MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!

BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

2 Min read
Author : Santosh Naik
Published : May 09 2026, 05:12 PM IST
Share this Photo Gallery
  • FB
  • TW
  • Linkdin
  • Whatsapp
17
ಕೊನೆಗೂ ಮುಗಿದ ಅನಿಶ್ಚಿತತೆ
Image Credit : Asianet News

ಕೊನೆಗೂ ಮುಗಿದ ಅನಿಶ್ಚಿತತೆ

ಸತತ ಮೂರು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಕೊನೆಗೂ ಅಂತ್ಯವಾಗಿದೆ. ಸೂಪರ್‌ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿಸಿಕೆ (VCK) ಪಕ್ಷವು ವಿಜಯ್‌ಗೆ ಬೇಷರತ್ ಬೆಂಬಲ ಘೋಷಿಸುವುದರೊಂದಿಗೆ, ತಮಿಳುನಾಡಿನಲ್ಲಿ ಮೊದಲ ಬಾರಿಗೆ 'ಮೈತ್ರಿ ಸರ್ಕಾರ' ಅಸ್ತಿತ್ವಕ್ಕೆ ಬರಲಿರುವುದು ದೃಢಪಟ್ಟಿದೆ.

Add Asianetnews Kannada as a Preferred SourcegooglePreferred
27
ಮೈತ್ರಿ ಲೆಕ್ಕಾಚಾರ
Image Credit : x

ಮೈತ್ರಿ ಲೆಕ್ಕಾಚಾರ

ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ವಿಜಯ್ ಮೈತ್ರಿಕೂಟವು ಈ ಮೊದಲು 116 ಶಾಸಕರ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4) ಬಲ ಹೊಂದಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ.

Related Articles

Related image1
ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್: ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!
Related image2
ಸಿಎಂ ಆಗೋಕು ಮುನ್ನವೇ ವಿಸಿಕೆ ಡಿಮಾಂಡ್‌ ಕೇಳಿ ಕಂಗಾಲಾದ ದಳಪತಿ ವಿಜಯ್‌, ಮೈತ್ರಿ ಉಳಿಯುತ್ತಾ?
37
ರಾಜ್ಯಪಾಲ ಅರ್ಲೇಕರ್‌ಗೆ ಪತ್ರ
Image Credit : Asianet News

ರಾಜ್ಯಪಾಲ ಅರ್ಲೇಕರ್‌ಗೆ ಪತ್ರ

ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದು, "ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸುವ ಹಿತದೃಷ್ಟಿಯಿಂದ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ನಮ್ಮ ಇಬ್ಬರು ಶಾಸಕರು ಬೇಷರತ್ ಬೆಂಬಲ ನೀಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

47
ರಾಜಭವನದಲ್ಲಿದ್ದ ಅಡಚಣೆ ನಿವಾರಣೆ
Image Credit : X

ರಾಜಭವನದಲ್ಲಿದ್ದ ಅಡಚಣೆ ನಿವಾರಣೆ

ಬುಧವಾರದಿಂದಲೇ ವಿಜಯ್ ಹಲವು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ, ಸಂಖ್ಯಾಬಲದ ಲಿಖಿತ ದಾಖಲೆ ನೀಡದ ಕಾರಣ ಸರ್ಕಾರ ರಚಿಸಲು ಆಹ್ವಾನ ಸಿಕ್ಕಿರಲಿಲ್ಲ. ವಿಸಿಕೆ ನೀಡುತ್ತಿದ್ದ ಪರಸ್ಪರ ವಿರೋಧಿ ಹೇಳಿಕೆಗಳಿಂದಾಗಿ ವಿಜಯ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರು ಬೆಂಬಲ ಪತ್ರವನ್ನು ಹಸ್ತಾಂತರಿಸುವುದರೊಂದಿಗೆ ಎಲ್ಲಾ ಗೊಂದಲಗಳು ಬಗೆಹರಿದಿವೆ.

57
ದ್ರಾವಿಡ ಪಕ್ಷಗಳ 62 ವರ್ಷಗಳ ಪಾರುಪತ್ಯಕ್ಕೆ ಬ್ರೇಕ್
Image Credit : X

ದ್ರಾವಿಡ ಪಕ್ಷಗಳ 62 ವರ್ಷಗಳ ಪಾರುಪತ್ಯಕ್ಕೆ ಬ್ರೇಕ್

ಕೇವಲ ಎರಡು ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿದ್ದ ವಿಜಯ್, ಈ ಚುನಾವಣೆಯಲ್ಲಿ 108 ಸ್ಥಾನಗಳನ್ನು (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪ್ರಸ್ತುತ 107 ಶಾಸಕರು) ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಸುದೀರ್ಘ ಆಡಳಿತದ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

67
59 ಸ್ಥಾನ ಗೆದ್ದಿದ್ದ ಡಿಎಂಕೆ
Image Credit : X/SriramMadras

59 ಸ್ಥಾನ ಗೆದ್ದಿದ್ದ ಡಿಎಂಕೆ

ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4 ಸ್ಥಾನಗಳನ್ನು ಗೆದ್ದಿವೆ. ವಿಸಿಕೆ, ಎಡಪಕ್ಷಗಳು ಮತ್ತು ಐಯುಎಂಎಲ್ ತಲಾ 2 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಮ್‌ಎಂಕೆ ತಲಾ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

77
ಸಚಿವ ಸಂಪುಟದ ಸವಾಲು
Image Credit : X

ಸಚಿವ ಸಂಪುಟದ ಸವಾಲು

ಎಡಪಕ್ಷಗಳು ವಿಜಯ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದು, ಸಂಪುಟ ಸೇರದಿರಲು ತೀರ್ಮಾನಿಸಿವೆ. ಆದರೆ, ಬೆಂಬಲ ನೀಡಿರುವ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ. ಇದೇ ವೇಳೆ ಎಐಎಡಿಎಂಕೆಯ ಮೂವರು ಶಾಸಕರು ಬಂಡಾಯವೆದ್ದು ಟಿವಿಕೆ ಸೇರುವ ಸಾಧ್ಯತೆ ಇರುವುದು ದ್ರಾವಿಡ ಪಕ್ಷಗಳಿಗೆ ಮತ್ತೊಂದು ಆಘಾತ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ತಮಿಳಗ ವೆಟ್ರಿ ಕಳಗಂ
ದಳಪತಿ ವಿಜಯ್
ದ್ರಾವಿಡ ಮುನ್ನೇತ್ರ ಕಳಗಂ
ರಾಜಕೀಯ ಸುದ್ದಿ
ತಮಿಳುನಾಡು
ಸುದ್ದಿ

Latest Videos
Recommended Stories
Recommended image1
ರೇ*ಪಿಸ್ಟ್​ಗೆ ಪೊಲೀಸರ ರಕ್ಷಣೆ; ಪದೇ ಪದೇ ಜಾಮೀನು- ಕೋರ್ಟ್​ನಲ್ಲಿಯೇ ಇರಿದು ಕೊಂದ ಮಹಿಳೆಯರು
Recommended image2
Alcohol Price: ಗೋವಾ ಅಲ್ಲ, ಈ ರಾಜ್ಯದಲ್ಲಿ ಮಾತ್ರ ಅರ್ಧ ಬೆಲೆಗೆ ಮದ್ಯ ಸಿಗುತ್ತೆ! ಕಾರಣವೇನು?
Recommended image3
ಪಟ್ಟಕ್ಕೇರುವ ಮುನ್ನವೇ ದಳಪತಿ ಪ್ರಾಣಕ್ಕೆ ಕುತ್ತು? ಸರ್ಕಾರಿ ಬೆಂಗಾವಲು ಭದ್ರತೆ ಬಿಟ್ಟಿದ್ದೇಕೆ ಟಿವಿಕೆ ವಿಜಯ್?
Related Stories
Recommended image1
ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್: ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!
Recommended image2
ಸಿಎಂ ಆಗೋಕು ಮುನ್ನವೇ ವಿಸಿಕೆ ಡಿಮಾಂಡ್‌ ಕೇಳಿ ಕಂಗಾಲಾದ ದಳಪತಿ ವಿಜಯ್‌, ಮೈತ್ರಿ ಉಳಿಯುತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved