MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Toxic Movie Live Updates
Toxic Movie Review
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Sports
  • Cricket
  • ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್‌ಗೆ ನೆಮ್ಮದಿಯ ನಿದ್ದೆ, ಕಾರಣ ಏನು?

ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್‌ಗೆ ನೆಮ್ಮದಿಯ ನಿದ್ದೆ, ಕಾರಣ ಏನು?

ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್‌ಗೆ ನೆಮ್ಮದಿಯ ನಿದ್ದೆ, ಕಾರಣ ಏನು? ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 61 ರನ್ ಹೀನಾಯ ಸೋಲಿನ ಬಳಿಕವೂ ಪಾಕ್ ನಾಯಕನಲ್ಲಿ ಸೋಲಿಗಿಂತ ಸಂಭ್ರಮೇ ಕಾಣುತ್ತಿದೆ

2 Min read
Author : Chethan Kumar
Published : Feb 15 2026, 11:43 PM IST
Share this Photo Gallery
  • FB
  • TW
  • Linkdin
  • Whatsapp
17
ಕರೆದು ಬಲೆಗೆ ಬೀಳಿಸಿದ ಆಘಾ!
Image Credit : Getty

ಕರೆದು ಬಲೆಗೆ ಬೀಳಿಸಿದ ಆಘಾ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ಮುಗ್ಗರಿಸಿದೆ. ಬರೋಬ್ಬರಿ 61 ರನ್ ಸೋಲು ಕಂಡಿರುವ ಪಾಕಿಸ್ತಾನ ವಿರುದ್ದ ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಇತ್ತ ತಂಡದ ಆಟಗಾರರು ಸೋಲಿನ ನೋವಿನಲ್ಲಿದ್ದಾರೆ. ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಆಲಿಗೆ ಯಾವುದೇ ನೋವಿಲ್ಲ. ಬದಲಾಗಿ ನೆಮ್ಮದಿಯಿದೆ. ಕಾರಣ ಅಭಿಷೇಕ್ ಶರ್ಮಾ ಆಡಬೇಕು ಆಹ್ವಾನಿಸಿದ್ದು ಇದೇ ಸಲ್ಮಾನ್ ಆಘಾ, ಬಳಿಕ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಔಟ್ ಮಾಡಿಸಿದ ತಮ್ಮ ಮಾತು ಉಳಿಸಿಕೊಂಡಿದ್ದಾರೆ.

 ಪಂದ್ಯದ ಹಿಂದಿನ ದಿನ ಅಭಿಷೇಕ್ ಭಾರತ ತಂಡದಲ್ಲಿ ಆಡಬೇಕು ಎಂದು ಹೇಳಿದ್ದ ಪಾಕ್ ನಾಯಕ ಸಲ್ಮಾನ್ ಆಘಾ, ಅವರೇ ಮೊದಲ ಓವರ್‌ನಲ್ಲಿ ಅಭಿಷೇಕ್ ವಿಕೆಟ್ ಪಡೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅಭಿಷೇಕ್ ಹೆಸರಿಗೆ ಬೇಡದ ದಾಖಲೆ
Image Credit : Getty

ಅಭಿಷೇಕ್ ಹೆಸರಿಗೆ ಬೇಡದ ದಾಖಲೆ

ನಾಲ್ಕು ಎಸೆತಗಳನ್ನು ಎದುರಿಸಿದ ಅಭಿಷೇಕ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ, ಟಿ20 ವಿಶ್ವಕಪ್‌ನಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಬ್ಯಾಟರ್ ಎಂಬ ಅವಮಾನಕ್ಕೆ ಅಭಿಷೇಕ್ ಗುರಿಯಾದರು. ಇದಕ್ಕೂ ಮುನ್ನ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ ಗೋಲ್ಡನ್ ಡಕ್ ಆಗಿದ್ದರು. ಅನಾರೋಗ್ಯದ ಕಾರಣ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಅಭಿಷೇಕ್ ಹೊರತುಪಡಿಸಿ, ಬಾಂಗ್ಲಾದೇಶದ ಇಮ್ರುಲ್ ಕಾಯೆಸ್ ಮಾತ್ರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಮತ್ತೊಬ್ಬ ಬ್ಯಾಟರ್.

Related Articles

Related image1
ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತಕ್ಕೆ 61 ರನ್ ಗೆಲುವು
Related image2
ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್
37
ಆಘಾ ಎದುರು ಮುಗ್ಗರಿಸಿದ ಅಭಿಷೇಕ್
Image Credit : AFP

ಆಘಾ ಎದುರು ಮುಗ್ಗರಿಸಿದ ಅಭಿಷೇಕ್

ಕೊಲಂಬೊದಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿದರು. ಮಿಡ್-ಆನ್‌ನಲ್ಲಿದ್ದ ಶಾಹೀನ್ ಶಾ ಆಫ್ರಿದಿಗೆ ಕ್ಯಾಚ್ ನೀಡಿ ಅವರು ಪೆವಿಲಿಯನ್‌ಗೆ ಮರಳಿದರು.
47
ನೆಹ್ರಾ ಬಳಿಕ ಇದೀಗ ಅಭಿಷೇಕ್
Image Credit : Getty

ನೆಹ್ರಾ ಬಳಿಕ ಇದೀಗ ಅಭಿಷೇಕ್

ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಕೂಡ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಅದು ಅವರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಾಗಿರಲಿಲ್ಲ. 2010ರ ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನೆಹ್ರಾ ಡಕೌಟ್ ಆಗಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ಮೂರು ಬಾರಿ ಶೂನ್ಯಕ್ಕೆ ಔಟಾದ ಏಕೈಕ ಭಾರತೀಯ ಆಟಗಾರ ಎಂಬ ದಾಖಲೆ ನೆಹ್ರಾ ಹೆಸರಿನಲ್ಲಿದೆ.
57
ಕೊಹ್ಲಿ, ಗಂಭೀರ್ ಸಾಲಿಗೆ ಅಭಿಷೇಕ್
Image Credit : Getty

ಕೊಹ್ಲಿ, ಗಂಭೀರ್ ಸಾಲಿಗೆ ಅಭಿಷೇಕ್

ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆರನೇ ಭಾರತೀಯ ಆಟಗಾರ ಅಭಿಷೇಕ್ ಶರ್ಮಾ. ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ರವೀಂದ್ರ ಜಡೇಜಾ, ಶಿವಂ ದುಬೆ ಮತ್ತು ಆಶಿಶ್ ನೆಹ್ರಾ ಈ ಪಟ್ಟಿಯಲ್ಲಿರುವ ಇತರ ಭಾರತೀಯ ಬ್ಯಾಟರ್‌ಗಳು.
67
ಕಳೆದ 6 ಪಂದ್ಯಗಳಲ್ಲಿ 4 ಡಕೌಟ್!
Image Credit : Getty

ಕಳೆದ 6 ಪಂದ್ಯಗಳಲ್ಲಿ 4 ಡಕೌಟ್!

ಅಭಿಷೇಕ್ ಶರ್ಮಾ ತಾವು ಆಡಿದ ಕೊನೆಯ ಆರು ಟಿ20 ಪಂದ್ಯಗಳಲ್ಲಿ ನಾಲ್ಕನೇ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಕೊನೆಯ ಆರು ಟಿ20 ಪಂದ್ಯಗಳ ಸ್ಕೋರ್‌ಗಳು ಹೀಗಿವೆ: 0, 0, 0, 68, 0, 30. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ 18 ಎಸೆತಗಳಲ್ಲಿ 24 ರನ್ ಗಳಿಸಿದ್ದರು.
77
ಸಂಜು ಬದಲು ಬಂದು ನಿರಾಸೆ ಮೂಡಿಸಿದ ಅಭಿಷೇಕ್
Image Credit : Getty

ಸಂಜು ಬದಲು ಬಂದು ನಿರಾಸೆ ಮೂಡಿಸಿದ ಅಭಿಷೇಕ್

ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಅನಾರೋಗ್ಯದಿಂದ ಹೊರಗುಳಿದಾಗ, ಮಲಯಾಳಿ ಆಟಗಾರ ಸಂಜು ಸ್ಯಾಮ್ಸನ್ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದರು. ಆಗ ಸಂಜು 8 ಎಸೆತಗಳಲ್ಲಿ 22 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಪಾಕಿಸ್ತಾನದ ವಿರುದ್ಧ ಸಂಜು ಅವರನ್ನು ಕೈಬಿಟ್ಟು ಅಭಿಷೇಕ್ ಅವರನ್ನು ತಂಡಕ್ಕೆ ವಾಪಸ್ ಕರೆತರಲಾಯಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪಾಕಿಸ್ತಾನ
ಟೀಮ್ ಇಂಡಿಯಾ
ಕ್ರಿಕೆಟ್

Latest Videos
Recommended Stories
Recommended image1
ದುಲೀಫ್‌ ಟ್ರೋಫಿ: ಸೆಮೀಸ್‌ ರೇಸ್‌ನಲ್ಲಿ ರೋಚಕ ತಿರುವು
Recommended image2
ಭಾರತದ ಬಿಗಿ ಹಿಡಿತದಲ್ಲಿ ಕೊಲಂಬೊ ಟೆಸ್ಟ್‌; ಫಾಲೋ ಆನ್ ಭೀತಿಯಲ್ಲಿ ಆತಿಥೇಯ ಶ್ರೀಲಂಕಾ
Recommended image3
'ಕ್ರಿಕೆಟಿಗರಿಗೆ Non-Veg ಟೀ..?' ಶಾಕಿಂಗ್ ವಿಚಾರ ರಿವೀಲ್ ಮಾಡಿದ ಬಾಂಬೆ ಹೈಕೋರ್ಟ್‌..!
Related Stories
Recommended image1
ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತಕ್ಕೆ 61 ರನ್ ಗೆಲುವು
Recommended image2
ಪೆಹಲ್ಗಾಂ ನೋವು, ಸೇಡು ಎರಡು ಮುಗಿದಿಲ್ಲ, ಪಾಕ್ ವಿರುದ್ದ ಹ್ಯಾಂಡ್ ಶೇಕ್ ನಿರಾಕರಿಸಿದ ಸೂರ್ಯಕುಮಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved