MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ನಿರ್ಜಲ ಏಕಾದಶಿ ದಿನ ತುಳಸಿಗೆ ಈ ವಸ್ತು ಅರ್ಪಿಸಿದ್ರೆ ನಿಮ್ಮ ವ್ರತ ವ್ಯರ್ಥ

ನಿರ್ಜಲ ಏಕಾದಶಿ ದಿನ ತುಳಸಿಗೆ ಈ ವಸ್ತು ಅರ್ಪಿಸಿದ್ರೆ ನಿಮ್ಮ ವ್ರತ ವ್ಯರ್ಥ

ನಿರ್ಜಲ ಏಕಾದಶಿ ದಿನದಂದು ತಾಯಿ ತುಳಸಿ ಪೂಜೆಗೆ ವಿಶೇಷ ಮಹತ್ವದೆ. ನಿಮ್ಮ ಪೂಜೆಗೆ ಫಲ ಸಿಗ್ಬೇಕು ಅಂದ್ರೆ ತುಳಸಿಗೆ ಏನೆಲ್ಲ ಅರ್ಪಿಸಬೇಕು, ಏನು ಅರ್ಪಿಸಬಾರದು ಎಂಬುದನ್ನು ತಿಳಿದಿರಬೇಕು.

2 Min read
Author : Roopa Hegde
Published : Jun 24 2026, 01:32 PM IST
Share this Photo Gallery
  • FB
  • TW
  • Linkdin
  • Whatsapp
16
ನಿರ್ಜಲ ಏಕಾದಶಿ
Image Credit : AI

ನಿರ್ಜಲ ಏಕಾದಶಿ

ಹಿಂದೂ ಧರ್ಮದಲ್ಲಿ ನಿರ್ಜನ ಏಕಾದಶಿ ವಿಶೇಷ ಮಹತ್ವ ಪಡೆದಿದೆ. ನಿರ್ಜಲ ಏಕಾದಶಿ, ಎಲ್ಲಾ ಏಕಾದಶಿಗಳಲ್ಲಿ ಅತ್ಯಂತ ಮುಖ್ಯವಾದ ಏಕಾದಶಿ. ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಬರುತ್ತದೆ. ಈ ವರ್ಷ ಜೂನ್ 25 ಅಂದ್ರೆ ನಾಳೆ ಗುರುವಾರ ನಿರ್ಜಲ ಏಕಾದಶಿ ಆಚರಿಸಲಾಗ್ತಿದೆ. ಈ ದಿನ ವ್ರತ ಮಾಡುವವರು ನೀರನ್ನೂ ಸೇವನೆ ಮಾಡದೆ ವ್ರತ ಮಾಡ್ತಾರೆ. ಈ ದಿನ ತುಳಸಿ ದೇವಿಗೆ ಪೂಜೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ, ತುಳಸಿ ಕೇವಲ ಸಸ್ಯವಲ್ಲ. ಅದು ದೇವರ ರೂಪ, ವಿಷ್ಣುಪ್ರಿಯಾ ಎಂದು ನಂಬಲಾಗಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಸಸ್ಯಗಳ ರಾಣಿ ಮತ್ತು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಕರೆಯಲಾಗುತ್ತದೆ. ನಿರ್ಜಲ ಏಕಾದಶಿಯಂದು ನೀವು ತುಳಸಿಯಿಂದ ವಿಶೇಷ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಪೂಜೆಯ ಸಮಯದಲ್ಲಿ ಕೆಲ ವಸ್ತುಗಳನ್ನು ಅಗತ್ಯವಾಗಿ ಅರ್ಪಿಸಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಕ್ಷತೆ
Image Credit : AI

ಅಕ್ಷತೆ

ನೀವು ನಿರ್ಜಲ ಏಕಾದಶಿಯಂದು ತುಳಸಿ ಪೂಜೆ ಮಾಡುವವರಾಗಿದ್ದರೆ ತುಳಸಿಗೆ ಅರಿಶಿನದಲ್ಲಿ ಕಲಸಿದ ಅಕ್ಷತೆಯನ್ನು ಅರ್ಪಿಸಿ. ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಅರಿಶಿನ ಮತ್ತು ಹಳದಿ ಪ್ರಿಯರಾಗಿದ್ದು, ಅವರ ಆಶೀರ್ವಾದ ನಿಮಗೆ ಲಭಿಸುತ್ತದೆ.

Related Articles

Related image1
ಜ್ಯೇಷ್ಠ ಪೂರ್ಣಿಮೆಯಂದು ಈ 4 ರಾಶಿಗೆ ಲಕ್ಷ್ಮಿ ಆಶೀರ್ವಾದದಿಂದ ಆದಾಯ ಹೆಚ್ಚಾಗುವುದು, ಉತ್ತಮ ಹೂಡಿಕೆ ಅವಕಾಶ
Related image2
ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ ನೆಡ್ತೀರಾ? ವಾಸ್ತು ಪ್ರಕಾರ ಇದು ಶುಭನಾ? ಅಶುಭನಾ?
36
ಕೆಂಪು ಅಥವಾ ಹಳದಿ ಚುನರಿ
Image Credit : AI

ಕೆಂಪು ಅಥವಾ ಹಳದಿ ಚುನರಿ

ಏಕಾದಶಿಯ ಶುಭ ಸಂದರ್ಭದಲ್ಲಿ, ತುಳಸಿ ಗಿಡದ ಸುತ್ತಲೂ ಹೊಸ ಕೆಂಪು ಅಥವಾ ಹಳದಿ ಚುನರಿಯನ್ನು ಸುತ್ತಬೇಕು. ಇದನ್ನು ತಾಯಿ ತುಳಸಿಯ ಗೌರವ ಮತ್ತು ವೈವಾಹಿಕ ಆನಂದದ ಸಂಕೇತವೆಂದು ಪರಿಗಣಿಸಲಾಗಿದೆ.ನೀವು ಚುನರಿ ಜೊತೆ ಬಳೆ, ಬಿಂದಿ, ಕುಂಕುಮ, ಅರಿಶಿನ ಸೇರಿದಂತೆ ಸೌಭಾಗ್ಯದ ಸಂಕೇತವಾಗಿರುವ ವಸ್ತುಗಳನ್ನು ತುಳಸಿಗೆ ಅರ್ಪಿಸಬೇಕು. ಇದು ಮನೆಯ ಸಂತೋಷ, ಸಮೃದ್ಧಿ ಹೆಚ್ಚಾಗಲು ಕಾರಣವಾಗುತ್ತದೆ.

46
ಕಲವಾ ದಾರ (ರಕ್ಷಾ ದಾರ)
Image Credit : AI

ಕಲವಾ ದಾರ (ರಕ್ಷಾ ದಾರ)

ನೀವು ಕೆಂಪು ಬಣ್ಣದ ಕಲವಾ ದಾರವನ್ನು ತುಳಸಿ ಗಿಡಕ್ಕೆ ಏಳು ಬಾರಿ ಸುತ್ತಬೇಕು. ಕಲವಾವನ್ನು ಕಟ್ಟುವಾಗ, ನಿಮ್ಮ ಕುಟುಂಬದ ಸಂತೋಷ ಮತ್ತು ಶಾಂತಿಗಾಗಿ ಪ್ರಾರ್ಥಿಸಬೇಕು.

56
ತುಪ್ಪ ದೀಪ ಮತ್ತು ಪರಿಕ್ರಮ
Image Credit : AI

ತುಪ್ಪ ದೀಪ ಮತ್ತು ಪರಿಕ್ರಮ

ಸಂಜೆ, ತುಳಸಿಯ ಮುಂದೆ ಶುದ್ಧ ಹಸುವಿನ ತುಪ್ಪದಿಂದ ತುಂಬಿದ ದೀಪವನ್ನು ಬೆಳಗಿಸಿ. ದೀಪವನ್ನು ಬೆಳಗಿದ ನಂತರ, ತುಳಸಿಗೆ ಕನಿಷ್ಠ ಮೂರು ಅಥವಾ ಏಳು ಬಾರಿ ಪ್ರದಕ್ಷಿಣೆ ಹಾಕಿ.

66
ಜಲ ಅರ್ಪಣೆ ಬೇಡ
Image Credit : AI

ಜಲ ಅರ್ಪಣೆ ಬೇಡ

ತುಳಸಿ ದೇವಿ ನಿರ್ಜಲ ಏಕಾದಶಿಯಂದು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಈ ದಿನ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವುದು ಒಳ್ಳೆಯದಲ್ಲ. ಹಾಗೆಯೇ ಅದರ ಎಲೆಗಳನ್ನು ಕೀಳುವುದಿಲ್ಲ ಉತ್ತಮವಲ್ಲ.ನಿರ್ಜಲ ಏಕಾದಶಿ ದಿನ ಅನಗತ್ಯವಾಗಿ ತುಳಸಿ ಗಿಡವನ್ನು ಮುಟ್ಟಬೇಡಿ. ದೂರದಿಂದಲೇ ಪೂಜೆ ಮಾಡಿ. ಹಾಗೆಯೇ ದೂರದಿಂದಲೇ ನಮಸ್ಕಾರ ಮಾಡಿ. ನೀವು ತುಳಸಿಯನ್ನು ಪದೇ ಪದೇ ಸ್ಪರ್ಶ ಮಾಡಿದ್ರೆ ಪೂಜೆ ಫಲ ಸಿಗುವುದಿಲ್ಲ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜ್ಯೋತಿಷ್ಯ

Latest Videos
Recommended Stories
Recommended image1
ಅಪರೂಪದ ಮೂರು ಗ್ರಹಗಳ ಸಂಯೋಗ, 5 ರಾಶಿಗಳಿಗೆ ಸುವರ್ಣಯುಗ, ಪ್ರತಿ ಕೆಲಸದಲ್ಲೂ ಯಶಸ್ಸು!
Recommended image2
ಶ್ರಾವಣದ ಮೊದಲು ವಿಧಿಯ ಆಟ ಬದಲಾಗುತ್ತದೆ, ಶನಿಯ ಹಿಮ್ಮುಖ ಚಲನೆಯು 4 ರಾಶಿಚಕ್ರ ಚಿಹ್ನೆಗಳನ್ನು ಶ್ರೀಮಂತಗೊಳಿಸುತ್ತದೆ
Recommended image3
ನ್ಯಾಯದ ದೇವರು ಶನಿ ವಿರುದ್ಧ ದಿಕ್ಕಿನಲ್ಲಿ ಚಲಿಸಲಿದ್ದಾನೆ... 3 ರಾಶಿಚಕ್ರ ಚಿಹ್ನೆಗಳ ಮೇಲೆ ದುಃಖಗಳ ಬೆಟ್ಟವೇ ಬೀಳಲಿದೆ
Related Stories
Recommended image1
ಜ್ಯೇಷ್ಠ ಪೂರ್ಣಿಮೆಯಂದು ಈ 4 ರಾಶಿಗೆ ಲಕ್ಷ್ಮಿ ಆಶೀರ್ವಾದದಿಂದ ಆದಾಯ ಹೆಚ್ಚಾಗುವುದು, ಉತ್ತಮ ಹೂಡಿಕೆ ಅವಕಾಶ
Recommended image2
ಬೇರೆಯವರ ಮನೆಯಿಂದ ತಂದ ಮನಿ ಪ್ಲಾಂಟ್ ನೆಡ್ತೀರಾ? ವಾಸ್ತು ಪ್ರಕಾರ ಇದು ಶುಭನಾ? ಅಶುಭನಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved