MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Amruthadhaare Serial: ಜೈದೇವನ ಮನೆಯಲ್ಲೇ ಮಲ್ಲಿ ಮದ್ವೆ ಮಾತುಕತೆ! ಭೂಮಿ ಮಿಸ್​ ಅಂದ್ರೆ ಸುಮ್ನೇನಾ?

Amruthadhaare Serial: ಜೈದೇವನ ಮನೆಯಲ್ಲೇ ಮಲ್ಲಿ ಮದ್ವೆ ಮಾತುಕತೆ! ಭೂಮಿ ಮಿಸ್​ ಅಂದ್ರೆ ಸುಮ್ನೇನಾ?

ಅಮೃತಧಾರೆ ಸೀರಿಯಲ್​ನಲ್ಲಿ ಯಾರೂ ಊಹಿಸದ ಧಮಾಕಾ ನಡೆದುಬಿಟ್ಟಿದೆ. ಜೈದೇವನ ಮನೆಯಲ್ಲಿಯೇ ಭೂಮಿಕಾ ಮಲ್ಲಿಯ ಮದುವೆಯ ಮಾತುಕತೆ ನಡೆಸಲು ಹುಡುಗನನ್ನು ಕರೆಸಿದ್ದಾಳೆ. ಮುಂದೇನು? 

2 Min read
Suchethana D
Published : Aug 20 2025, 09:03 PM IST
Share this Photo Gallery
  • FB
  • TW
  • Linkdin
  • Whatsapp
18
ಯಾರೂ ಊಹಿಸದ ಧದಮಾಕಾ
Image Credit : Instagram

ಯಾರೂ ಊಹಿಸದ ಧದಮಾಕಾ

ಅಮೃತಧಾರೆ ಸೀರಿಯಲ್​ನಲ್ಲಿ ಯಾರೂ ಊಹಿಸದ ಧಮಾಕಾ ನಡೆದುಬಿಟ್ಟಿದೆ. ಯಾವ ಕಾರಣಕ್ಕೂ ಶಕುಂತಲಾ ಮತ್ತು ಜೈದೇವನ ಚಳಿ ಬಿಡಿಸುವ ತವಕದಲ್ಲಿ ಇದ್ದಾಳೆ ಭೂಮಿಕಾ. ಇದೇ ಕಾರಣಕ್ಕೆ ಈಗ ನೇರವಾಗಿ ಜೈದೇವನ ಮನೆಗೆ ಮಲ್ಲಿಯನ್ನು ನೋಡಲು ಹುಡುಗ ಮತ್ತು ಅವನ ಮನೆಯವರನ್ನು ಭೂಮಿಕಾ ಕರೆಸಿದ್ದಾಳೆ. ಜೈದೇವ ಮತ್ತು ಅವನ ಹೆಂಡ್ತಿ ದಿಯಾಳಿಗೆ ಹೊಟ್ಟೆಕಿಚ್ಚು ತರಿಸುವ ಸಲುವಾಗಿ ಮಲ್ಲಿಯ ಮದುವೆಯ ಮಾತುಕತೆಯನ್ನು ಅವರ ಎದುರೇ ಮಾಡಿದ್ದಾಳೆ.

28
ಜೈದೇವನ ಮನೆಯಲ್ಲಿಯೇ ಹೆಣ್ಣುನೋಡುವ ಶಾಸ್ತ್ರ
Image Credit : Instagram

ಜೈದೇವನ ಮನೆಯಲ್ಲಿಯೇ ಹೆಣ್ಣುನೋಡುವ ಶಾಸ್ತ್ರ

ದಿಯಾಳಿಗೆ ಗಾಬರಿಯಾಗಿ ಜೈದೇವನನ್ನು ಕರೆಸಿದ್ದಾಳೆ. ಮೊದಲಿಗೆ ದಿಯಾಳನ್ನು ಗಂಡಿನ ಕಡೆಯವರಿಗೆ ಪರಿಚಯ ಮಾಡಿಸಿದ ಭೂಮಿಕಾ, ಇವಳು ಮಲ್ಲಿಯ ಮಾಜಿ ಗಂಡನನ್ನು ಈಗ ಕಟ್ಟಿಕೊಂಡವಳು ಎಂದಿದ್ದಾಳೆ. ಕೊನೆಗೆ ಮನೆಗೆ ಬಂದ ಜೈದೇವನನ್ನು ನೋಡಿ ಇವನೇ ಮಲ್ಲಿಯ ಮಾಜಿ ಗಂಡ ಎಂದಿದ್ದಾನೆ. ಅವರನ್ನು ನೋಡಿ ಜೈದೇವ್​ ಮತ್ತು ದಿಯಾ ಬರಸಿಡಿಲು ಬಡಿದವರಂತೆ ನಿಂತಿದ್ದಾರೆ.

Related Articles

Related image1
Dharmasthala ಸುಜಾತಾ ಭಟ್​ ಕೇಸ್​: ಸುದೀಪ್​ ಅಭಿಮಾನಿಗಳಿಂದ ಹೀಗೊಂದು ಭಾರಿ ಮನವಿ...
Related image2
ಕಳಚಿಬಿತ್ತು ಮುಸುಕುಧಾರಿಯ ಮುಖವಾಡ; ಕೆನ್ನೆಗೆ ಬಿದ್ದ ಏಟಿಗೆ ವಿಲನ್​ ವಿಲವಿಲ!
38
ಕಣ್ಣು-ಕಣ್ಣು ಸೇರಾಯ್ತು
Image Credit : Instagram

ಕಣ್ಣು-ಕಣ್ಣು ಸೇರಾಯ್ತು

ಕೊನೆಗೆ ಮಲ್ಲಿಗೆ ಹೋಗಿ ಕಾಫಿ ಮಾಡಿಕೊಂಡು ಬರುವಂತೆ ಭೂಮಿಕಾ ಹೇಳಿದ್ದಾಳೆ. ದಿಯಾಳಿಗೂ ಹೋಗಿ ಸಹಾಯ ಮಾಡು ಎಂದಿದ್ದಾಳೆ. ಇವೆಲ್ಲವನ್ನೂ ನೋಡಿದರೆ ಮಲ್ಲಿ ಅದೆಂಥಾ ಖತರ್ನಾಕ್​ ಪ್ಲ್ಯಾನ್​ ಮಾಡಿದ್ದಾಳೆ ಎನ್ನುವುದು ತಿಳಿಯುತ್ತದೆ. ಮಲ್ಲಿಗೆ ಮದುವೆ ಮಾಡಿಸುವ ಉದ್ದೇಶ ಇಲ್ಲದಿದ್ದರೂ ಜೈದೇವನನ್ನು ಮಣ್ಣುಮುಕ್ಕಿಸಲು ಈ ರೀತಿ ಮಾಡ್ತಿರೋದು ತಿಳಿಯುತ್ತದೆ.

48
ವಿನಲ್​ನಗಳ ಬಂಡವಾಳ ಬಯಲು
Image Credit : Instagram

ವಿನಲ್​ನಗಳ ಬಂಡವಾಳ ಬಯಲು

ಏಕೆಂದರೆ, ಇದಾಗಲೇ ವಿಲನ್​ಗಳ ಮುಖವಾಡ ಭೂಮಿಕಾ ಮುಂದೆ ಬಟಾಬಯಲಾಗಿದೆ. ಅತ್ತೆ ಶಕುಂತಲಾ ಎಷ್ಟು ದೊಡ್ಡ ಸಂಚು ಮಾಡಿದ್ದಾಳೆ ಎಂದು ಸಾಕ್ಷಿ ಸಹಿತ ಪೆದ್ದು ಗಂಡನಿಗೆ ತೋರಿಸಿದರೂ, ಆತನಿಗೆ ತನ್ನ ಚಿಕ್ಕಮ್ಮನೇ ಸರ್ವಸ್ವ. ಅವಳ ವಿರುದ್ಧ ಒಂದೇ ಒಂದು ಮಾತು ಕೇಳಲು ಆತನಿಗೆ ಆಗುವುದಿಲ್ಲ. ಇದೇ ಕಾರಣಕ್ಕೆ ಭೂಮಿಕಾಗೆ ಭಾರಿ ಸೋಲು ಉಂಟಾಗಿದೆ.

58
ಬೆಮಕಿ ಚೆಂಡಾದ ಭೂಮಿಕಾ
Image Credit : Instagram

ಬೆಮಕಿ ಚೆಂಡಾದ ಭೂಮಿಕಾ

ಆದರೆ ಆಕೆ ಬರೀ ಭೂಮಿಕಾ ಅಲ್ಲ, ಬೆಂಕಿಯ ಚೆಂಡು. ಇದೇ ವೇಳೆ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಭೂಮಿಕಾಳ ಮಗುವನ್ನು ಕೊಲ್ಲಲು ಮಾಸ್ಕ್​ ಹಾಕಿಕೊಂಡು ಬಂದಿದ್ದ ಜೈದೇವ. ಆದರೆ ಮಲ್ಲಿ ಆತನನ್ನು ಹೊಡೆದು ಓಡಿಸಿದ್ದಳು.ಆದರೆ ಆತನೇ ಜೈದೇವ ಎನ್ನುವುದು ತಿಳಿದಿರಲಿಲ್ಲ

68
ಮಾಸ್ಕ್​ ಮ್ಯಾನ್​ ಬಯಲಿಗೆ...
Image Credit : Instagram

ಮಾಸ್ಕ್​ ಮ್ಯಾನ್​ ಬಯಲಿಗೆ...

ಇದೀಗ ಸೃಜನ್​ ಈ ಬಗ್ಗೆ ತನಿಖೆ ನಡೆಸಿದಾಗ ಮಾಸ್ಕ್​ಮ್ಯಾನ್​ ಜೈದೇವ ಎನ್ನುವುದು ತಿಳಿದಿದೆ. ಇದನ್ನು ಗೌತಮ್​ಗೆ ಹೇಳೋಣ ಎಂದು ಸೃಜನ್​ ಹೇಳಿದಾಗ ಭೂಮಿಕಾ ಅದನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ, ಇದನ್ನೂ ಆತ ನಂಬದಿದ್ದರೆ ಎನ್ನುವ ಸ್ಥಿತಿ ಅವಳದ್ದು. ಅಷ್ಟೇ ಅಲ್ಲದೇ ಈ ಮಾಸ್ಕ್​ಮ್ಯಾನ್​ ಜೈದೇವನೇ ಎಂದು ಸಾಬೀತು ಮಾಡುವುದು ಆಕೆಗೆ ಕಷ್ಟವೂ ಆಗಿದೆ. ಹಾಗೆಂದು ಆಕೆ ಸುಮ್ಮನೇ ಬಿಡಲಿಲ್ಲ. ಸೀದಾ ಜೈದೇವ ಇರುವಲ್ಲಿಗೆ ಹೋಗಿದ್ದಳು. ಆ ಸಮಯದಲ್ಲಿ ಜೈದೇವ ಗೌತಮ್​ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಭೂಮಿಕಾಗೂ ಏಕವಚನದಲ್ಲಿ ಬೈದಿದ್ದಾನೆ. ಗಂಡನ ಬಗ್ಗೆ ಇಲ್ಲಸಲ್ಲದ್ದು ಹೇಳಿದ್ರೆ ಭೂಮಿಕಾ ಸುಮ್ಮನೇ ಇರ್ತಾಳಾ? ಆಗ ಶಕುಂತಲಾ ಕೆನ್ನೆಗೆ ಬಿಗಿದಂತೆ ಜೈದೇವ್​ಗೂ ಕಪಾಳಮೋಕ್ಷ ಮಾಡಿದ್ದಾಳೆ.

78
ಜೈದೇವ ಕಂಗಾಲು
Image Credit : Instagram

ಜೈದೇವ ಕಂಗಾಲು

ಈ ಅನಿರೀಕ್ಷಿತ ಘಟನೆಯಿಂದ ಜೈದೇವ ಕಂಗಾಲಾಗಿ ಹೋಗಿದ್ದಾನೆ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನನ್ನನ್ನು ಮುಟ್ಟಿ ನೀನು ದೊಡ್ಡ ತಪ್ಪು ಮಾಡಿದ್ದಿ ಎಂದಿದ್ದಾನೆ. ಅದಕ್ಕೆ ಭೂಮಿಕಾ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಅಣ್ಣ ಶ್ರಮಪಟ್ಟು ಕಟ್ಟಿದ ಕೋಟೆಯಲ್ಲಿ, ಮಜ ಮಾಡಿಕೊಂಡು ಇದ್ದವರು ನೀವು. ನಿಮ್ಮದೇ ಐಡೆಂಟಿಟಿ ಏನಿದೆ ಎಂದು ಪ್ರಶ್ನಿಸಿದ್ದಾಳೆ.

88
ಶಕುಂತಲಾಗೂ ಕೆಟ್ಟ ಗ್ರಹಚಾರ
Image Credit : Instagram

ಶಕುಂತಲಾಗೂ ಕೆಟ್ಟ ಗ್ರಹಚಾರ

ಒಟ್ಟಿನಲ್ಲಿ ಅತ್ತ ಶಕುಂತಲಾ ವರ್ಸಸ್​ ಭೂಮಿಕಾ ಆಗಿದ್ರೆ ಇತ್ತ ಜೈದೇವ್​ ವರ್ಸಸ್​ ಭೂಮಿಕಾ ಆಗಿದೆ. ಅದೇ ಇನ್ನೊಂದೆಡೆ, ಭಾಗ್ಯಳಿಗೆ ಹೊಡೆಯಲು ಹೋದಾಗ ಭಾಗ್ಯ ಶಕುಂತಲಾಳ ಕೈಯನ್ನು ತಿರುಚಿದ್ದಾಳೆ. ಇದನ್ನು ನೋಡಿ ಶಕುಂತಲಾ ಥರಥರ ನಡುಗಿ ಹೋಗಿದ್ದಾಳೆ. ಭಾಗ್ಯ ಇಷ್ಟು ಹುಷಾರಾಗಿರುವುದು ಆಕೆಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್​ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವೀಕ್ಷಕರಿಗೆ ಸಕತ್​ ಖುಷಿ ಕೊಡುತ್ತಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved