MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಹೆಚ್ಚು ಸ್ಪೈಸಿ ಆಹಾರ ತಿಂದ್ರೆ ಮೂಳೆ ಮುರಿಬೋದು ಎಚ್ಚರ !

ಹೆಚ್ಚು ಸ್ಪೈಸಿ ಆಹಾರ ತಿಂದ್ರೆ ಮೂಳೆ ಮುರಿಬೋದು ಎಚ್ಚರ !

ಒಬ್ಬ ಮಹಿಳೆಗೆ ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಿನ್ನೋದು ಜೀವನಕ್ಕೆ ಮಾರಕವಾಯ್ತು. ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸಿದ್ರಿಂದ ಮಹಿಳೆಯ ನಾಲ್ಕು ಪಕ್ಕೆಲುಬುಗಳು ಮುರಿದ ಘಟನೆ ನಡೆದಿದೆ. ಅಷ್ಟೇ ಅಲ್ಲ ಇದರಿಂದಾಗಿ ಅವರು ಆಸ್ಪತ್ರೆಗೆ ದಾಖಲೂ ಆಗಬೇಕಾಯ್ತು ಇದನ್ನ ಕೇಳಿದ ಮೇಲೆ ನೀವು ಮಸಾಲೆಯುಕ್ತ ಆಹಾರಕ್ಕೂ ಮೂಳೆಗಳಿಗೂ ಏನು ಸಂಬಂಧ ಎಂದು ಆಶ್ಚರ್ಯ ಪಡುತ್ತಿರಬಹುದು, ಈ ಬಗ್ಗೆ ಫುಲ್ ಮಾಹಿತಿ ತಿಳಿಯೋಣ.

2 Min read
Author : Pavna Das
| Updated : Dec 11 2022, 04:47 PM IST
Share this Photo Gallery
  • FB
  • TW
  • Linkdin
  • Whatsapp
17

ಆಹಾರವನ್ನು ರುಚಿಕರವಾಗಿಸಲು, ತೀಕ್ಷ್ಣವಾದ ಮಸಾಲೆಗಳನ್ನು ಅದಕ್ಕೆ ಸೇರಿಸಲಾಗುತ್ತದೆ. ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಮಸಾಲೆಯುಕ್ತ ಆಹಾರ ತಯಾರಿಸಲಾಗುತ್ತದೆ. ಮಸಾಲೆಗಳಿಲ್ಲದೆ, ಆಹಾರ ರುಚಿಕರವಾಗಿರೋದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅನೇಕ ವಿಧಗಳಲ್ಲಿ, ಮಸಾಲೆಯುಕ್ತ ಆಹಾರವು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೋಷಿಯಲ್ ಮೀಡಿಯಾದಲ್ಲಿ (social media) ಸುದ್ದಿಯೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಮಸಾಲೆಯುಕ್ತ ಆಹಾರ ತಿನ್ನುವುದರಿಂದ ಮಹಿಳೆಯ ನಾಲ್ಕು ಪಕ್ಕೆಲುಬುಗಳು ಮುರಿದಿವೆ. ಮಸಾಲೆಯುಕ್ತ ಆಹಾರವು ಪಕ್ಕೆಲುಬುಗಳನ್ನು ಹೇಗೆ ಮುರಿಯುತ್ತದೆ ಎಂಬುದನ್ನು ಓದಿ ನೀವು ಆಶ್ಚರ್ಯಚಕಿತರಾಗುತ್ತೀರಿ. ಹೌದು, ಇದು ಖಂಡಿತವಾಗಿಯೂ ಹೊಟ್ಟೆಯನ್ನು ಹಾಳುಮಾಡುತ್ತದೆ. 

27

ಕಥೆಯು ನೇರವಾಗಿ ಮೂಳೆಗಳಿಗೆ ಸಂಬಂಧಿಸಿದ್ದಲ್ಲ ಆದರೆ ಕೆಮ್ಮಿಗೆ ಸಂಬಂಧಿಸಿದೆ. ವಾಸ್ತವವಾಗಿ, ಮಸಾಲೆಯುಕ್ತ ಆಹಾರವನ್ನು (spicy food) ಸೇವಿಸಿದ ಕಾರಣ, ಮಹಿಳೆ ಎಷ್ಟು ಕೆಮ್ಮಿದಳು ಎಂದರೆ ಅವಳ ಎದೆಯ ನಾಲ್ಕು ಪಕ್ಕೆಲುಬುಗಳು ಮುರಿದವು. ಪಕ್ಕೆಲುಬುಗಳಿಗೆ ತಗುಲಿದ ಕೆಮ್ಮು ಮಹಿಳೆಗೆ ಎಷ್ಟು ತೀವ್ರವಾಗಿರಬೇಕು ಎಂದು ನೀವು ಊಹಿಸಬಹುದು. 

37

ಈ ಘಟನೆಯು ಚೀನಾದ ಶಾಂಘೈಗೆ ಸಂಬಂಧಿಸಿದೆ. ಇಲ್ಲಿ ವಾಸಿಸುವ ಹುವಾಂಗ್ ಎಂಬ ಮಹಿಳೆ ಮಸಾಲೆಯುಕ್ತ ಆಹಾರವನ್ನು ತಿನ್ನಲು ಇಷ್ಟಪಡುತ್ತಿದ್ದಳು. ಚೀನಾದಲ್ಲಿ ಸಾಕಷ್ಟು ಕೆಂಪು ಮೆಣಸನ್ನು (red chillies) ತಿನ್ನಲಾಗುತ್ತದೆ. ಮಹಿಳೆ ಸಹ ಹೆಚ್ಚು ಮಸಾಲೆಯುಕ್ತ ಆಹಾರ ತಿಂದಳು. ಇದರಿಂದ ಹೆಚ್ಚು ಕೆಮ್ಮಿ ಕೆಮ್ಮಿ ಮೂಳೆ ಮುರಿದಿರುವ ಘಟನೆ ನಡೆದಿದೆ.

47

ತೂಕ ನಷ್ಟದಿಂದಾಗಿ ಪಕ್ಕೆಲುಬಿನ ಮುರಿತ
ಮಸಾಲೆಯುಕ್ತ ಊಟದ ನಂತರ ಹುವಾಂಗ್ ಸಾಕಷ್ಟು ಕೆಮ್ಮುತ್ತಿದ್ದರು. ಆದಾಗ್ಯೂ, ಅವರು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಆದರೆ ನಂತರ ಅವರು ಮಾತನಾಡುವಾಗ ಮತ್ತು ಉಸಿರಾಡುವಾಗ ಎದೆ ನೋವು ಕಾಣಿಸಿಕೊಂಡಿತು. ಅದರ ನಂತರ ಅವಳು ತಪಾಸಣೆಗಾಗಿ ವೈದ್ಯರ ಬಳಿಗೆ ಹೋದಳು. ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ, ಅವರ ನಾಲ್ಕು ಪಕ್ಕೆಲುಬುಗಳು ಮುರಿದಿರುವುದು (rib broken) ಕಂಡುಬಂದಿದೆ. ಇದನ್ನು ಕೇಳಿ ಅವರು ಶಾಕ್ ಆಗಿದ್ದರು.

57

ಹುವಾಂಗ್ ಅವರ ದೇಹದ ತೂಕವು ತುಂಬಾ ಕಡಿಮೆ ಇರುವುದರಿಂದ ಪಕ್ಕೆಲುಬುಗಳು ಮುರಿದಿವೆ ಎಂದು ವೈದ್ಯರು ಹೇಳಿದರು. ಮಹಿಳೆಯ ತೂಕವು 57 ಕಿಲೋಗ್ರಾಂಗಳು. ದೇಹದ ಮೇಲ್ಭಾಗವು ತೆಳ್ಳಗಾಗುವುದರಿಂದ, ಅವರು ಕೆಮ್ಮಿದಾಗ, ಪಕ್ಕೆಲುಬು ಮುರಿತಕ್ಕೆ ಒಳಗಾಗಿರೋದು ತಿಳಿದು ಬಂದಿದೆ. 

67

ಮಹಿಳೆಗೆ ಒಂದು ತಿಂಗಳು ವಿಶ್ರಾಂತಿ ಪಡೆಯಲು ಸಲಹೆ.
ಮೂಳೆಗಳನ್ನು ಬೆಂಬಲಿಸಲು ಯಾವುದೇ ಸ್ನಾಯುವಿಲ್ಲದ ಕಾರಣ,  ನಿಮ್ಮ ದೇಹವು ಸಹ ಈ ರೀತಿಯದ್ದಾಗಿದ್ದರೆ, ವೇಗವಾದ ಮತ್ತು ನಿರಂತರ ಕೆಮ್ಮಿನಿಂದ ಅದು ಒಡೆಯಬಹುದು. ವೈದ್ಯರು ಮಹಿಳೆಯ ಎದೆಗೆ ಬ್ಯಾಂಡೇಜ್ ಹಾಕಿದ್ದಾರೆ. ಅವು ಸರಿಯಾಗಿ ಸೇರಲು ಒಂದು ತಿಂಗಳಿಗಿಂತ ಹೆಚ್ಚು ಕಾಲ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗಿದೆ. ಚೇತರಿಸಿಕೊಂಡ ನಂತರ ತೂಕ ಮತ್ತು ವ್ಯಾಯಾಮ ಹೆಚ್ಚಿಸಲು ಹುವಾಂಗ್ ಗೆ ಸೂಚಿಸಲಾಗಿದೆ.
 

77

 ಇನ್ನು ಮುಂದೆ ನೀವು ಸ್ಪೈಸಿ ಫುಡ್ ಸೇವಿಸೋ ಮುನ್ನ ನೂರು ಬಾರಿ ಯೋಚನೆ ಮಾಡೋದು ಉತ್ತಮ. ಇಲ್ಲವಾದರೆ ಕೆಮ್ಮಿ ಕೆಮ್ಮಿ ಎದೆಯ ಮೇಲೆ ಹೆಚ್ಚು ಪ್ರೆಶರ್ ಬಿದ್ದು, ಮೂಳೆ ಮುರಿಯುವ ಸಾಧ್ಯತೆ ಕೂಡ ಹೆಚ್ಚಾಗಿದೆ. ನೀವು ಸ್ಪೈಸಿ ಆಹಾರ ಇಷ್ಟಪಟ್ಟರೂ ಸಹ ಇನ್ನು ಮುಂದೆ ಅದನ್ನು ತಿನ್ನೊ ಮೊದ್ಲು ಕೊಂಚ ಯೋಚನೆ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆರೋಗ್ಯ

Latest Videos
Recommended Stories
Recommended image1
'ಸೊಂಟದ ವಿಷ್ಯ'ವೇ ಫಿಟ್‌ನೆಸ್‌ ಮಂತ್ರ ಎಂಬ ಸೀಕ್ರೆಟ್ ಬಯಲು ಮಾಡಿದ 'ಮೈನೆ ಪ್ಯಾರ್ ಕಿಯಾ' ಸುಂದರಿ ಭಾಗ್ಯಶ್ರೀ!
Recommended image2
ದಿನದ 24 ಗಂಟೆಯಲ್ಲಿ ಈ ಟೈಂನಲ್ಲಿ ಕುಡಿಯೋ ನೀರು ಮಾತ್ರ 'ಅಮೃತಕ್ಕೆ ಸಮಾನ'.. ಯಾವುದು ಆ ಮುಹೂರ್ತ?
Recommended image3
Tomato Storage: ಟೊಮೆಟೊ ಫ್ರಿಜ್‌ನಲ್ಲಿಡುವಾಗ 99% ಜನರು ಮಾಡೋ ತಪ್ಪು ಇದೇ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved