MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Mahashivratri 2022: ಇಂದು ಈ ಕೆಲಸಗಳನ್ನು ಮಾಡಿದ್ರೆ ಇಷ್ಟಾರ್ಥ ಸಿದ್ಧಿ

Mahashivratri 2022: ಇಂದು ಈ ಕೆಲಸಗಳನ್ನು ಮಾಡಿದ್ರೆ ಇಷ್ಟಾರ್ಥ ಸಿದ್ಧಿ

ಫಾಲ್ಗುಣ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿಯ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ.  ಮಹಾಶಿವರಾತ್ರಿಯ ದಿನ ಶಿವನು ಪಾರ್ವತಿ ಮಾತೆಯನ್ನು ಮದುವೆಯಾಗಿದ್ದನೆಂದು ನಂಬಲಾಗಿದೆ. ಈ ದಿನದಂದು ಭೋಲೆನಾಥನ ಭಕ್ತರು ಪೂಜ್ಯಭಾವನೆ ಮತ್ತು ನಂಬಿಕೆಯಿಂದ ಉಪವಾಸವನ್ನು ಆಚರಿಸುತ್ತಾರೆ. ಅದೇ ಸಮಯದಲ್ಲಿ, ಅವರು ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ.  

2 Min read
Suvarna News | Asianet News
Published : Mar 01 2022, 02:01 PM IST
Share this Photo Gallery
  • FB
  • TW
  • Linkdin
  • Whatsapp
17

ಮಹಾಶಿವರಾತ್ರಿಯ(Shivrathri) ದಿನ ಮಾಡುವ ಶಿವನ ಆರಾಧನೆಯು ಅನಂತ ಸಂಖ್ಯೆಯ ಫಲಗಳನ್ನು ನೀಡುತ್ತದೆ. ವಿವಿಧ ಇಷ್ಟಾರ್ಥಗಳ ಈಡೇರಿಕೆಗಾಗಿ ಭಕ್ತರು ಶಿವನನ್ನು ಪೂಜಿಸುತ್ತಾರೆ. ನೀವು ಸಹ ಅಪೇಕ್ಷಿತ ಉದ್ಯೋಗವನ್ನು ಬಯಸಿದರೆ, ಮಹಾಶಿವರಾತ್ರಿಯ ದಿನ ತೆಗೆದುಕೊಳ್ಳುವ ಕೆಲವು ಕ್ರಮಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತವೆ. ಅಪೇಕ್ಷಿತ ಕೆಲಸಕ್ಕೆ ಮಹಾಶಿವರಾತ್ರಿಯ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನೋಡೋಣ.  

27

ಕೆಲಸ(Work) ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು
ಮಹಾಶಿವರಾತ್ರಿಯ ದಿನ ಶಿವನಿಗೆ ಬೆಳ್ಳಿಯ ಲೋಟ ಅಥವಾ ಪಾತ್ರೆಯಿಂದ ಅಭಿಷೇಕ ಮಾಡಿ. ಶಿವಲಿಂಗದ ಮೇಲೆ ಅಭಿಷೇಕ ಮಾಡುವಾಗ 'ಓಂ ನಮಃ ಶಿವಾಯ' ಎಂದು ಜಪ ಮಾಡಿ. ಶಿವ ಪೂಜೆಯಲ್ಲಿ ಬಿಳಿ ಹೂವುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡಿದ ನಂತರ ಶಿವನಿಗೆ ನಮಸ್ಕಾರ ಮಾಡಿ, ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಪ್ರಾರ್ಥಿಸಬೇಕು. 

37

ಧನಲಾಭಕ್ಕಾಗಿ
ಮಹಾಶಿವರಾತ್ರಿಯ ದಿನ, ಶಿವನಿಗೆ ಪಂಚಾಮೃತದಿಂದ ಅಭಿಷೇಕ ಮಾಡಿ. ಶಿವಲಿಂಗದ ಮೇಲೆ ಒಂದೊಂದಾಗಿ ಪಂಚಾಮೃತದಲ್ಲಿ ಪದಾರ್ಥಗಳನ್ನು ಅರ್ಪಿಸಿ. ಕೊನೆಗೆ ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ.  ಇದರಿಂದ ಧನ ಪ್ರಾಪ್ತಿಯಾಗುತ್ತದೆ. 

47

ಪೂಜೆಯ(Pooja) ಬಳಿಕ ಶಿವನಿಗೆ ಅಭಿಷೇಕ ಮಾಡಬೇಕು. ಶಿವನಿಗೆ ಜಲ ಅರ್ಪಿಸಿದ ನಂತರ  'ಓಂ ನಮಃ ಪಾರ್ವತಿಪತಯೇ' ಈ ಮಂತ್ರವನ್ನು108 ಬಾರಿ ಪಠಿಸಿ. ಹೀಗೆ ಮಾಡಿದ ನಂತರ ಸಂಪತ್ತನ್ನು ಗಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಶಿವನನ್ನು ಪ್ರಾರ್ಥಿಸಿ. ಇದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಹೇಳಲಾಗುತ್ತದೆ. ನೀವು ಕೂಡ ತಪ್ಪದೆ ಇದನ್ನು ಮಾಡಿ. 

57

ಅತ್ಯುತ್ತಮ ಆರೋಗ್ಯಕ್ಕಾಗಿ
ಮಹಾಶಿವರಾತ್ರಿಯ ದಿನ ಸಂಜೆ ಶುದ್ಧ ಹಸುವಿನ ತುಪ್ಪ(Ghee)ದಿಂದ ಮಣ್ಣಿನ ದೀಪವನ್ನು ಹಚ್ಚಿ ಅದಕ್ಕೆ ಸ್ವಲ್ಪ ಪ್ರಮಾಣದ ಕರ್ಪೂರವನ್ನು ಸೇರಿಸಿ. ಇದಾದ ನಂತರ ಕಲ್ವೆಯ 4 ಬತ್ತಿಗಳನ್ನು ಮಾಡಿ ಸುಡಿ. ಇದರ ಹೊರತಾಗಿ ಹಾಲು, ಮಿಶ್ರಿ, ಅಕ್ಷತೆಯನ್ನು ನೀರಿನಲ್ಲಿ ಬೆರೆಸಿ ಶಿವಲಿಂಗದ ಮೇಲೆ ಅರ್ಪಿಸಿ. ಇದನ್ನು ಮಾಡುವಾಗ, 'ಓಂ ನಮಃ ಶಿವಾಯ' ಅನ್ನು 108 ಬಾರಿ ಪಠಿಸಿ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. 

67

ಮದುವೆಗೆ(Marraige) 
ದಾಂಪತ್ಯದಲ್ಲಿ ಯಾವುದೇ ರೀತಿಯ ಅಡೆತಡೆ ಇದ್ದರೆ ಅಥವಾ ಉತ್ತಮ ಜೀವನ ಸಂಗಾತಿಯನ್ನು ಬಯಸಿದರೆ, ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ,  ಸಂಜೆ ಹಳದಿ ಬಟ್ಟೆಗಳನ್ನು ಧರಿಸಿ ಶಿವ ದೇವಾಲಯಕ್ಕೆ ಹೋಗಿ. ಇದರ ನಂತರ, ನಿಮ್ಮ ವಯಸ್ಸಿಗೆ ಸಮವಾದ ಬಿಲ್ವಪತ್ರೆ ತೆಗೆದುಕೊಳ್ಳಿ. ಎಲ್ಲಾ ಬಿಲ್ವಪತ್ರೆಗಳ ಮೇಲೆ ಹಳದಿ ಗಂಧವನ್ನು ಹಚ್ಚಿ ಶಿವನಿಗೆ ಅರ್ಪಿಸಿ. 
 

77

ಪ್ರತಿ ಬಿಲ್ವಪತ್ರೆಯನ್ನು ಅರ್ಪಿಸುವಾಗ 'ಓಂ ನಮಃ ಶಿವಾಯ' ಎಂದು ಜಪಿಸುತ್ತಾರೆ. ಹೀಗೆ ಮಾಡಿದ ನಂತರ ಧೂಪದಿಂದ ಶಿವನ ಆರತಿ ಮಾಡಿ ಮತ್ತು ಶೀಘ್ರದಲ್ಲೇ ಮದುವೆಗಾಗಿ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ಬಯಕೆ ಈಡೇರಿಕೆಯ ಆಶೀರ್ವಾದ ಸಿಗುತ್ತದೆ. ಬೇಗನೆ ಮದುವೆಯಾಗುತ್ತದೆ ಎಂದು ಹೇಳಲಾಗುತ್ತದ್ದೆ. 

About the Author

SN
Suvarna News
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved