ತುಳಸಿ ಗಿಡಕ್ಕೆ ಉಪ್ಪು ಹಾಕಿದರೆ ಇರುವೆ ಅಥವಾ ಕೀಟಗಳು ಓಡಿಹೋಗುತ್ತವೆ ಎಂದು ಕೆಲವರು ನಂಬುತ್ತಾರೆ. ಹೌದು, ಸ್ವಲ್ಪ ಸಮಯದವರೆಗೆ ಕೀಟಗಳು ಕಡಿಮೆಯಾಗಬಹುದು. ಆದರೆ, ಗಿಡಕ್ಕೆ ಮತ್ತು ಮಣ್ಣು ಹಾಳಾಗುತ್ತದೆ.
life Feb 27 2026
Author: Sathish Kumar KH Image Credits:Getty
Kannada
ತುಳಸಿ ಗಿಡಕ್ಕೆ ಉಪ್ಪು ಯಾಕೆ ಹಾಕಬಾರದು?
ಮಣ್ಣಿಗೆ ಉಪ್ಪು ಹಾಕಿದರೆ ಕೀಟಗಳು ಹೋಗುವ ಜೊತೆಗೆ, ಗಿಡದ ಬೆಳವಣಿಗೆ ವೇಗವಾಗುತ್ತದೆ ಎನ್ನುತ್ತಾರೆ. ಆದರೆ ತುಳಸಿ ಗಿಡಕ್ಕೆ ಉಪ್ಪು ಹಾಕುವುದು ನಿಜವಾಗಿಯೂ ಸರಿನಾ? ಸತ್ಯ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
Image credits: Getty
Kannada
ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತೆ
ಉಪ್ಪಿನಲ್ಲಿರುವ ಸೋಡಿಯಂ ಮಣ್ಣು ಹಾಳುಮಾಡುತ್ತದೆ. ಇದರಿಂದ ಮಣ್ಣು ಗಟ್ಟಿಯಾಗಿ, ನೀರು ಸರಿಯಾಗಿ ಹರಿದು ಹೋಗುವುದಿಲ್ಲ. ಬೇರುಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ತುಳಸಿಯ ಬೇರುಗಳು ದುರ್ಬಲಗೊಳ್ಳುತ್ತವೆ.
Image credits: facebook
Kannada
ಬೇರುಗಳಿಗೆ 'ಸಾಲ್ಟ್ ಬರ್ನ್' ಅಪಾಯ
ಮಣ್ಣಿನಲ್ಲಿ ಉಪ್ಪಿನಂಶ ಹೆಚ್ಚಾದಾಗ, ಗಿಡ ನೀರನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಇದನ್ನು 'ಆಸ್ಮೋಟಿಕ್ ಸ್ಟ್ರೆಸ್' (Osmotic Stress) ಎನ್ನುತ್ತಾರೆ. ಇದರಿಂದ ಎಲೆಗಳು ಬಾಡಿ, ಹೊಸ ಚಿಗುರು ನಿಂತುಹೋಗುತ್ತದೆ.
Image credits: Getty
Kannada
ಪೋಷಕಾಂಶಗಳ ಕೊರತೆ ಉಂಟಾಗುತ್ತೆ
ಉಪ್ಪು, ಮಣ್ಣಿನಲ್ಲಿರುವ ಸಾರಜನಕ, ಪೊಟ್ಯಾಶಿಯಂ, ಕ್ಯಾಲ್ಶಿಯಂನಂತಹ ಅಗತ್ಯ ಪೋಷಕಾಂಶಗಳನ್ನು ಗಿಡ ಹೀರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ತುಳಸಿ ಎಲೆಗಳು ಚಿಕ್ಕದಾಗಿ, ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತವೆ.
Image credits: facebook
Kannada
ಉಪ್ಪನ್ನು ಅಪ್ಪಿತಪ್ಪಿಯೂ ಹಾಕಬಾರದು?
ತುಳಸಿ ಗಿಡ ಪಾಟ್ನಲ್ಲಿದ್ದರೆ, ಎಲೆಗಳು ಈಗಾಗಲೇ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಮತ್ತು ಮಣ್ಣು ಜೇಡಿ ಮಣ್ಣಾಗಿದ್ದರೆ (clayey soil) ಉಪ್ಪು ಹಾಕಲೇಬಾರದು. ಉಪ್ಪು ಹಾಕಿದರೆ ಗಿಡ ಸಂಪೂರ್ಣವಾಗಿ ಹಾಳಾಗಬಹುದು.