MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Chanakya Niti: ಈ 5 ಜಾಗದಲ್ಲಿ ಜಿಪುಣತನ ತೋರಿಸಿ… ಬ್ಯಾಂಕ್ ಅಕೌಂಟ್ ಸದಾ ತುಂಬಿರುತ್ತೆ!

Chanakya Niti: ಈ 5 ಜಾಗದಲ್ಲಿ ಜಿಪುಣತನ ತೋರಿಸಿ… ಬ್ಯಾಂಕ್ ಅಕೌಂಟ್ ಸದಾ ತುಂಬಿರುತ್ತೆ!

Chanakya Niti: ನೀವು ಕೂಡ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಶೋ ಆಫ್ ಮಾಡೋದಕ್ಕೆ ವ್ಯರ್ಥ ಮಾಡುತ್ತಿದ್ದೀರಾ? ಚಾಣಕ್ಯ ನೀತಿಯಲ್ಲಿ ಯಾವ ಐದು ವಿಷಯಗಳಲ್ಲಿ ನಾವು ಜಿಪುಣತೆ ತೋರಿಸಬೇಕು. ಅದರಿಂದ ನಮ್ಮ ಬ್ಯಾಂಕ್ ಅಕೌಂಟ್ ತುಂಬುತ್ತೆ ಅನ್ನೋದನ್ನು ತಿಳಿಸಿದ್ದಾರೆ.

2 Min read
Author : Pavna Das
Published : Jun 02 2026, 01:28 PM IST
Share this Photo Gallery
  • FB
  • TW
  • Linkdin
  • Whatsapp
17
ಚಾಣಕ್ಯ ನೀತಿ
Image Credit : Asianet News

ಚಾಣಕ್ಯ ನೀತಿ

ನೀವು ಕೂಡ ನಿಮಗೆ ಇಷ್ಟವಿಲ್ಲದ ಜನರನ್ನು ಮೆಚ್ಚಿಸಲು ನೀರಿನಂತೆ ಹಣವನ್ನು ಪೋಲು ಮಾಡುತ್ತಿದ್ದೀರಾ? ಸಮಾಜವು ಇದನ್ನು ಔದಾರ್ಯ ಎಂದು ಕರೆಯಬಹುದು. ಆದರೆ, ಚಾಣಕ್ಯ ನೀತಿ ಪ್ರಕಾರ, ಇದು ಆರ್ಥಿಕ ನಷ್ಟವಾಗಿದೆ. ಇನ್ನೊಬ್ಬರ ದೃಷ್ಟಿಯಲ್ಲಿ ದೊಡ್ಡವರಾಗಿ ಕಾಣಲು, ಶೋ ಆಫ್ ಮಾಡುವುದು ದುಂದು ವೆಚ್ಚ ಅಷ್ಟೇ. ಚಾಣಕ್ಯ ನೀತಿಯಲ್ಲಿ ತಿಳಿಸಿದಂತೆ ಈ ಐದು ವಿಷ್ಯದಲ್ಲಿ ಮನುಷ್ಯ ಯಾವಾಗಲೂ ಜಿಪುಣ ಆಗಿರಬೇಕಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಫೇಕ್ ಸೋಶಿಯಲ್ ಸ್ಟೇಟಸ್
Image Credit : Asianet News

ಫೇಕ್ ಸೋಶಿಯಲ್ ಸ್ಟೇಟಸ್

ದುಬಾರಿ ಮತ್ತು ಹೊಸ ವಸ್ತುಗಳನ್ನು ಖರೀದಿಸುವುದರಿಂದ ನೀವು ಶ್ರೀಮಂತರಾಗಿ ಕಾಣುತ್ತೀರಿ ಎಂದು ಅಂದುಕೊಂಡಿದ್ದೀರಾ? ನೀವು ಖರ್ಚು ಮಾಡೋದರಿಂದ ಮಾತ್ರ ಶ್ರೀಮಂತರು ಎಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ನಿಜವಾದ ರೂಪ ಅದಲ್ಲ. ಚಾಣಕ್ಯ ನೀತಿಯಲ್ಲಿ, ಇದನ್ನು ಸಂಪೂರ್ಣ ಮೂರ್ಖತನದ ಕ್ರಿಯೆ ಮತ್ತು ವಿನಾಶಕ್ಕೆ ನೇರ ಮಾರ್ಗ ಎನ್ನುತ್ತದೆ. ನೀವು ಶೋ ಆಫ್ ಗಾಗಿ ದುಂದು ವೆಚ್ಚ ಮಾಡುತ್ತಿದ್ದರೆ ನಿಮ್ಮನ್ನು ಎದುರಿನಿಂದ ಜನ ಹೊಗಳುವರು, ಆದರೆ ನಿಮ್ಮ ಹಿಂದಿನಿಂದ ಆಡಿಕೊಂಡು ನಗೋದು ಖಚಿತಾ. ಹಾಗಾಗಿ ಈ ಫೇಕ್ ಸೋಶಿಯಲ್ ಸ್ಟೇಟಸ್ ಭ್ರಮೆ ಬಿಟ್ಟರೆ ಹಣ ಉಳಿಸಬಹುದು.

Related Articles

Related image1
Chanakya Niti: ನಿಮ್ಮ ಬಗ್ಗೆ ಇನ್ನೊಬ್ಬರು ಏನು ಯೋಚನೆ ಮಾಡ್ತಿದ್ದಾರೆ… ಹೀಗೆ ತಿಳಿಯಿರಿ
Related image2
Chanakya Niti ಮನುಷ್ಯನಿಗೆ ಈ ನಾಲ್ಕು ವಿಷಯಗಳಲ್ಲಿ ಎಂದಿಗೂ ತೃಪ್ತಿಯೇ ಸಿಗಲ್ಲ
37
ವಿಷಕಾರಿ ಸಂಬಂಧಗಳು
Image Credit : Asianet News

ವಿಷಕಾರಿ ಸಂಬಂಧಗಳು

ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಅಪಹಾಸ್ಯ ಮಾಡುವ ಜನರ ಮೇಲೆ ನೀವು ಹಣವನ್ನು ಖರ್ಚು ಮಾಡುತ್ತಿದ್ದೀರಾ? ಅಂತಹ ವ್ಯಕ್ತಿಗಳು ಸ್ನೇಹಿತರಲ್ಲ, ಬದಲಾಗಿ ಶತ್ರುಗಳು. ಚಾಣಕ್ಯ ನೀತಿ ಪ್ರಕಾರ, ಒಬ್ಬ ದುಷ್ಟ ಸ್ನೇಹಿತನ ಸಂಘ ಎಂದರೆ, ಹಾವಿಗೆ ಹಾಲು ನೀಡಿ ಪೋಷಿಸಿದಂತೆ. ಕೊನೆಗೆ ಅದು ನಿಮ್ಮನ್ನು ಕಚ್ಚದೆ ಬಿಡೋದಿಲ್ಲ. ನಿಮಗೆ ಕಷ್ಟ ಎಂದು ಬಂದಾಗ ಅವರು ನಿಮ್ಮ ಜೊತೆ ಇರೋದೆ ಇಲ್ಲ.

47
ಸಮಾಜ ಮತ್ತು ಜನರು ಏನು ಹೇಳುತ್ತಾರೆ?
Image Credit : Getty

ಸಮಾಜ ಮತ್ತು ಜನರು ಏನು ಹೇಳುತ್ತಾರೆ?

90% ಜನರು ತಮ್ಮ ಹಣ ಸಂಪತ್ತನ್ನು ಕಳೆದುಕೊಳ್ಳುವುದು ಇಲ್ಲಿಯೇ. ಉದಾಹರಣೆಗೆ, ಒಬ್ಬ ತಂದೆ ತನ್ನ ಇಡೀ ಜೀವನದ ಉಳಿತಾಯವನ್ನು ಖರ್ಚು ಮಾಡುತ್ತಾನೆ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಗನ ಮದುವೆ ಮಾಡುತ್ತಾರೆ. ಯಾರಿಗಾಗಿ? ಮದುವೆ ದೊಡ್ಡದಾಗಿ ಮಾಡದೇ ಇದ್ದರೆ ಸಮಾಜ ಏನೆನ್ನುತ್ತದೆ ಎನ್ನುವ ಯೋಚನೆ ಜನರಿಗೆ. ಆದರೆ ಅವನು ಸಾಲದಲ್ಲಿ ಮುಳುಗಿದರೆ ಯಾವ ಸಮಾಜದ ಜನರು ಕೂಡ ಬಂದು ಸಹಾಯ ಮಾಡೋದಿಲ್ಲ.

57
ಅಗ್ಗದ ಜನಪ್ರಿಯತೆ
Image Credit : Chatgpt

ಅಗ್ಗದ ಜನಪ್ರಿಯತೆ

ಅಗ್ಗದ ಜನಪ್ರಿಯತೆ ಎಂದರೆ ಹಣ, ಆಡಂಬರದ ಮೂಲಕ ಅಥವಾ ಇತರರನ್ನು ಸಂತೋಷಪಡಿಸುವ ಮೂಲಕ ಗಳಿಸುವ ಹೊಗಳಿಕೆ ಮತ್ತು ಮನ್ನಣೆ. ಚಾಣಕ್ಯ ನೀತಿ ಇದನ್ನು ಅಪಾಯಕಾರಿ ಭ್ರಮೆ ಎನ್ನುತ್ತಾರೆ, ಏಕೆಂದರೆ ಇತರರ ದೃಷ್ಟಿಯಲ್ಲಿ ಶ್ರೇಷ್ಠನಾಗಿ ಕಾಣಿಸಿಕೊಳ್ಳುವ ಯೋಚನೆಯಲ್ಲಿ, ಒಬ್ಬ ವ್ಯಕ್ತಿಯು ತನ್ನ ತನವನ್ನು ಕಳೆದುಕೊಳ್ಳುತ್ತಾನೆ. ಯಾರು ಹೊಗಳಿಕೆಯನ್ನು ಇಷ್ಟಪಡುತ್ತಾರೋ ಅವರ ಪತನ ಗ್ಯಾರಂಟಿ.

67
ಉಳಿತಾಯದ ಭ್ರಮೆ
Image Credit : Chatgpt

ಉಳಿತಾಯದ ಭ್ರಮೆ

ಎಲ್ಲಾದರೂ 50% ರಿಯಾಯಿತಿ ನೋಡಿದಾಗ ನಿಮಗೆ ಸಂತೋಷವಾಗುತ್ತದೆಯೇ? ನೀವು ₹2,500 ಉಳಿಸಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನಿಜವಾಗಿ ನೀವು ₹2,500 ಖರ್ಚು ಮಾಡಿದ್ದೀರಿ. ರಿಯಾಯಿತಿ ಹೆಸರಲ್ಲಿ ಅಗತ್ಯವಿಲ್ಲದಿದ್ದರೂ ನೀವು ಖರ್ಚು ಮಾಡಿದ್ದೀರಿ.. ಚಾಣಕ್ಯ ನೀತಿಯ ಪ್ರಕಾರ ಇದೊಂದು ಮೂರ್ಖತನ ಅಷ್ಟೇ.

77
ಚಾಣಕ್ಯ ನೀತಿ ಏನು ಹೇಳುತ್ತದೆ?
Image Credit : Asianet News

ಚಾಣಕ್ಯ ನೀತಿ ಏನು ಹೇಳುತ್ತದೆ?

ಮಿತವ್ಯಯವು ಬಡತನವಲ್ಲ, ಶ್ರೀಮಂತನಾಗಲು ಉತ್ತಮ ತಂತ್ರ. ಜಗತ್ತು ನಿಮ್ಮನ್ನು ಖರ್ಚು ಮಾಡಲು ಪ್ರಚೋದಿಸಿದಾಗ, ಅಲ್ಲಿ ನಿಲ್ಲಿಸಿ. ಆರಂಭದಲ್ಲಿ, ಜನರು ನಿಮ್ಮನ್ನು ಜಿಪುಣರು ಎಂದು ಕರೆಯುತ್ತಾರೆ . ನಿಮ್ಮನ್ನು ಗೇಲಿ ಮಾಡುತ್ತಾರೆ. ಆದರೆ ವರ್ಷಗಳ ನಂತರ, ಅದೇ ಜನರು ಯಶಸ್ಸಿನ ರಹಸ್ಯವೇನು ಎಂದು ನಿಮ್ಮನ್ನು ಕೇಳುತ್ತಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಚಾಣಕ್ಯ ನೀತಿ
ಹಬ್ಬ
ಜ್ಯೋತಿಷ್ಯ
ಜೀವನಶೈಲಿ

Latest Videos
Recommended Stories
Recommended image1
ಜೂನ್ 8 ರಂದು ಶುಕ್ರನ ಸಂಚಾರ, 4 ರಾಶಿಚಕ್ರ ಚಿಹ್ನೆಗಳು ರಾಜಮನೆತನದ ಜೀವನ, ಉದ್ಯೋಗ ಬದಲಾವಣೆ, ಆರ್ಥಿಕ ಲಾಭ
Recommended image2
ಇಂದು ಬೆಳಗಿನ ಜಾವ 2:25 ರಿಂದ ಕರ್ಕಾಟಕ ರಾಶಿಯಲ್ಲಿ ಗುರು, ಆಷಾಢದಲ್ಲಿ ಈ ರಾಶಿಗೆ ಗುರು ಬಲ ಜೊತೆ ಅದೃಷ್ಟ
Recommended image3
ನಾಳೆ ಜೂನ್ 3 ರಂದು ಶಕ್ತಿಶಾಲಿ ಸಂಕಷ್ಟ ಚತುರ್ಥಿ, 4 ರಾಶಿ ಜೀವನವು ಎರಡೂವರೆ ವರ್ಷಗಳ ನಂತರ ಸುವರ್ಣ
Related Stories
Recommended image1
Chanakya Niti: ನಿಮ್ಮ ಬಗ್ಗೆ ಇನ್ನೊಬ್ಬರು ಏನು ಯೋಚನೆ ಮಾಡ್ತಿದ್ದಾರೆ… ಹೀಗೆ ತಿಳಿಯಿರಿ
Recommended image2
Chanakya Niti ಮನುಷ್ಯನಿಗೆ ಈ ನಾಲ್ಕು ವಿಷಯಗಳಲ್ಲಿ ಎಂದಿಗೂ ತೃಪ್ತಿಯೇ ಸಿಗಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved