MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ದಳಪತಿ ವಿಜಯ್ 13 ವರ್ಷಗಳ ಸೇಡಿಗೆ ಸಿಎಂ ಆಗಿ ಪ್ರತೀಕಾರ; ಕೂರಲು ಅವಕಾಶ ಕೊಡದವರಿಂದ ಸೆಲ್ಯೂಟ್ ಹೊಡೆಸಿಕೊಂಡ ರಿಯಲ್ ಹೀರೋ

ದಳಪತಿ ವಿಜಯ್ 13 ವರ್ಷಗಳ ಸೇಡಿಗೆ ಸಿಎಂ ಆಗಿ ಪ್ರತೀಕಾರ; ಕೂರಲು ಅವಕಾಶ ಕೊಡದವರಿಂದ ಸೆಲ್ಯೂಟ್ ಹೊಡೆಸಿಕೊಂಡ ರಿಯಲ್ ಹೀರೋ

ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, 13 ವರ್ಷಗಳ ಹಿಂದೆ ನಡೆದ ಒಂದು ಅವಮಾನಕಾರಿ ಘಟನೆಯೇ ಅವರ ಈ ರಾಜಕೀಯ ಯಶಸ್ಸಿಗೆ ಸ್ಫೂರ್ತಿಯಾಗಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡಿ,  'ರಿಯಲ್ ಲೈಫ್ ಮಾಸ್ ಹೀರೋ' ಆಗಿ ಹೊರಹೊಮ್ಮಿದ್ದಾರೆ.

2 Min read
Author : Sathish Kumar KH
Published : May 10 2026, 03:36 PM IST
Share this Photo Gallery
  • FB
  • TW
  • Linkdin
  • Whatsapp
15
13 ವರ್ಷದ ಹಿಂದಿನ ನೋವಿಕ ಕಥೆ
Image Credit : stockPhoto

13 ವರ್ಷದ ಹಿಂದಿನ ನೋವಿಕ ಕಥೆ

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಚಿತ್ರರಂಗದಲ್ಲಿ 'ದಳಪತಿ'ಯಾಗಿ ಮೆರೆದ ನಟ ವಿಜಯ್, ಈಗ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಅವರ ಈ ಯಶಸ್ಸಿನ ಹಿಂದೆ 13 ವರ್ಷಗಳ ಹಿಂದಿನ ಒಂದು ನೋವಿನ ಕಥೆಯಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡುವ ಮೂಲಕ ವಿಜಯ್‌ ತಮ್ಮ ಜೀವನದ ಅತಿದೊಡ್ಡ 'ರಿಯಲ್ ಲೈಫ್ ಮಾಸ್' ದೃಶ್ಯವನ್ನು ಸೃಷ್ಟಿಸಿದ್ದಾರೆ.

Add Asianetnews Kannada as a Preferred SourcegooglePreferred
25
2013ರ ಆ ಕಹಿ ಘಟನೆ: ಏನಾಗಿತ್ತು ಅಂದು?
Image Credit : stockPhoto

2013ರ ಆ ಕಹಿ ಘಟನೆ: ಏನಾಗಿತ್ತು ಅಂದು?

ಸಿನಿಮಾ ರಂಗದಲ್ಲಿ ವಿಜಯ್ ಬೆಳೆಯುತ್ತಿದ್ದ ಕಾಲದಲ್ಲಿ, 'ಈ ಮುಖ ನೋಡೋಕೆ ಯಾರು ಬರ್ತಾರೆ?' ಎಂದು ಹೀಯಾಳಿಸಿದವರೇ ಹೆಚ್ಚು. ಆದರೆ 2013ರಲ್ಲಿ ನಡೆದ ಒಂದು ಘಟನೆ ವಿಜಯ್ ಅಭಿಮಾನಿಗಳ ಮನಸ್ಸಿನಲ್ಲಿ ಮಾಯದ ಗಾಯವಾಗಿ ಉಳಿದಿತ್ತು. ಅದು ಭಾರತೀಯ ಚಿತ್ರರಂಗದ 100ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮ. ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರು ಅಲ್ಲಿ ನೆರೆದಿದ್ದರು. ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರೇ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

Related Articles

Related image1
ನೂತನ ಸಿಎಂ ವಿಜಯ್ ಸೇರಿದಂತೆ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿದ ಹಿರಿಯ ನಟಿ ಯಾರು?
Related image2
ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!
35
ಜನರ ನಡುವೆ ಹೋಗಿ ಕುಳಿತಿದ್ದ ವಿಜಯ್
Image Credit : X Handle

ಜನರ ನಡುವೆ ಹೋಗಿ ಕುಳಿತಿದ್ದ ವಿಜಯ್

ಆ ಸಮಾರಂಭದಲ್ಲಿ ವಿಜಯ್ ಅವರಿಗಿಂತ ಕಿರಿಯ ನಟರಿಗೆ ಮುಂಚೂಣಿ ಸಾಲಿನಲ್ಲಿ ಆಸನ ಕಾಯ್ದಿರಿಸಲಾಗಿತ್ತು. ಆದರೆ, ಸೂಪರ್‌ಸ್ಟಾರ್ ಪಟ್ಟದಲ್ಲಿದ್ದ ವಿಜಯ್‌ ಅವರಿಗೆ ಕೂರಲು ಸರಿಯಾದ ಸೀಟನ್ನೇ ನೀಡಿರಲಿಲ್ಲ. ಅನಿವಾರ್ಯವಾಗಿ ವಿಜಯ್ ಕೊನೆಯ ಸಾಲಿನಲ್ಲಿ ಜನರ ಗುಂಪಿನ ನಡುವೆ ಹೋಗಿ ಕುಳಿತುಕೊಳ್ಳಬೇಕಾಯಿತು. ಆವತ್ತು ವಿಜಯ್ ಅವರ ಬೆಂಬಲಕ್ಕೆ ನಿಂತ ನಟ ವಿಕ್ರಮ್ ಕೂಡ ಅವರ ಪಕ್ಕದಲ್ಲೇ ಹೋಗಿ ಕುಳಿತಿದ್ದರು. ಈ ಅವಮಾನದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.

45
ಸೇಡನ್ನು ತೀರಿಸಿಕೊಂಡ 'ರಿಯಲ್ ಹೀರೋ'
Image Credit : stockPhoto

ಸೇಡನ್ನು ತೀರಿಸಿಕೊಂಡ 'ರಿಯಲ್ ಹೀರೋ'

ಯಾವುದೇ ದೂರು ಅಥವಾ ಬೇಸರ ವ್ಯಕ್ತಪಡಿಸದೆ ಅಂದು ಜನರ ನಡುವೆ ಕುಳಿತಿದ್ದ ಅದೇ ವ್ಯಕ್ತಿ, ಇಂದು ಅದೇ ಆಯೋಜಕರು ಮತ್ತು 9 ಕೋಟಿ ಜನರನ್ನು ಆಳುವ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಅಂದು ಕೂರಲು ಸೀಟು ಕೊಡದವರ ಮುಂದೆ, ಇಂದು ತಾನೇ ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ರಾಜ್ಯಭಾರ ಮಾಡುವ ಮೂಲಕ ವಿಜಯ್ 'ಹಳೆಯ ಸೇಡು' ತೀರಿಸಿಕೊಂಡಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

55
ಈತನೇ ನಿಜವಾದ ರಿಯಲ್ ಸ್ಟಾರ್
Image Credit : X Handle

ಈತನೇ ನಿಜವಾದ ರಿಯಲ್ ಸ್ಟಾರ್

'ಇದಕ್ಕಿಂತ ದೊಡ್ಡ ರಿಯಲ್ ಲೈಫ್ ಮಾಸ್ ಸೀನ್ ಬೇರೆ ಇಲ್ಲ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೋಟ್ಯಂತರ ಸಂಭಾವನೆ ಮತ್ತು ಸ್ಟಾರ್‌ಡಮ್ ಬದಿಗಿಟ್ಟು ಜನರಿಗಾಗಿ ರಾಜಕೀಯಕ್ಕೆ ಬಂದ ವಿಜಯ್ ಅವರ ಈ ನಿರ್ಧಾರಕ್ಕೆ ಕನ್ನಡಿಗರು ಸೇರಿದಂತೆ ಇಡೀ ದಕ್ಷಿಣ ಭಾರತವೇ ಮೆಚ್ಚುಗೆ ಸೂಚಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಳಪತಿ ವಿಜಯ್
ತಮಿಳುನಾಡು
ಟಾಲಿವುಡ್

Latest Videos
Recommended Stories
Recommended image1
ಹೆದ್ದಾರಿಯಲ್ಲಿ ಸಂಸದೆ ಸುಪ್ರಿಯಾ ಸುಳೆ ಕಾರು ಅಪಘಾತ, ಅಡ್ಡಾದಿಡ್ಡಿಯಾಗಿ ಬಂದ ವಾಹನ ಡಿಕ್ಕಿ
Recommended image2
ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?
Recommended image3
ದಳಪತಿ ವಿಜಯ್‌ಗೆ ಸಿನಿಮಾದಿಂದ ನೂರಾರು ಕೋಟಿ ಸಂಭಾವನೆ; ಸಿಎಂ ಆದಮೇಲೆ ಸಿಗುವ ಸಂಬಳವೆಷ್ಟು? ಒಟ್ಟು ಆಸ್ತಿ ವಿವರ ನೋಡಿ!
Related Stories
Recommended image1
ನೂತನ ಸಿಎಂ ವಿಜಯ್ ಸೇರಿದಂತೆ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿದ ಹಿರಿಯ ನಟಿ ಯಾರು?
Recommended image2
ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved