ಪ್ರತಿದಿನ ಮಧ್ಯಾಹ್ನ ನಿದ್ದೆ ಮಾಡ್ತೀರಾ? ಹಾಗಾದ್ರೆ ಒಮ್ಮೆ ಚಾಣಕ್ಯರ ಮಾತುಗಳನ್ನ ಕೇಳಿ
Chanakya Niti For Afternoon Naps: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಮಧ್ಯಾಹ್ನದ ನಿದ್ದೆಯಿಂದ ಆಗುವ ಪರಿಣಾಮಗಳ ಬಗ್ಗೆಯೂ ಉಲ್ಲೇಖವಿದೆ.

ಭಾರತದ ಮಹಾನ್ ಪಂಡಿತರಲ್ಲಿ ಚಾಣಕ್ಯರೂ ಒಬ್ಬರು. ಮಾನವ ಜೀವನದ ಪ್ರತಿಯೊಂದು ಅಂಶದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿವೆ. ಆದ್ದರಿಂದ ಅವರ ಮಾತುಗಳಿಗೆ ಆ ಕಾಲದಲ್ಲಿ ಎಷ್ಟು ಮಹತ್ವವಿತ್ತೋ, ಈಗಲೂ ಅಷ್ಟೇ ಮಹತ್ವವಿದೆ. ವಿಶೇಷವಾಗಿ ಚಾಣಕ್ಯರು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ.
ನಿದ್ದೆ
ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆಯೂ ಒಂದು ಶ್ಲೋಕದಲ್ಲಿ ಹೇಳಿದ್ದಾರೆ. ನಮ್ಮಲ್ಲಿ ಹಲವರು ಮಧ್ಯಾಹ್ನ ಊಟದ ನಂತರ ಖಂಡಿತ ನಿದ್ದೆ ಮಾಡ್ತಾರೆ. ಆದರೆ ಚಾಣಕ್ಯ ನೀತಿ ಪ್ರಕಾರ, ಈ ಅಭ್ಯಾಸ ಒಳ್ಳೆಯದಲ್ಲ. ಯಾಕೆ ಹೀಗೆ ಹೇಳಿದ್ರು ಅಂತ ಈಗ ನೋಡೋಣ.
ಒಳ್ಳೆಯ ನಿದ್ರೆಯ ಮಂತ್ರ
ಚಾಣಕ್ಯ ನೀತಿ ಪ್ರಕಾರ, ಮಧ್ಯಾಹ್ನ ನಿದ್ದೆಯಿಂದ ಆಗುವ ಸಮಸ್ಯೆಗಳು: * ಕೆಲಸ ಕಳೆದುಕೊಳ್ಳುವಿರಿ ಚಾಣಕ್ಯ ನೀತಿ ಪ್ರಕಾರ, ಮಧ್ಯಾಹ್ನ ನಿದ್ದೆ ಮಾಡುವವರು ಇತರರಿಗಿಂತ ಕಡಿಮೆ ಕೆಲಸ ಮಾಡುತ್ತಾರೆ. ಇದರಿಂದ ಅವರ ಕೆಲಸ ಹೋಗುತ್ತದೆ. ಇವರು ಸಮಯ ವ್ಯರ್ಥ ಮಾಡುವುದನ್ನು ಬಿಟ್ಟರೆ ಜೀವನದಲ್ಲಿ ಏನನ್ನೂ ಮಾಡುವುದಿಲ್ಲ. ಕೆಲವೊಮ್ಮೆ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಚಾಣಕ್ಯ ನೀತಿ ಪ್ರಕಾರ, ಅಸ್ವಸ್ಥರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿರುವವರು ಮಾತ್ರ ಮಧ್ಯಾಹ್ನ ನಿದ್ದೆ ಮಾಡಬೇಕು. ಇಂಥವರಿಗೆ ಮಾತ್ರ ಹಗಲಿನಲ್ಲಿ ನಿದ್ದೆ ಮಾಡುವ ಹಕ್ಕಿದೆ ಎನ್ನುತ್ತಾರೆ ಚಾಣಕ್ಯರು. ನೀವು ಆರೋಗ್ಯವಾಗಿದ್ದರೆ, ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಿ. ಹೀಗೆ ಮಧ್ಯಾಹ್ನ ನಿದ್ದೆ ಮಾಡಿದರೆ ಸಮಯ ವ್ಯರ್ಥವಾಗುತ್ತದೆ.
ರೋಗಗಳ ಅಪಾಯ ಹೆಚ್ಚಾಗುತ್ತದೆ
ಚಾಣಕ್ಯರ ಪ್ರಕಾರ, ಮಧ್ಯಾಹ್ನ ನಿದ್ದೆ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳು ಬರುವ ಅಪಾಯವಿದೆ. ಗ್ಯಾಸ್, ಆಸಿಡಿಟಿ, ಅಜೀರ್ಣ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ವೈದ್ಯರೂ ಸಹ ಮಧ್ಯಾಹ್ನದ ನಿದ್ದೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಮಧ್ಯಾಹ್ನ 10 ರಿಂದ 15 ನಿಮಿಷಗಳ ಕಾಲ ಪವರ್ ನ್ಯಾಪ್ ತೆಗೆದುಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಆದರೆ 2 ರಿಂದ 3 ಗಂಟೆಗಳ ಕಾಲ ನಿದ್ದೆ ಮಾಡಿದರೆ ಆರೋಗ್ಯ ಹದಗೆಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಮಧ್ಯಾಹ್ನ ನಿದ್ದೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಮಾತ್ರವಲ್ಲದೆ, ರಾತ್ರಿಯೂ ಸರಿಯಾಗಿ ನಿದ್ದೆ ಬರುವುದಿಲ್ಲ.
ಬಾಯಿ ತೆರೆದು ಮಲಗುವುದು
ಆಯಸ್ಸು ಕಡಿಮೆ ಮಧ್ಯಾಹ್ನ ನಿದ್ದೆ ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಚಾಣಕ್ಯರು ನಂಬುತ್ತಾರೆ. "ಆಯುಕ್ತಯಿ ದಿವ ನಿದ್ರ" ಎಂಬ ಶ್ಲೋಕದ ಮೂಲಕ ಈ ವಿಷಯವನ್ನು ಹೇಳಿದ್ದಾರೆ. ಮಧ್ಯಾಹ್ನ ನಿದ್ದೆ ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಈ ಶ್ಲೋಕದ ಅರ್ಥ. ಭಗವಂತ ಮನುಷ್ಯನ ಪ್ರತಿ ಉಸಿರನ್ನೂ ಎಣಿಸುತ್ತಾನೆ, ನಿದ್ದೆ ಮಾಡುವಾಗ ಮನುಷ್ಯ ವೇಗವಾಗಿ ಉಸಿರಾಡುತ್ತಾನೆ ಎಂದು ಚಾಣಕ್ಯರು ನಂಬುತ್ತಾರೆ. ಆದ್ದರಿಂದ ಮಧ್ಯಾಹ್ನ ನಿದ್ದೆ ಮಾಡುವವರ ಆಯಸ್ಸು ಕಡಿಮೆಯಾಗಲು ಪ್ರಾರಂಭವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಶರೀರದಲ್ಲಿ ಶಕ್ತಿ ಕಡಿಮೆ ಇರುತ್ತದೆ ಚಾಣಕ್ಯರ ಪ್ರಕಾರ, ಮಧ್ಯಾಹ್ನ ನಿದ್ದೆ ಮಾಡುವುದರಿಂದ ಶರೀರದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ. ಮಧ್ಯಾಹ್ನದ ನಿದ್ದೆಯಿಂದ ಸೋಮಾರಿತನ ಬರುತ್ತದೆ. ಶರೀರದಲ್ಲಿ ಶಕ್ತಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಎಂದು ಚಾಣಕ್ಯರು ನಂಬುತ್ತಾರೆ. ಆದ್ದರಿಂದ ಇಂಥವರು ಮಧ್ಯಾಹ್ನದ ನಂತರ ಯಾವ ಕೆಲಸವನ್ನೂ ಮಾಡಲು ಬಯಸುವುದಿಲ್ಲ. ಆದರೆ ಇದು ಅವರ ವೃತ್ತಿಜೀವನವನ್ನು ಹಾಳುಮಾಡುತ್ತದೆ.
ಚಾಣಕ್ಯ ನೀತಿ ಪ್ರಕಾರ, ಮಧ್ಯಾಹ್ನ ನಿದ್ದೆ ಮಾಡುವವರಲ್ಲಿ ಆತ್ಮಶಿಸ್ತು ಕಡಿಮೆಯಾಗುತ್ತದೆ. ಇದರಿಂದ ಅವರ ಕೆಲಸ ಮತ್ತು ಜವಾಬ್ದಾರಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ.