MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮತಾಂತರ ನಿಯಂತ್ರಣಕ್ಕಾಗಿ ದಲಿತರ ಬಡಾವಣೆಯಲ್ಲಿ 5 ಸಾವಿರ ತಿರುಪತಿ ದೇವಸ್ಥಾನ ಸ್ಥಾಪನೆ

ಮತಾಂತರ ನಿಯಂತ್ರಣಕ್ಕಾಗಿ ದಲಿತರ ಬಡಾವಣೆಯಲ್ಲಿ 5 ಸಾವಿರ ತಿರುಪತಿ ದೇವಸ್ಥಾನ ಸ್ಥಾಪನೆ

Temples in Dalit colonies Andhra Pradesh: ಆಂಧ್ರಪ್ರದೇಶದಲ್ಲಿ ಮತಾಂತರವನ್ನು ನಿಯಂತ್ರಿಸುವ ಉದ್ದೇಶದಿಂದ, ಟಿಟಿಡಿಯು ದಲಿತರ ಕಾಲೋನಿಗಳಲ್ಲಿ 5,000 ಶ್ರೀನಿವಾಸ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಮುಂದಾಗಿದೆ.

2 Min read
Mahmad Rafik
Published : Sep 27 2025, 12:06 PM IST
Share this Photo Gallery
  • FB
  • TW
  • Linkdin
  • Whatsapp
15
ಶ್ರೀನಿವಾಸ ಸ್ವಾಮಿಯ ದೇವಸ್ಥಾನ ನಿರ್ಮಾಣ
Image Credit : Social Media AI Meta

ಶ್ರೀನಿವಾಸ ಸ್ವಾಮಿಯ ದೇವಸ್ಥಾನ ನಿರ್ಮಾಣ

ಮತಾಂತರ ನಿಯಂತ್ರಣಕ್ಕಾಗಿ ದಲಿತರ ಕಾಲೋನಿಯಲ್ಲಿ 5 ಸಾವಿರ ಶ್ರೀನಿವಾಸ ಸ್ವಾಮಿಯ ದೇವಸ್ಥಾನ ನಿರ್ಮಾಣಕ್ಕೆ TTD ಮುಂದಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಅವರ ಈ ನಡೆಯನ್ನು ಬಿಜೆಪಿ ಸ್ವಾಗತಿಸಿದೆ. ಈ ಕುರಿತು ಬಿಜೆಪಿ ನಾಯಕಿ ಎಸ್.ಯಾಮಿನಿ ಶರ್ಮಾ (BJP leader Sadineni Yamini Sharma) ಮಾತನಾಡಿದ್ದಾರೆ.

25
5 ವರ್ಷದಲ್ಲಿ ಅತ್ಯಧಿಕ ಮತಾಂತರ
Image Credit : Freepik

5 ವರ್ಷದಲ್ಲಿ ಅತ್ಯಧಿಕ ಮತಾಂತರ

ಕಳೆದ ಐದು ವರ್ಷಗಳಲ್ಲಿ ಜಗನ್‌ ಮೋಹನ್ ರೆಡ್ಡಿ ಆಡಳಿತದ ವೇಳೆ ತುಂಬಾ ಮತಾಂತರ ನಡೆದಿವೆ. ಆ ಅವಧಿಯಲ್ಲಿ ಸಾವಿರಕ್ಕೂ ಅಧಿಕ ಅಕ್ರಮ ಚರ್ಚೆಗಳು ನಿರ್ಮಾಣಗೊಂಡಿವೆ. ಇದೆಲ್ಲದರ ಉದ್ದೇಶ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದಾಗಿತ್ತು ಎಂದು ಯಾಮಿನಿ ಶರ್ಮಾ ಆರೋಪಿಸಿದ್ದಾರೆ.

Related Articles

Related image1
ಅಂಜನಾದ್ರಿಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತೆ: ಶಾಸಕ ಜನಾರ್ಧನ ರೆಡ್ಡಿ
Related image2
ಮತಾಂತರ ಆಗಿದ್ದವರ ಮೂಲ ಜಾತಿ ಸೇರಿಸಿದ್ದೇವೆ, ಅದರಲ್ಲೇನಿದೆ ತಪ್ಪು: ಎಚ್‌ಸಿ ಮಹದೇವಪ್ಪ!
35
ಎಸ್‌ಸಿ/ಎಸ್‌ಟಿ ದಲಿತರ ಬಡಾವಣೆ
Image Credit : Asianet News

ಎಸ್‌ಸಿ/ಎಸ್‌ಟಿ ದಲಿತರ ಬಡಾವಣೆ

ಟಿಟಿಡಿಯಿಂದ ಸುಮಾರು 5 ಸಾವಿರಕ್ಕೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ವಿಶೇಷವಾಗಿ ಎಸ್‌ಸಿ/ಎಸ್‌ಟಿ ದಲಿತರ ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದಲ್ಲಿಯೇ ಅತ್ಯಧಿಕವಾಗಿ ಮತಾಂತರ ನಡೆಯುತ್ತಿದೆ ಎಂದು ಹೇಳಿದ್ದಾರೆ.

45
ಯಾಮಿನಿ ಶರ್ಮಾ
Image Credit : tirupati temple instagram

ಯಾಮಿನಿ ಶರ್ಮಾ

ಮುಂದುವರಿದು ಮಾತನಾಡಿದ ಯಾಮಿನಿ ಶರ್ಮಾ, ಬಾಲಾಜಿಯನ್ನು ನಾವು ಕಲಿಯುಗದ ಪ್ರತ್ಯಕ್ಷ ದೇವರು ಎಂದು ಕರೆಯುತ್ತವೆ. ದಲಿತರ ಬಡಾವಣೆಯಲ್ಲಿ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ನಿರ್ಮಾಣದಿಂದ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಆಗಲಿದೆ. ಎಲ್ಲರಿಗೂ ಶ್ರೀನಿವಾಸ ಸ್ವಾಮಿಯನ್ನು ಪ್ರಾರ್ಥನೆ ಮಾಡಲು ಅವಕಾಶ ಸಿಗಲಿದೆ ಎಂದರು.

ಇದನ್ನೂ ಓದಿ: I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

55
ಭಾರತೀಯ ಜನತಾ ಪಾರ್ಟಿ
Image Credit : our own

ಭಾರತೀಯ ಜನತಾ ಪಾರ್ಟಿ

ಭಾರತೀಯ ಜನತಾ ಪಾರ್ಟಿ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಈ ಹಿಂದೆ ಸಮೃತಾ ಸೇವಾ ಫೌಂಡೇಶನ್ (ಎಸ್‌ಎಸ್ಎಫ್) ದಲಿತರ ಬಡಾವಣೆಯಲ್ಲಿ 800ಕ್ಕೂ ಅಧಿಕ ದೇವಸ್ಥಾನ ಸ್ಥಾಪಿಸಿದೆ. ಆಂಧ್ರ ಪ್ರದೇಶದ ಮೈತ್ರಿ ಸರ್ಕಾರ ಮತಾಂತರ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯಲ್ಲಿಯೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೆ ಎಂಬಬ ಭರವಸೆ ನಮಗಿದೆ ಎಂದು ಯಾಮಿನಿ ಶರ್ಮಾ ಹೇಳುತ್ತಾರೆ.

ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ 

VIDEO | Vijayawada: “Establishing over 5000 Lord Balaji temples in Dalit colonies will stop illegal conversions”, says BJP leader Sadineni Yamini Sharma (@YaminiSharma_AP) welcoming CM Chandrababu Naidu's plan on build 5,000 Venkateswara Temples in SC/ST colonies.#AndhraPradesh… pic.twitter.com/X56CG5DSCV

— Press Trust of India (@PTI_News) September 26, 2025

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತಿರುಮಲ ತಿರುಪತಿ ದೇವಸ್ಥಾನಂ
ಆಂಧ್ರ ಪ್ರದೇಶ
ಆಂಧ್ರಪ್ರದೇಶ ಮುಖ್ಯಮಂತ್ರಿ
ತಿರುಪತಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved