MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Turmeric on Belly: ರಾತ್ರಿ ಮಲಗೋ ಮೊದಲು ನಾಭಿ ಮೇಲೆ ಅರಿಶಿನ ಹಚ್ಚಿ ನೋಡಿ

Turmeric on Belly: ರಾತ್ರಿ ಮಲಗೋ ಮೊದಲು ನಾಭಿ ಮೇಲೆ ಅರಿಶಿನ ಹಚ್ಚಿ ನೋಡಿ

ಅರಿಶಿನಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಹತ್ವವಿದೆ. ಇದರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ (immunity power) ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಚರ್ಮದ ಅಂದವನ್ನು ಹೆಚ್ಚಿಸುತ್ತದೆ, ಜೊತೆಗೆ ಗಾಯವನ್ನು ಸಹ ನಿವಾರಣೆ ಮಾಡುತ್ತದೆ. ಇದನ್ನು ನಾಭಿಗೆ ಹಾಕುವುದರಿಂದಲು ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. 

2 Min read
Author : Suvarna News | Asianet News
Published : Dec 15 2021, 09:28 PM IST
Share this Photo Gallery
  • FB
  • TW
  • Linkdin
  • Whatsapp
18

ಹೊಕ್ಕಳಿಗೆ ಅರಿಶಿನವನ್ನು (turmeric) ಹಚ್ಚಿದರೆ ನಿಮಗೆ ಅನೇಕ ವಿಧಗಳಲ್ಲಿ ಪ್ರಯೋಜನವಾಗುತ್ತದೆ. ಅರಿಶಿನದಲ್ಲಿ ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ದಂತಹ ಅನೇಕ ಅಂಶಗಳು ಇರುತ್ತವೆ.  ಇದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. 

28

ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಗುಣವೂ ಇದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಕ್ಕಳಿನ ಮೇಲೆ ಅರಿಶಿನದ ಪೇಸ್ಟ್ ಹಚ್ಚುವುದರಿಂದ ಕೂಡ ಚರ್ಮದ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಇನ್ನೇನು ಪ್ರಯೋಜನಗಳಿವೆ ನೋಡೋಣ. 

38

ವಿಸರ್ಜಿಸಲು ಸಹಾಯಕವಾಗಿದೆ
ಅರಿಶಿನವನ್ನು ಹಚ್ಚುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು (digestion system) ಆರೋಗ್ಯವಾಗಿಡಲು ನೆರವಾಗುತ್ತದೆ. ಅರಿಶಿನದಲ್ಲಿ ಫೈಬರ್ ಸಮೃದ್ಧವಾಗಿದೆ. ಅದನ್ನು ತಿನ್ನುವುದು ಮತ್ತು ಹಚ್ಚುವುದು ಎರಡೂ ನಿಮಗೆ ಪ್ರಯೋಜನಕಾರಿ. ಆಹಾರವನ್ನು ಜೀರ್ಣಿಸಿಕೊಳ್ಳಲು ಫೈಬರ್ ಅತ್ಯಗತ್ಯ ಅಂಶವಾಗಿದೆ. ಇದು ಹೊಟ್ಟೆ ನೋವು ಅಥವಾ ಅಜೀರ್ಣವನ್ನು ಉಂಟುಮಾಡುವುದಿಲ್ಲ. 

48

ಪಿರಿಯಡ್ಸ್ ನೋವು (periods pain) ಪರಿಹಾರ
ಅರಿಶಿನವನ್ನು ಸೇವಿಸುವುದರಿಂದ ಋತುಚಕ್ರದ ಸಮಯದಲ್ಲಿ ನೋವು ಮತ್ತು ಹೊಟ್ಟೆ ಸೆಳೆತದ ಸಮಸ್ಯೆಯಲ್ಲೂ ಪ್ರಯೋಜನವಾಗಲಿದೆ. ಇದರಿಂದ ಋತುಚಕ್ರದ ಸಮಯದಲ್ಲಿ ನೋವು ನಿವಾರಣೆಯಾಗುತ್ತದೆ. ಆರಾಮದಾಯಕ ಪಿರಿಯಡ್ಸ್ ನಿಮ್ಮದಾಗುತ್ತದೆ. 

58


ಸೋಂಕಿನ ತಡೆಗಟ್ಟುವಿಕೆ
ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣವಿದೆ. ಹೊಕ್ಕಳಿಗೆ ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಹಚ್ಚಿ, ಇದು ಬ್ಯಾಕ್ಟೀರಿಯಾ ಮತ್ತು ಚಳಿಗಾಲದ ವೈರಲ್ ಸೋಂಕುಗಳನ್ನು ತಡೆಯುತ್ತದೆ.

68

ಹೊಟ್ಟೆಯಲ್ಲಿ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ
ಅಜೀರ್ಣ ಅಥವಾ ಮಲಬದ್ಧತೆಯ ಕಾರಣದಿಂದ ಹೊಟ್ಟೆ ನೋವು ಅಥವಾ ಊತ ಉಂಟಾಗುತ್ತಿದ್ದರೆ, ನೀವು ಹೊಕ್ಕಳಿನ ಮೇಲೆ ಅರಿಶಿನ ಮತ್ತು ತೆಂಗಿನ ಎಣ್ಣೆಯನ್ನು ಸಹ ಹಚ್ಚಬಹುದು. ಇದು ಉರಿಯೂತವನ್ನು ಸಹ ನಿವಾರಿಸುತ್ತದೆ.

78

ರೋಗನಿರೋಧಕ ವ್ಯವಸ್ಥೆಯನ್ನು ಬಲವಾಗಿ ಇರಸಿಲು 
ಅರಿಶಿನದಲ್ಲಿ ಅನೇಕ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ (anti bacteria)  ಗುಣವಿದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ರಾತ್ರಿ ಹೊಕ್ಕಳಿಗೆ ಅರಿಶಿನವನ್ನು ಬಳಿಸಿ ಮಲಗುವುದು. ತೂಕ ಇಳಿಸಲು ಕೂಡ ಇದು ನೆರವಾಗಲಿದೆ. 

88

ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿಕೊಳ್ಳುವುದು ಏಕೆ?
ಹೊಕ್ಕಳಿಗೆ ಅರಿಶಿನ ಹಚ್ಚಿದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ. ಇದರಿಂದ ದೇಹವು ಅರಿಶಿನದ ಗುಣಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ರಾತ್ರಿ ಮಲಗುವ ಮುನ್ನ ಅರಿಶಿನವನ್ನು ಹಚ್ಚುವುದು ಒಳ್ಳೆಯದು. ಹೊಕ್ಕಳಿಗೆ ಅರಿಶಿನ ಸಾಸಿವೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದರಿಂದ ಅರಿಶಿನದ ಗುಣಗಳು ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image2
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
Recommended image3
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved