MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಜಲಪ್ರಳಯದಿಂದ ಕಲಿಯುಗದ ಅಂತ್ಯ ! ವಿಷ್ಣು ಪುರಾಣದ ಈ ಭವಿಷ್ಯವಾಣಿ ಕೇಳಿದ್ರಾ?

ಜಲಪ್ರಳಯದಿಂದ ಕಲಿಯುಗದ ಅಂತ್ಯ ! ವಿಷ್ಣು ಪುರಾಣದ ಈ ಭವಿಷ್ಯವಾಣಿ ಕೇಳಿದ್ರಾ?

ದೇಶಾದ್ಯಂತ ಹೆಚ್ಚುತ್ತಿರುವ ಶಾಖದಿಂದಾಗಿ ಜನರ ಸ್ಥಿತಿ ಕೆಟ್ಟದಾಗಿದೆ. ತೀವ್ರ ಶಾಖದ ಬಗ್ಗೆ ವಿಷ್ಣು ಪುರಾಣದಲ್ಲಿ ಅನೇಕ ಭವಿಷ್ಯವಾಣಿಗಳನ್ನು ತಿಳಿಸಿದೆ. ಈ ಹಿಂದೆ ನಾವೇ ನಿಮಗೆ ಶಾಖದಿಂದ ಮುಂದೆ ಏನೆಲ್ಲಾ ಆಗಬಹುದು ಎನ್ನುವ ಮಾಹಿತಿ ಬಗ್ಗೆ ವಿಷ್ಣು ಪುರಾಣದಲ್ಲಿ ಏನು ಹೇಳಿದೆ ಅನ್ನೋದನ್ನು ತಿಳಿಸಿದ್ದೇವೆ. ಇದೀಗ ಕಲಿಯುಗದ ಅಂತ್ಯದ ಬಗ್ಗೆ ತಿಳಿಯಿರಿ.  

2 Min read
Pavna Das
Published : Jun 07 2024, 05:42 PM IST
Share this Photo Gallery
  • FB
  • TW
  • Linkdin
  • Whatsapp
17

ವಿಷ್ಣು ಪುರಾಣ (Vishnu Puran) ಪ್ರಪಂಚದ ಪ್ರಾರಂಭ ಮತ್ತು ಅಂತ್ಯ ಎರಡನ್ನೂ ವಿವರವಾಗಿ ವಿವರಿಸುತ್ತದೆ. ಇದರಲ್ಲಿ ಏರುತ್ತಿರುವ ಬಿಸಿಲಿನ ತಾಪದ ಬಗ್ಗೆಯೂ ಭವಿಷ್ಯವಾಣಿ ತಿಳಿಸಿದೆ. ಈ ಬಗ್ಗೆ ಈಗಾಗಲೇ ಒಂದಿಷ್ಟು ಮಾಹಿತಿ ನೀಡಿದ್ದೀವಿ. ಈವಾಗ ಪ್ರಳಯ, ಶಾಖ ಮತ್ತು ಕಲಿಯುಗದ ಅಂತ್ಯದ ಬಗ್ಗೆ ವಿವರವಾಗಿ ತಿಳಿಯೋಣ. 
 

27

ದೇಶದಲ್ಲಿ ಬಿಸಿಲಿನ ತಾಪ ನಿರಂತರವಾಗಿ ಹೆಚ್ಚುತ್ತಿದೆ. ತಾಪಮಾನ ಏರುತ್ತಿದ್ದಂತೆ, ವಿಷ್ಣು ಪುರಾಣದ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗುತ್ತಿವೆ. ವಿಷ್ಣು ಪುರಾಣ, ವಿಪರೀತ ಶಾಖವನ್ನು ವಿನಾಶದ ಸಂಕೇತವೆಂದು ತಿಳಿಸಿದೆ. ಹೆಚ್ಚುತ್ತಿರುವ ಶಾಖದ ನಂತರ ಏನಾಗುತ್ತದೆ, ಜನರ ಮೇಲೆ ಅದರ ಪರಿಣಾಮವೇನು ಅನ್ನೋದನ್ನು ಯಾವತ್ತೋ ವಿಷ್ಣು ಪುರಾಣದಲ್ಲಿ ಬರೆಯಲಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಶಾಖದ (heat wave)ನಂತರ ಏನಾಗುತ್ತದೆ ಎಂದು ತಿಳಿಯೋಣ.
 

37

ವಿಷ್ಣು ಪುರಾಣದ ಭವಿಷ್ಯವಾಣಿ ತುಂಬಾ ಭಯಾನಕವಾಗಿವೆ
ನೈಸರ್ಗಿಕ ವೀಪತ್ತಿನ(natural calamities) ಬಗ್ಗೆ ವಿಷ್ಣು ಪುರಾಣದಲ್ಲಿ ವಿವರಿಸಲಾಗಿದೆ. ವಿಷ್ಣು ಪುರಾಣದ ಭವಿಷ್ಯವಾಣಿಯ ಪ್ರಕಾರ, ಕಲಿಯುಗವು ತನ್ನ ಅಂತಿಮ ಹಂತದಲ್ಲಿದ್ದಾಗ, ಬಿಸಿಲು ವಿಪರೀತ ಹೆಚ್ಚಾದ ನಂತರ, ಎಲ್ಲೆಡೆ ಬರಗಾಲ ಉಂಟಾಗುತ್ತದೆ. ಮಳೆ ನಿಲ್ಲುತ್ತದೆ. ಮುಂಬರುವ ಸಮಯದಲ್ಲಿ, ಶಾಖವು ಎಷ್ಟು ಹೆಚ್ಚಾಗುತ್ತದೆ ಎಂದರೆ ಜನರಿಗೆ ಅದನ್ನು ಸಹಿಸಲು ಸಾಧ್ಯವಾಗೋದಿಲ್ಲ ಎಂದು ವಿಷ್ಣು ಪುರಾಣದಲ್ಲಿ ಬರೆಯಲಾಗಿದೆ. ವಿಷ್ಣುವು ಸೂರ್ಯನ ಕಿರಣಗಳನ್ನು ಸ್ಥಿರಗೊಳಿಸಿ ನೀರನ್ನು ಒಣಗಿಸುತ್ತಾನೆ.

47

ವಿಷ್ಣು ಪುರಾಣದಲ್ಲಿ, ಸುತಾಜಿಯ ಸಂಭಾಷಣೆ ಹೀಗಿದೆ, "ಓ ಮಹಾಮುನೆ. ಇದೊಂದು ಚಕ್ರ. ಅದರಲ್ಲಿ ಹದಿನಾಲ್ಕು ಮನು ಹಾದುಹೋಗುತ್ತಾನೆ. ಓ ಮೈತ್ರೇಯ! ಇದರ ಕೊನೆಯಲ್ಲಿ ಬ್ರಹ್ಮ ನೈಮಿತ್ತಿಕ (ಮುಂದೆ ಆಗುವ ಘಟನೆಗಳನ್ನು ಹೇಳುವವನು) ಪ್ರಳಯ ಉಂಟಾಗುತ್ತದೆ.ಈ ನೈಮಿತ್ತಿಕ ಪ್ರಳಯದ ವಿಪತ್ತನ್ನು ಭಯಾನಕ ರೀತಿಯಲ್ಲಿ ವಿವರಿಸುತ್ತೇನೆ. ಇದರ ಹಿಂದೆಯೇ ಪ್ರಾಕೃತಿಕ ಪ್ರಳಯವನ್ನೂ ವಿವರಿಸುತ್ತೇನೆ. ಸಾವಿರ ಚತುಷ್ಪಥಗಳ ಕೊನೆಯಲ್ಲಿ, ಭೂಮಿಯು ದುರ್ಬಲಗೊಂಡಾಗ, ನೂರು ವರ್ಷಗಳವರೆಗೆ ತೀವ್ರ ಬರಗಾಲವಿರುತ್ತದೆ ಎಂದು ಸುತಾಜಿ ಹೇಳಿದ್ದಾರೆ. 
 

57

ಭಗವಾನ್ ವಿಷ್ಣು ಎಲ್ಲಾ ನೀರನ್ನು ಹೀರಿಕೊಳ್ಳುತ್ತಾನೆ
ವಿಷ್ಣು ಪುರಾಣದ ಪ್ರಕಾರ, ಕಲಿಯುಗವು (Kaliyug) ಉತ್ತುಂಗದಲ್ಲಿದ್ದಾಗ, ಪರ್ವತಗಳಿಂದ ಬರುವ ನದಿಗಳು, ಕೊಳಗಳು ಸಂಪೂರ್ಣವಾಗಿ ಒಣಗುತ್ತವೆ. ಆ ಸಮಯದಲ್ಲಿ, ವಿಷ್ಣುವು ಸೂರ್ಯನ ಏಳು ಕಿರಣಗಳಲ್ಲಿ ನೆಲೆಸುತ್ತಾನೆ ಮತ್ತು ಎಲ್ಲಾ ನೀರನ್ನು ಹೀರಿಕೊಳ್ಳುತ್ತಾನೆ. ಈ ರೀತಿಯಾಗಿ, ಇಡೀ ಭೂಮಿಯಿಂದ ನೀರು ಹೀರಲ್ಪಡುತ್ತದೆ ಮತ್ತು ಇಡೀ ಭೂಮಿಯ ಮೇಲೆ ಬರಗಾಲ ಉಂಟಾಗುತ್ತೆ. ಆಮೆಯ ಬೆನ್ನಿನಂತೆಯೇ ಭೂಮಿಯು ಗಟ್ಟಿಯಾಗುತ್ತದೆ, ಭೂಮಿಯೂ ಬರಡಾಗಿ ಬಂಡೆಯಂತಾಗುತ್ತೆ.

67

ನೀರು ಒಣಗುತ್ತದೆ ಮತ್ತು ಆಹಾರದ ಕ್ಷಾಮ ಉಂಟಾಗುತ್ತದೆ
ಭೂಮಿ ಮೇಲಿನ ಎಲ್ಲಾ ನೀರು ಬರಿದಾದ ಮೇಲೆ, ದೇವರು ಏಳು ಸೂರ್ಯರ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಇದು ಎಷ್ಟು ಬಿಸಿಯಾಗಿರುತ್ತದೆ ಎಂದರೆ ಇಡೀ ತ್ರಿಲೋಕ ಅಂದರೆ ಪರ್ವತ, ನದಿ ಮತ್ತು ಸಮುದ್ರವು ಪ್ರಪಾತವೂ ಒಣಗುತ್ತದೆ. ನೀರು ಸಂಪೂರ್ಣವಾಗಿ ಖಾಲಿಯಾಗೋದರಿಂದ, ಭೂಮಿಯು ಸಂಪೂರ್ಣವಾಗಿ ಕಠಿಣವಾಗುತ್ತದೆ ಮತ್ತು ಆಹಾರದ ಒಂದು ಕಾಳು ಸಹ ಬೆಳೆಯುವುದಿಲ್ಲ. ಇದರಿಂದ ಮಾನವರು ಮತ್ತು ಇತರ ಜೀವಿಗಳು ಹಸಿವು, ನೀರಡಿಕೆ ಜೊತೆಗೆ ಕಡು ಬಿಸಿಲಿನಿಂದ ನರಳೋಕೆ ಆರಂಭಿಸ್ತಾರೆ. 

77

ವಿಷ್ಣು ತನ್ನ ರುದ್ರ ರೂಪದಿಂದ ಸೃಷ್ಟಿಕೊನೆಗೊಳಿಸುವನು
ಈ ಎಲ್ಲಾ ಸಂಗತಿಗಳು ಸಂಭವಿಸಿದ ನಂತರ, ಶ್ರೀ ಹರಿ ರುದ್ರನು ಸರ್ಪದ ಬಾಯಿಯಿಂದ ಕಾಣಿಸಿಕೊಂಡು ಭೂಮಿಯ ಕೆಳಗಿನಿಂದ ಜಗತ್ತನ್ನು ಸುಡಲು ಪ್ರಾರಂಭಿಸುತ್ತಾನೆ ಎಂದು ವಿಷ್ಣು ಪುರಾಣದ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ. ಇಡೀ ಭೂಮಿ ಬೆಂಕಿಯಲ್ಲಿ ದಹಿಸಿದ ಬಳಿಕ, ಭಾರಿ ಮಳೆ ಸುರಿಯೋಕೆ ಆರಂಭವಾಗುತ್ತೆ , ಈ ಮಳೆ ಅನೇಕ ವರ್ಷಗಳವರೆಗೆ ಮುಂದುವರಿಯುತ್ತದೆ. ಇದು ಭೂಮಿಯ ಬೆಂಕಿಯನ್ನು ಶಾಂತಗೊಳಿಸುತ್ತದೆ, ಆದರೆ ಇಡೀ ಜಗತ್ತಿನಲ್ಲಿ ನೀರು ತುಂಬುವಂತೆ ಮಾಡುತ್ತೆ. ಇಡೀ ಜಗತ್ತು ನೀರಿನಲ್ಲಿ ಮುಳುಗುತ್ತದೆ. ತೀವ್ರವಾದ ಶಾಖದ ನಂತರ, ಸೃಷ್ಟಿಯಲ್ಲಿ ಪ್ರವಾಹ (flood) ಉಂಟಾಗುತ್ತದೆ ಮತ್ತು ನಂತರ ಹೊಸ ಸೃಷ್ಟಿ ಪ್ರಾರಂಭವಾಗುತ್ತದೆ ಎಂದು ಶ್ರೀಮದ್ದೇವಿ ಭಾಗವತ ಪುರಾಣದಲ್ಲಿ ವಿವರಿಸಲಾಗಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಹ
ಭೂಮಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved