MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್

ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್

ಕೋವಿಶೀಲ್ಡ್‌ನಿಂದ ಹೃದಯಾಘಾತ ಆಗುತ್ತಾ?ಹೃದಯಾಘಾತ ಪ್ರಕರಣಗಳು ಹೆಚ್ಚಿರೋದೇಕೆ?ಹೃದಯ ಸಮಸ್ಯೆಗಳಿಂದ ದೂರವಿರಲು ಮಾಡಬೇಕಾದ್ದೇನು?

2 Min read
Reshma Rao
Published : May 16 2024, 11:44 AM IST
Share this Photo Gallery
  • FB
  • TW
  • Linkdin
  • Whatsapp
112

ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಸಾಧ್ಯತೆ ಕುರಿತು ಅದರ ಉತ್ಪಾದಕ ಕಂಪನಿಯಾದ ಆಸ್ಟ್ರಾಜೆನೆಕಾ ಹೇಳಿಕೆ ನೀಡಿ ಉತ್ಪಾದನೆ ಹಾಗೂ ಮಾರಾಟ ಸ್ಥಗಿತ ಮಾಡಿದೆ. ಇದರ ಬಳಿಕ ಭಾರತದ ಪಾಲುದಾರ ಕಂಪನಿಯಾದ ‘ಕೋವಿಶೀಲ್ಡ್’ ಲಸಿಕೆ ಪಡೆದವರು ಭಯಭೀತರಾಗಿದ್ದರು.

212

 ಇದರಿಂದಲೇ ಯುವ ಸಮುದಾಯದಲ್ಲಿ ಹೃದಯ ಸಮಸ್ಯೆಗಳು ಹೆಚ್ಚಿವೆ, ಸಡನ್ ಆಗಿ ಕುಸಿದು ಬೀಳುವ ಪ್ರಕರಣ ಹೆಚ್ಚಿವೆ ಎಂದು ಜನರು ಅನುಮಾನ ಪಡಲಾರಂಭಿಸಿದರು. 

312

ಆದರೆ, ಕೋವಿಶೀಲ್ಡ್ ಲಸಿಕೆ ಕಂಡುಹಿಡಿದವರಿಗೆ, ತಯಾರಿಸಿದವರಿಗೆ, ಕೊಡಲು ನಿರ್ಧರಿಸಿದವರಿಗೆ ನೀವು ನಿಜವಾಗಿ ಥ್ಯಾಂಕ್ಸ್ ಹೇಳಬೇಕು ಎಂದು ಅಚ್ಚರಿ ಮೂಡಿಸಿದ್ದಾರೆ ಖ್ಯಾತ ಹೃದಯ ತಜ್ಞ ಡಾ. ಸಿಎನ್ ಮಂಜುನಾಥ್. 

412

ಹೌದು, ವೈದ್ಯರು ಹೀಗೇಕೆ ಹೇಳಿದರು ಎಂದು ಅಚ್ಚರಿಯಾಯೇತೇ? ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವೈದ್ಯರು ಈ ಮಾತನ್ನು ಹೇಳಿದ್ದಾರೆ. ಹಾಗಿದ್ದರೆ ಅವರೇನಂದರು ನೋಡೋಣ ಬನ್ನಿ..

512

ಕೋವಿಶೀಲ್ಡ್ ಲಸಿಕೆ ಭಾರತದಲ್ಲಿ 80 ಕೋಟಿ ಜನರು 3 ಡೋಸ್ ತೆಗೆದುಕೊಂಡಿದ್ದಾರೆ. ಇದರಿಂದ ಲಕ್ಷಾಂತರ ಜನರ ಜೀವ ಉಳಿದಿದೆ. ಲಕ್ಷಾಂತರ ರೋಗಿಗಳು ಐಸಿಯುಗೆ ಹೋಗುವುದು ತಪ್ಪಿದೆ. ಆದ್ದರಿಂದ ಈ ಲಸಿಕೆ ತಯಾರಿಸಿದವರು, ಕಂಡು ಹಿಡಿದವರು, ಇದನ್ನು ಕೊಡಲು ನಿರ್ಧರಿಸಿದವರನ್ನು ಅಭಿನಂದಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

612

ಅದೊಂದು ಉತ್ತಮ ಲಸಿಕೆ
ಲಸಿಕೆ ತೆಗೆದುಕೊಂಡ ಪ್ರತಿ 10 ಲಕ್ಷ ಜನರಲ್ಲಿ 6-7 ಜನರಿಗೆ ರಕ್ತ ಹೆಪ್ಪುಗಟ್ಟವಂಥ ಸಮಸ್ಯೆ ಆಗಬಹುದು. ಅಕಸ್ಮಾತ್ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ರೆ ಹೃದಯ, ಮೆದುಳು ಸಮಸ್ಯೆ ಆಗಬಹುದು. ಆದರೆ, ಇವೆಲ್ಲವೂ ಆಗುವುದೇ ಹೌದಾದರೆ ಲಸಿಕೆ ತೆಗೆದುಕೊಂಡ 3 ತಿಂಗಳೊಳಗೆ ಆಗಬೇಕು. 

712

ಈಗ 3-4 ವರ್ಷ ವಾಗಿದೆ. ಯಾವಾಗ ರಿಸ್ಕ್‌ಗಿಂತ ಹೆಚ್ಚು ಲಾಭ ಇರುತ್ತೋ ಅದನ್ನು ಉತ್ತಮ ವ್ಯಾಕ್ಸಿನೇಶನ್ ಎನ್ನುತ್ತೇವೆ ಎಂದು ಮಂಜುನಾಥ್ ಹೇಳಿದ್ದಾರೆ.

812

ಅಮೆರಿಕದಲ್ಲಾಯಿತು ಅಧ್ವಾನ
ಅಮೆರಿಕದಲ್ಲಿ ಕೇವಲ ಶೇ.45ರಷ್ಟು ಜನ ಲಸಿಕೆ ತೆಗೆದುಕೊಂಡ್ರು. ಹೀಗಾಗಿ ಅಲ್ಲಿ ಕೋವಿಡ್‌ನ 6, 7ನೇ ಅಲೆಗಳು ಕೂಡಾ ಬಂದವು, ಸಾಕಷ್ಟು ಸಾವಾಯಿತು. ಆದರೆ ಭಾರತದಲ್ಲಿ 3ನೇ ಅಲೆಗೇ ನಿಂತಿತು. ಇದಕ್ಕೆ ಲಸಿಕೆಯೇ ಕಾರಣ. ಕೋವಿಶೀಲ್ಡ್ ನಿಂದ ಸಮಸ್ಯೆಯಾದ್ರೆ 0.002 ಶೇ.ದಷ್ಟು ಜನರಿಗೆ ಮಾತ್ರ ಎಂದು ವೈದ್ಯರು ತಿಳಿಸಿಕೊಟ್ಟಿದ್ದಾರೆ.

912

ಮುಂಚೆಯೂ ಇತ್ತು ಯುವಸಮುದಾಯದಲ್ಲಿ ಹೃದಯಾಘಾತ
2014- 2019 ನಡುವೆ ಜಯದೇವ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ, ಕೋವಿಡ್‌ಗೂ ಮುನ್ನದ ಈ ಸಮಯದಲ್ಲಿ 5500 ಯುವ(18-45 ವರ್ಷ) ಹೃದಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಕೋವಿಡ್ ಬಳಿಕ ಇದು ಜಾಸ್ತಿ ಆಗಿದೆ ಅನ್ನೋದು ಸರಿಯಲ್ಲ. ಜಾಸ್ತಿ ಆಗ್ತಿರೋದಕ್ಕೆ ಜೀವನಶೈಲಿ ಕಾರಣ ಎಂದಿದ್ದಾರೆ ಮಂಜುನಾಥ್. 

1012

ಹೃದಯಾಘಾತ ಹೆಚ್ಚಿದ್ದರೆ ಅದಕ್ಕೆ ಕಾರಣ ಇವು..
ಭಾರತದಲ್ಲಿ ಶೇ.30 ಹೃದಯಾಘಾತದಿಂದ ಸಾವು ಸಂಭವಿಸುತ್ತವೆ. ಈಗ ಮಾಧ್ಯಮಗಳು ಹೃದಯಾಘಾತದ ಬಗ್ಗೆ ಹೇಳುತ್ತಿರುವುದರಿಂದ ಜನರಿಗೆ ಜಾಸ್ತಿ ಆಗಿದೆ ಅನ್ನೋ ಇಂಪ್ರೆಶನ್ ಇದೆ. ಹೃದಯಾಘಾತಕ್ಕೆ ಇಂದಿನ ಯುವಕರ ಕೆಟ್ಟ ಆಹಾರ ಅಭ್ಯಾಸಗಳು, ಡಯಾಬಿಟೀಸ್, ಡ್ರಗ್ಸ್, ಮದ್ಯ, ಸಿಗರೇಟ್ ಇತ್ಯಾದಿ ಕಾರಣ- ಇಂದಿನ ತಲೆಮಾರಿನಲ್ಲಿ ಈ ಅಭ್ಯಾಸಗಳು ಸರಿಯಿಲ್ಲ. ಒತ್ತಡ ಜಾಸ್ತಿ. ಈಗ ಸಣ್ಣ ಸಮಯದಲ್ಲಿ ಜಾಸ್ತಿ ಸಾಧನೆ ಮಾಡಲು ಬಯಸುತ್ತಾರೆ. ಕನಸು, ಗುರಿ ಹೆಚ್ಚು. ಹಾಗಾಗಿ, ಹೃದಯಾಘಾತ ಹೆಚ್ಚಾಗಿದೆ ಎನ್ನುತ್ತಾರೆ ಡಾಕ್ಟರ್. 

1112
exercise

exercise

ಔಷಧ ಅಲ್ಲದ ಔಷಧಿ ಬಳಸಿ
ಜನರು ತಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನ ಔಷಧ ಅಲ್ಲದ ಔಷಧಿಗಳನ್ನು ಬಳಸಬೇಕು. ಇವು ಸಂಪೂರ್ಣ ಫ್ರೀಯಾಗಿದ್ದು, ಅಡ್ಡ ಪರಿಣಾಮವನ್ನೂ ಹೊಂದಿರೋಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವೇನೆಂದು ನೋಡೋಣ. 
 

1212

ಸೂರ್ಯನ ಬೆಳಕಲ್ಲಿ ವಾಕಿಂಗ್
ಉತ್ತಮ ಡಯಟ್
ವಿಶ್ರಾಂತಿ
ಅಪರೂಪಕ್ಕೆ ಉಪವಾಸ
ನಗುವುದು
ಗೆಳೆತನ
ಕುಟುಂಬದೊಡನೆ ಊಟ
ಇನ್ನೊಬ್ಬರ ಬಗ್ಗೆ ಒಳ್ಳೆ ಮಾತಾಡುವುದು
ಕೃತಜ್ಞತೆ
ಯೋಗ
ಧ್ಯಾನ
ಉತ್ತಮ ಹಣ್ಣು ತರಕಾರಿಗಳ ಸೇವನೆ

About the Author

RR
Reshma Rao
ಹೃದಯಾಘಾತ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved