MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ‘ನಾನೇನ್‌ ಪೂಜೆ ಮಾಡೋವ್ನ ಥರ ಕಾಣ್ತೀನಾ?’ ಎಂದಿದ್ದ Virat Kohli ಈಗ ಜಪ ಎಣಿಕೆ ಮಶಿನ್‌ ಧರಿಸ್ತಿರೋದ್ಯಾಕೆ?

‘ನಾನೇನ್‌ ಪೂಜೆ ಮಾಡೋವ್ನ ಥರ ಕಾಣ್ತೀನಾ?’ ಎಂದಿದ್ದ Virat Kohli ಈಗ ಜಪ ಎಣಿಕೆ ಮಶಿನ್‌ ಧರಿಸ್ತಿರೋದ್ಯಾಕೆ?

ಕ್ರಿಕೆಟರ್ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಆಧ್ಯಾತ್ಮಿಕ ಜೀವನಕ್ಕೆ ಯಾಕೆ ಅಷ್ಟು ಮಹತ್ವ ಕೊಡುತ್ತಾರೆ?‌ ಕೈಯಲ್ಲಿ ಜಪ ಎಣಿಕೆ ಮಶಿನ್‌ ಧರಿಸಿ ವೃಂದಾವನ, ದೇವಸ್ಥಾನಕ್ಕೆ ಯಾಕೆ ಭೇಟಿ ಕೊಡ್ತಾರೆ? 

2 Min read
Padmashree Bhat
Published : May 24 2025, 03:53 PM IST| Updated : May 29 2025, 03:47 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಟೈಲಿಶ್‌ ಹುಡುಗ ಆಧ್ಯಾತ್ಮದತ್ತ...!
Image Credit : anushka sharma instagram

ಸ್ಟೈಲಿಶ್‌ ಹುಡುಗ ಆಧ್ಯಾತ್ಮದತ್ತ...!

ಆಗ ವಿರಾಟ್‌ ಕೊಹ್ಲಿ ವೈಸ್‌ ಇಂಡಿಯಾ ಕ್ಯಾಪ್ಟನ್‌ ಆಗಿದ್ದ ಟೈಮ್. ‌ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು “ನೀವು ಮ್ಯಾಚ್‌ಗೂ ಮುನ್ನ ಪ್ರಾರ್ಥನೆ, ಪೂಜೆ ಮಾಡ್ತೀರಾ?” ಎಂದು ಪ್ರಶ್ನೆ ಕೇಳಿದ್ದರು. ಆಗ ವಿರಾಟ್‌ ಕೊಹ್ಲಿ, “ನಾನು ನಿಮಗೆ ಪೂಜೆ ಮಾಡುವವನ ಥರ ಕಾಣಸ್ತೀನಾ?” ಅಂತ ಪ್ರಶ್ನೆ ಮಾಡಿದ್ದರು. ಇಂದು ಮದುವೆಯಾಗಿ, ಎರಡು ಮಕ್ಕಳ ತಂದೆ ಪದೇ ಪದೇ ದೇವಸ್ಥಾನಗಳಿಗೆ ಭೇಟಿ ಕೊಡ್ತಾರೆ, ಆಶ್ರಮಗಳಿಗೆ ಹೋಗ್ತಾರೆ, ಅಷ್ಟೇ ಅಲ್ಲದೆ ಜಪ ಎಣಿಕೆ ಮಶಿನ್‌ನ್ನು ಕೈಗೆ ಧರಿಸ್ತಾರೆ. ಹಾಗಾದರೆ ವಿರಾಟ್‌ ಯಾಕೆ ಇಷ್ಟು ಬದಲಾದರು?

26
ನನ್ನ ಪ್ರಯತ್ನಕ್ಕೆ ಫಲ ಸಿಗತ್ತೆ
Image Credit : anushka sharma instagram

ನನ್ನ ಪ್ರಯತ್ನಕ್ಕೆ ಫಲ ಸಿಗತ್ತೆ

“ನಾನು ಟ್ಯಾಟೂ ಹಾಕಿಕೊಂಡ ಹುಡುಗ, ನಾನು ಸ್ಟೈಲಿಶ್‌ ಬಟ್ಟೆಗಳನ್ನು ಹಾಕ್ತೀನಿ. ಹೀಗಾಗಿ ನನ್ನ ಬಗ್ಗೆ ನೆಗೆಟಿವ್‌ ಯೋಚನೆ ಮಾಡೋದು ಸುಲಭ. ನನಗೆ ಕ್ರಿಕೆಟ್‌ನಲ್ಲಿ ಸುಧಾರಿಸಬೇಕು. ನನ್ನ ಪರಿಶ್ರಮ, ಪ್ರಯತ್ನಕ್ಕೆ ಒಂದು ದಿನ ಫಲ ಸಿಗುತ್ತದೆ ಎಂದು ನಾನು ನಂಬ್ತೀನಿ” ಎಂದು ಹೇಳಿದ್ದರು.

Related Articles

Related image1
ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟ ಸಿಂಬು..?!
Related image2
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ವಿರಾಟ್‌ ಕೊಹ್ಲಿ, ಈ ದಾಖಲೆ ಮಾಡಿದ ಏಕೈಕ ಆಟಗಾರ!
36
ನಿವೃತ್ತಿ ಘೋಷಿಸಿ ವೃಂದಾವನಕ್ಕೆ ಹೋದ್ರು
Image Credit : anushka sharma instagram

ನಿವೃತ್ತಿ ಘೋಷಿಸಿ ವೃಂದಾವನಕ್ಕೆ ಹೋದ್ರು

ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಒಂದು ದಿನದ ಬಳಿಕ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯ, ಉತ್ತರಾಖಂಡದ ನೀಮ್ ಕರೋಲಿ ಬಾಬಾ ಆಶ್ರಮ, ಈಗ ವೃಂದಾವನಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಟ್ಯಾಕ್ಸಿಯಲ್ಲಿ ಮಾಸ್ಕ್ ಧರಿಸಿ, ಸರಳ ಉಡುಗೆಯಲ್ಲಿ ಬಂದಿದ್ದ ವಿರಾಟ್‌ ಕೊಹ್ಲಿ ಅವರು ಮಂತ್ರ ಜಪಕ್ಕೆ ಬಳಸುವ ಡಿಜಿಟಲ್ ಕೌಂಟರ್ ಹಿಡಿದಿದ್ದರು. ಇದು ಎಲ್ಲರ ಗಮನಸೆಳೆದಿದೆ. ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರ ಬಳಿ ಈ ದಂಪತಿ ಒಂದಷ್ಟು ಹೊತ್ತು ಮಾತನಾಡಿ, ಸಲಹೆ ಪಡೆದುಕೊಂಡು ಬಂದಿದೆ.

46
ಕ್ಯಾಮರಾದಿಂದ ಮಕ್ಕಳನ್ನು ದೂರ ಇಟ್ಟ ಜೋಡಿ!
Image Credit : anushka sharma instagram

ಕ್ಯಾಮರಾದಿಂದ ಮಕ್ಕಳನ್ನು ದೂರ ಇಟ್ಟ ಜೋಡಿ!

ನಟಿ ಅನುಷ್ಕಾ ಶರ್ಮಾ ಅವರೇ ಕೊಹ್ಲಿಯನ್ನು ಈ ಆಧ್ಯಾತ್ಮಿಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದಾರೆ. ಮಕ್ಕಳಾದ ವಮಿಕಾ, ಅಕಾಯ್‌ರನ್ನು ಪಬ್ಲಿಕ್‌ ಜೀವನ ಹಾಗೂ ಕ್ಯಾಮರಾ ಕಣ್ಣಿನಿಂದ ದೂರ ಇಟ್ಟಿರುವ ಈ ಜೋಡಿ, ಆಧ್ಯಾತ್ಮಿಕ ಯಾತ್ರೆಗಳನ್ನು ತಮ್ಮ ಜೀವನದ ಭಾಗ ಮಾಡಿಕೊಂಡಿದ್ದಾರೆ.

56
ಹರ ಹರ ಮಹಾದೇವ್‌ ಎಂದು ಕೂಗಿದ್ದ ಕೊಹ್ಲಿ
Image Credit : anushka sharma instagram

ಹರ ಹರ ಮಹಾದೇವ್‌ ಎಂದು ಕೂಗಿದ್ದ ಕೊಹ್ಲಿ

ವಿರಾಟ್ ಕೊಹ್ಲಿಯ ಆಧ್ಯಾತ್ಮಿಕ ಜೀವನದಲ್ಲಿ ಮಹಾಕಾಲೇಶ್ವರ ದೇವಾಲಯದ ಭೇಟಿಯು ಒಂದು ಪ್ರಮುಖ ಕ್ಷಣವಾಗಿತ್ತು. ಒಮ್ಮೆ ಧಾರ್ಮಿಕ ಗುರುತನ್ನು ತಿರಸ್ಕರಿಸಿದ್ದ ಕೊಹ್ಲಿ, ದೇವಾಲಯದಿಂದ ಹೊರಗೆ ಬಂದಾಗ “ಹರ್ ಹರ್ ಮಹಾದೇವ್” ಎಂದು ಕೂಗಿದ್ದರು.‌ ಯಾವ ಕಾರಣಕ್ಕೆ ಆಧ್ಮಾತ್ಮದತ್ತ ಅವರು ತಿರುಗಿದರು ಎನ್ನುವ ಪ್ರಶ್ನೆಗೆ ಅವರಿನ್ನೂ ಉತ್ತರ ಕೊಟ್ಟಿಲ್ಲ. ಪ್ರೇಮಾನಂದ ಮಹಾರಾಜ್ ಬೋಧನೆಗಳು ವಿರಾಟ್ ಕೊಹ್ಲಿಯ ಜೀವನ, ಕ್ರಿಕೆಟ್‌ನಲ್ಲಿ ಭಾವನಾತ್ಮಕ ಸಮತೋಲನವನ್ನು ತಂದಿವೆ ಎಂದು ಹೇಳಲಾಗುತ್ತಿದೆ.

66
ನೀಮ್ ಕರೋಲಿ ಬಾಬಾ ಆಶ್ರಮ‌ದಲ್ಲಿ ಕೊಹ್ಲಿ
Image Credit : anushka sharma instagram

ನೀಮ್ ಕರೋಲಿ ಬಾಬಾ ಆಶ್ರಮ‌ದಲ್ಲಿ ಕೊಹ್ಲಿ

ಸ್ಟೀವ್ ಜಾಬ್ಸ್, ಮಾರ್ಕ್ ಜಕರ್‌ಬರ್ಗ್‌ನಂತಹ ಜಾಗತಿಕ ಚಿಂತಕರಿಂದ ಗೌರವಿಸಲ್ಪಟ್ಟ ನೀಮ್ ಕರೋಲಿ ಬಾಬಾ ಆಶ್ರಮ‌ವು ಅಥವಾ ಆಧ್ಯಾತ್ಮಿಕ ಕೇಂದ್ರವು ವಿರಾಟ್ ಕೊಹ್ಲಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿತ್ತು. . ಈ ಭೇಟಿಯ ನಂತರ ಕೊಹ್ಲಿಯಲ್ಲಿ ಒಂದು ಮೃದುವಾದ, ಆತ್ಮಾವಲೋಕನದ ಶಕ್ತಿಯು ಹೊರಹೊಮ್ಮಿತು ಎನ್ನುತ್ತಾರೆ. ಇನ್ನು ವಿರಾಟ್‌ ಕೊಹ್ಲಿ ಟ್ಯಾಟೂನಲ್ಲಿ ಶಿವನ ಚಿತ್ರ ಇದೆ ಎಂದು ಹೇಳಲಾಗುತ್ತಿದೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ
ಆಧ್ಯಾತ್ಮ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved