MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಅಯೋಧ್ಯೆ ರಾಮ ಮಂದಿರ ಪ್ರಸಾದ ರಾಮ್‌ ಹಲ್ವಾ ಸಿದ್ಧಪಡಿಸುವಾತ 12 ವಿಶ್ವ ದಾಖಲೆ ಹೊಂದಿರೋ ಬಾಣಸಿಗ

ಅಯೋಧ್ಯೆ ರಾಮ ಮಂದಿರ ಪ್ರಸಾದ ರಾಮ್‌ ಹಲ್ವಾ ಸಿದ್ಧಪಡಿಸುವಾತ 12 ವಿಶ್ವ ದಾಖಲೆ ಹೊಂದಿರೋ ಬಾಣಸಿಗ

ಅಯೋಧ್ಯೆ ರಾಮ ಮಂದಿರಕ್ಕಾಗಿ ಪ್ರಸಾದವನ್ನು ಸಿದ್ಧಪಡಿಸುವ ಬಾಣಸಿಗ ವಿಷ್ಣು ಮನೋಹರ್, 12 ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

1 Min read
Vinutha Perla
Published : Jan 10 2024, 05:20 PM IST| Updated : Jan 12 2024, 09:50 AM IST
Share this Photo Gallery
  • FB
  • TW
  • Linkdin
  • Whatsapp
18

ಅಯೋಧ್ಯೆಯ ರಾಮಮಂದಿರವು ಜನವರಿ 22ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ. ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜಕಾರಣಿಗಳು, ಬಾಲಿವುಡ್ ತಾರೆಯರು ಮತ್ತು ಸ್ಟಾರ್ ಕ್ರಿಕೆಟಿಗರು ಸೇರಿದಂತೆ ಅನೇಕ ವಿಐಪಿಗಳು ಭಾಗವಹಿಸಲಿದ್ದಾರೆ. 

28
Ram halwa

Ram halwa

ಮಾತ್ರವಲ್ಲ, ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತಾಧಿಗಳು ಇಲ್ಲಿಗೆ ಬಂದು ಸೇರಲಿದ್ದಾರೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲು ಹಲ್ವಾವನ್ನು ಸಿದ್ಧಪಡಿಸಲಾಗುತ್ತದೆ.

38

ರಾಮಲಲ್ಲಾಗೆ ಹಲ್ವಾ ಅರ್ಪಿಸಿದ ನಂತರ ಭಕ್ತರಿಗೆ ರಾಮ ಹಲ್ವಾ ವಿತರಿಸಲಾಗುತ್ತದೆ. ಆದರೆ ಲಕ್ಷಾಂತರ ಮಂದಿಗೆ ವಿತರಿಸಲು ಸಾಧ್ಯವಾಗುವಂತೆ ಸುಮಾರು 7000 ಕೆಜಿಯ ಬೃಹತ್ ರಾಮ್ ಹಲ್ವಾವನ್ನು ತಯಾರಿಸಲಾಗುತ್ತಿದೆ.

48

ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸಲು ಸಾಮಾನ್ಯದವರಿಂದ ಸಾಧ್ಯವಿಲ್ಲ. 7000 ಕೆಜಿಯ ಬೃಹತ್ ರಾಮ್ ಹಲ್ವಾ ತಯಾರಿಸಲು ಹಲವು ದಾಖಲೆಗಳನ್ನು ಮಾಡಿರುವ ಶೆಫ್ ಸಹ ಸಜ್ಜಾಗಿದ್ದಾರೆ. ಬಾಣಸಿಗ ವಿಷ್ಣು ಮನೋಹರ್ ನಾಗ್ಪುರದವರಾಗಿದ್ದು, 1.5 ಲಕ್ಷ ಭಕ್ತರಿಗೆ 7000 ಕೆಜಿ ರಾಮ್ ಹಲ್ವಾ ತಯಾರಿಸಲಿದ್ದಾರೆ. 

58

ವಿಷ್ಣು ವಿಶೇಷವಾದ ಬೃಹತ್‌ ಕಡಾಯಿಯಲ್ಲಿ ಈ ಹಲ್ವಾವನ್ನು ತಯಾರಿಸುತ್ತಾರೆ. ಅದನ್ನು ನಾಗಪುರದಿಂದ ಅಯೋಧ್ಯೆಗೆ ಸಾಗಿಸಲಾಗುತ್ತದೆ. ಈ ಕಡಾಯಿಯ ತೂಕ ಸುಮಾರು 1400 ಕೆಜಿ ಎಂದು ಅಂದಾಜಿಸಲಾಗಿದೆ. ಅಡುಗೆಯಲ್ಲಿ ಪರಿಣತಿ ಹೊಂದಿರುವ ವಿಷ್ಣು ತಮ್ಮ ಹೆಸರಿನಲ್ಲಿ 12 ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. 

68

ಕೇವಲ 285 ನಿಮಿಷಗಳಲ್ಲಿ 75 ಬಗೆಯ ಅಕ್ಕಿಯಿಂದ 75 ಭಕ್ಷ್ಯಗಳನ್ನು ತಯಾರಿಸಿದ್ದು ಕೊನೆಯ ದಾಖಲೆಯಾಗಿದೆ.

78

ದಾಖಲೆಯ ಬಾಣಸಿಗ ವಿಷ್ಣು, ಲೈವ್ ಅಡುಗೆ ತರಗತಿಗಳನ್ನು ಸಹ ಮಾಡುತ್ತಾರೆ. ಈ ಬಾರಿ ಅವರು ರಾಮ್ ಲಲ್ಲಾಗಾಗಿ ಪ್ರಸಾದವನ್ನು ಮಾಡಲು ಸಿದ್ಧರಾಗಿದ್ದಾರೆ.

88

ರಾಮ್ ಲಲ್ಲಾಗಾಗಿ ಪ್ರಸಾದವನ್ನು ತಯಾರಿಸಲು ಬಾಣಸಿಗ ವಿಷ್ಣು 900 ಕೆಜಿ ಸೂಜಿ ರವಾ, 1000 ಕೆಜಿ ಸಕ್ಕರೆ, 2500 ಲೀಟರ್ ಹಾಲು, 300 ಕೆಜಿ ಅಡಿಕೆ, 1000 ಕೆಜಿ ತುಪ್ಪ ಮತ್ತು 2500 ಲೀಟರ್ ನೀರನ್ನು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

About the Author

VP
Vinutha Perla
ಅಯೋಧ್ಯೆ
ರಾಮ ಮಂದಿರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved