MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಉಪ್ಪು, ಸಕ್ಕರೆ ಎರಡನ್ನೂ ಅವೈಡ್ ಮಾಡಿದರೆ ಹಾರ್ಟ್ ಅಟ್ಯಾಕ್ ಅಪಾಯ ತಗ್ಗಿಸಬಹುದು ನೋಡಿ!

ಉಪ್ಪು, ಸಕ್ಕರೆ ಎರಡನ್ನೂ ಅವೈಡ್ ಮಾಡಿದರೆ ಹಾರ್ಟ್ ಅಟ್ಯಾಕ್ ಅಪಾಯ ತಗ್ಗಿಸಬಹುದು ನೋಡಿ!

ಈಗ ಆರೋಗ್ಯವಾಗಿ ಡ್ಯಾನ್ಸ್ ಮಾಡ್ಕೊಂಡು, ಫೀಲ್ಡಲ್ಲಿ ಆಟ ಆಡ್ಕೊಂಡು ಈರೋರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಸತ್ತು ಹೋಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಯುವಕರೂ ಸೇರಿದ್ದಾರೆನ್ನುವುದು ದುರಂತ. ಕೇವಲ ವೃದ್ಧರನ್ನು ಮಾತ್ರ ಕಾಡುತ್ತಿದ್ದ ಹೃದಯಾಘಾತ ಚಿಕ್ಕ ಚಿಕ್ಕ ಮಕ್ಕಳನ್ನೂ ಕಾಡುವಂತಾಗಲೇನು ಕಾರಣ? ಹೀಗೆಕಾಯ್ತು? ಏನು ಮಾಡಬಹುದು.  

2 Min read
Author : Asianetnews Kannada Stories
Published : Aug 31 2024, 03:02 PM IST
Share this Photo Gallery
  • FB
  • TW
  • Linkdin
  • Whatsapp
16

ಹೃದಯ ಸಂಬಂಧಿ ಕಾಯಿಲೆ, ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಇಂದು ಚಿಕ್ಕ ವಯಸ್ಸಿನವರಲ್ಲಿಯೂ ಹೃದಯಾಘಾತ ಸಂಭವಿಸುತ್ತಿದೆ. ಇದಕ್ಕೆ ಅನಾರೋಗ್ಯಕರ ಜೀವನಶೈಲಿಯೇ ಪ್ರಮುಖ ಕಾರಣ. ವಿಶೇಷವಾಗಿ ಕೆಲವು ಆಹಾರಗಳು. ಆರೋಗ್ಯ ತಜ್ಞರ ಪ್ರಕಾರ ಕೆಲವು ರೀತಿಯ ಆಹಾರಗಳು ಹೃದಯ ಕಾಯಿಲೆಗೆ ಕಾರಣವಾಗುತ್ತವೆ. ಹೃದಯಾಘಾತವನ್ನು ಪ್ರಚೋದಿಸುತ್ತವೆ. ಅಷ್ಟೇ ಅಲ್ಲ, ಅವು ಹಲವು ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗುತ್ತವೆ. ಈಗ ಅವು ಯಾವುವು?

26

ಉಪ್ಪು: ಅತಿಯಾಗಿ ಉಪ್ಪು ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ, ಇದು ಹೃದಯಾಘಾತಕ್ಕೆ ಪ್ರಮುಖ ಕಾರಣ. ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಲ್ಲಿ ಉಪ್ಪಿನಂಶ ಹೆಚ್ಚಾಗಿರುತ್ತದೆ, ಇದು ಹೃದಯಾಘಾತ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ನಿಮ್ಮ ದೈನಂದಿನ ಆಹಾರದಲ್ಲಿ ಉಪ್ಪಿನ ಒಟ್ಟು ಪ್ರಮಾಣವನ್ನು ಕಡಿಮೆ ಮಾಡಿ, ಗಿಡಮೂಲಿಕೆ, ಮಸಾಲೆ ಬಳಸಿ. 

36

ಪ್ರೋಟೀನ್ ಆಹಾರ: ಪ್ರತಿಯೊಬ್ಬರಿಗೂ ಪ್ರೋಟೀನ್ ಅವಶ್ಯಕ. ಅಂದರೆ ನೀವು ಹೆಚ್ಚು ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಬೇಕು ಎಂದರ್ಥವಲ್ಲ. ಇದು ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುತ್ತದೆ. ಇದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಮಾಂಸ, ಮೀನು, ಕೋಳಿ ಮಾಂಸ, ಡೈರಿ ಉತ್ಪನ್ನಗಳನ್ನು (Dairy Products) ಮಿತವಾಗಿ ಸೇವಿಸಿ. ಬದಲಾಗಿ, ನೀವು ದ್ವಿದಳ ಧಾನ್ಯಗಳು, ಬೀನ್ಸ್ (Beans), ಸೋಯಾದಂಥ ಸಸ್ಯಾಧಾರಿತ ಪ್ರೋಟೀನ್ (Plant based Proteirns) ಆಹಾರಗಳನ್ನು ಸೇವಿಸಬಹುದು. ಇವು ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸಿ, ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. 
 

46

ಸಕ್ಕರೆ: ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೆಚ್ಚು ಸೇವಿಸುವುದರಿಂದ ನಿಮಗೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಇದು ಟೈಪ್ 2 ಮಧುಮೇಹಕ್ಕೂ ಎಡೆ ಮಾಡಿಕೊಡಬಹುದು. ಇದು ಹೃದ್ರೋಗದ ಪ್ರಮುಖ ಅಪಾಯಕಾರಿ ಅಂಶಗಳಲ್ಲೊಂದು. ಸಿಹಿತಿಂಡಿಗಳು, ಸೋಡಾ, ಪೇಸ್ಟ್ರಿ ಮತ್ತು ಇತರೆ ಸಿಹಿತಿಂಡಿಗಳು ಎಷ್ಟೇ ರುಚಿಕರವಾಗಿದ್ದರೂ ಅವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವುಗಳನ್ನು ಮಿತವಾಗಿ ಸೇವಿಸಿ. ಸಿಹಿತಿಂಡಿಗಳ ಮೇಲಿನ ಆಸೆಯನ್ನು ಕಡಿಮೆ ಮಾಡಲು ಫೈಬರ್‌ಯುಕ್ತ ಹಣ್ಣುಗಳನ್ನು ಸೇವಿಸಿ. ಇವು ನಿಮ್ಮ ಆರೋಗ್ಯವನ್ನು ಕಾಪಾಡುತ್ತವೆ. 
 

56

ಸ್ಯಾಚುರೇಟೆಡ್, ಟ್ರಾನ್ಸ್ ಕೊಬ್ಬುಗಳು: ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ನಿಮಗೆ ಹೃದ್ರೋಗ ಬರುವ ಅಪಾಯ ಹೆಚ್ಚು. ಅದಕ್ಕಾಗಿಯೇ ವೈದ್ಯರು ಕೆಂಪು ಮಾಂಸ, ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳು ಮತ್ತು ಹೈಡ್ರೋಜನೀಕರಿಸಿದ ಎಣ್ಣೆಗಳಿಂದ ತಯಾರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಲು ಶಿಫಾರಸು ಮಾಡುತ್ತಾರೆ. ಬದಲಾಗಿ, ಬಾದಾಮಿ, ವಾಲ್‌ನಟ್ಸ್, ಆಲಿವ್ ಎಣ್ಣೆ ಮತ್ತು ಬೆಣ್ಣೆ ಹಣ್ಣು ಸೇರಿ ಪಾಲಿಸ್ಯಾಚುರೇಟೆಡ್ ಕೊಬ್ಬುಇರೋ ಆಹಾರ ಸೇವಿಸಿ. 
 

66

ಬೆಳಗಿನ ಉಪಾಹಾರ: ಆಗಾಗ್ಗೆ ಬೆಳಗಿನ ಉಪಾಹಾರವನ್ನು ಬಿಡುವ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಅಸಮತೋಲನಗೊಳಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆ ಬರುವ ಅಪಾಯವನ್ನೂ ಹೆಚ್ಚಿಸುತ್ತದೆ. ನೀವು ಆರೋಗ್ಯಕರ ಉಪಾಹಾರವನ್ನು ಸೇವಿಸಿದರೆ, ದಿನವಿಡೀ ಶಕ್ತಿಯುತವಾಗಿರುವುದಲ್ಲದೆ, ಹಗಲಿನಲ್ಲಿ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Asianetnews Kannada Stories
ಜೀವನಶೈಲಿ
ಆಹಾರ
ಸಕ್ಕರೆ

Latest Videos
Recommended Stories
Recommended image1
ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!
Recommended image2
ಬುಸ್ಸನೇ ಉಬ್ಬುವ ಅಪ್ಪಟ ಮಿರ್ಚಿ ಬಜ್ಜಿ ಮಾಡ್ಬೇಕಾ? ಸೋಡಾ ಬೇಡ, ಹಿಟ್ಟು ಕಲಸೋ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳ್ಳಿ
Recommended image3
ಬಸಳೇಸೊಪ್ಪಿನ ಚಟ್ನಿಯನ್ನು ಹೀಗೆ ಮಾಡಿದ್ರೆ ಮಾತ್ರ ಭಾರೀ ರುಚಿ.. ಇಲ್ಲ ಅಂದ್ರೆ ಮಾಮೂಲಿ ಚಟ್ನಿ ಆಗುತ್ತೆ ಅದು..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved