂಕೆ ಪಕ್ಷ ಎರಡು ಹೋಳಾಗುವ ಎಲ್ಲಾ ಸಾಧ್ಯತೆ ಇವೆ. ನಟ ವಿಜಯ್ ಆಗಮನದಿಂದ ಕಳೆದ 50 ವರ್ಷಗಳ ತಮಿಳುನಾಡು ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿದೆ. ಎಡಪ್ಪಾಡಿ ಕೆ ಪಳನಿಸ್ವಾಮಿ ನಿವಾಸಕ್ಕೆ ಒಂದು ಬಣದ ನಾಯಕರು ಆಗಮಿಸಿ ಸಭೆ ಸೇರಿದ್ದಾರೆ. 30 ಶಾಸಕರು ಇಪಿಎಸ್ ಮನೆಯಲ್ಲಿ ಸಭೆ ಸೇರಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

45
ಎಐಎಡಿಂಕೆ ಪೀಸ್ ಪೀಸ್, ಸರ್ಕಾರ ರಚನೆ ಸಾಧ್ಯತೆಯೂ ಇಲ್ಲ
Image Credit : X

ಎಐಎಡಿಂಕೆ ಪೀಸ್ ಪೀಸ್, ಸರ್ಕಾರ ರಚನೆ ಸಾಧ್ಯತೆಯೂ ಇಲ್ಲ

ಸರ್ಕಾರ ರಚಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಮತ್ತು ಎಐಎಡಿಎಂಕೆ ತಮ್ಮ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಶಾಸಕರೊಂದಿಗೆ ಮಹತ್ವದ ಚರ್ಚೆ ನಡೆಸಿದ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ತಾನು ಹೊಸ ಸರ್ಕಾರ ರಚಿಸುವುದಿಲ್ಲ ಮತ್ತು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಇಪಿಎಸ್ 'ಎಕ್ಸ್' (X) ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಹಿಡಿಯುವ ಎಲ್ಲಾ ದಾರಿಗಳು ಮುಚ್ಚಿಹೋದ ಕಾರಣ ಇಪಿಎಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

55
ನಟ ವಿಜಯ್ ಸರ್ಕಾರ
Image Credit : X

ನಟ ವಿಜಯ್ ಸರ್ಕಾರ

ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಿಲುವು ನಿರ್ಣಾಯಕವಾಗಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ, ರಾಜ್ಯಪಾಲರು ಕೇರಳಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ, ಲೀಗ್ ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿರುವುದರಿಂದ, ನಟ ವಿಜಯ್ ಸರಳ ಬಹುಮತವನ್ನು ಖಚಿತಪಡಿಸಿಕೊಂಡಿದ್ದಾರೆ. ಎರಡೂ ಪಕ್ಷಗಳು ಬೇಷರತ್ ಬೆಂಬಲ ನೀಡುವುದಾಗಿ ತಮ್ಮ ಪತ್ರಗಳಲ್ಲಿ ತಿಳಿಸಿವೆ.

ನಟ ವಿಜಯ್ ಸರ್ಕಾರ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ತಮಿಳಗ ವೆಟ್ರಿ ಕಳಗಂ
ತಮಿಳುನಾಡು
ವಿಧಾನಸಭಾ ಚುನಾವಣೆ

Latest Videos
Recommended Stories
Recommended image1
ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್‌, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!
Recommended image2
ಬಂಗಾಳದಲ್ಲಿ ಬಿಜೆಪಿ ಸರ್ಕಾರ, 15 ವರ್ಷ ಬಳಿಕ ಸಿಪಿಎಂ ಪತ್ರಿಕೆಗೆ ಸಿಕ್ತು ಸರ್ಕಾರಿ ಜಾಹೀರಾತು
Recommended image3
BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!
Related Stories
Recommended image1
BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!
Recommended image2
ವಿಜಯ್ ಗೆಲುವಿನಿಂದ ತಮಿಳು ಸಿನಿರಂಗಕ್ಕೆ ಶಾಕ್: ರಜನಿಕಾಂತ್-ಕಮಲ್​​ ಹಾಸನ್ ಸಿನಿಮಾ ಭವಿಷ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved