ಪ್ಯಾಂಟ್ ಬಿಚ್ಚಿ ಕೊಡ್ತಿದ್ದ; ವೈಭವ್ ಸೂರ್ಯವಂಶಿ ಬಗ್ಗೆ ರವಿಶಾಸ್ತ್ರಿ ಹೇಳಿಕೆ ವೈರಲ್
ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಆಗ್ರಹಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿಯೇ ವೈಭವ್ ಆಡಬೇಕಿತ್ತು, ಒತ್ತಡವಿಲ್ಲದ ಯುವ ಆಟಗಾರನನ್ನು ಬೆಂಚ್ ಮೇಲೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

15 ವರ್ಷದ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ
ಟೀಂ ಇಂಡಿಯಾದ 15 ವರ್ಷದ ಸ್ಪೋಟಕ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಐರ್ಲೆಂಡ್ ಪ್ರವಾಸದ ವೇಳೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕಿತ್ತು ಎಂದು ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರವಿಶಾಸ್ತ್ರಿ ಅವರು ಭಾರತ vs ಇಂಗ್ಲೆಂಡ್ ಟಿ20 ಸರಣಿಯ ವೀಕ್ಷಕ ವಿವರಣೆಗಾರರಾಗಿದ್ದರು.
0-2 ಅಂತರದಲ್ಲಿ ಸೋಲು
ನ್ಯಾಷನಲ್ ಟೀಂ ಜೊತೆ ಐರ್ಲೆಂಡ್ಗೆ ತೆರಳಿರೋದು ವೈಭವ್ ಸೂರ್ಯವಂಶಿಯವರ ಮೊದಲ ವಿದೇಶ ಪ್ರವಾಸವಾಗಿತ್ತು. ಮೊದಲ ಮ್ಯಾಚ್ನಲ್ಲಿಯೇ ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಆಟ ಕಣ್ತುಂಬಿಕೊಳ್ಳಲು ಇಡೀ ಭಾರತ ಕಾದಿತ್ತು. ಆದ್ರೆ ಸೂರ್ಯಾಂಶ್ ಶೆಡ್ಜ್ ಮತ್ತು ಪ್ರಿನ್ಸ್ ಯಾದವ್ ತಮ್ಮ T20I ಚೊಚ್ಚಲ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ರೆ, ವೈಭವ್ ಬೆಂಚ್ ಕಾಯುವಂತಾಗಿತ್ತು. ಅಂತಿಮವಾಗಿ ಟೀಂ ಇಂಡಿಯಾ 0-2 ಅಂತರದಲ್ಲಿ ಸೋತಿತು.
ರವಿಶಾಸ್ತ್ರಿ ಅಭಿಪ್ರಾಯ
ಈ ವೇಳೆ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಜೊತೆ ರವಿ ಶಾಸ್ತ್ರಿ ಅವರು, ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕಿತ್ತು. ಆದಷ್ಟು ಬೇಗ ಟೀಂ ಇಂಡಿಯಾ ಯುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ವೈಭವ್ ಆಟದ ಕುರಿತು ತಮ್ಮ ಅಭಿಪ್ರಾಯವನ್ನು ರವಿಶಾಸ್ತ್ರಿ ವ್ಯಕ್ತಪಡಿಸಿದರು.
ಪ್ಯಾಂಟ್ ತೆಗೆದು ಕೈಯಲ್ಲಿ ಕೊಡುತ್ತಿದ್ದರು
ಇಂಗ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ ಆಡುತ್ತಾರಾ ಎಂದು ರವಿಶಾಸ್ತ್ರಿ ಅವರನ್ನು ನಿರೂಪಕ ಪ್ರಶ್ನೆ ಮಾಡುತ್ತಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ನಲ್ಲಿಯೇ ಆಟಬೇಕಿತ್ತು. ಐರ್ಲೆಂಡ್ ಮೈದಾನ ಚಿಕ್ಕದಾಗಿರುವ ಕಾರಣ, ವೈಭವ್ ಚೆಂಡುಗಳನ್ನು ಸ್ಟೇಡಿಯಂನಿಂದ ಹೊರಗೆ ಕಳುಹಿಸುತ್ತಿದ್ದರು. ಅಲ್ಲಿಯೇ ತಮ್ಮ ಪ್ಯಾಂಟ್ ತೆಗೆದು ಕೈಯಲ್ಲಿ ಕೊಡುತ್ತಿದ್ದರು ಎಂದು ಹೇಳಿದರು.
ಬೆಂಚ್ ಮೇಲೆ ಯಾಕೆ?
ಆದಷ್ಟು ಬೇಗ ವೈಭವ್ ಅವರನ್ನು ಟೀಂ ಇಂಡಿಯಾ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದ ರವಿಶಾಸ್ತ್ರಿ, ಐಪಿಎಲ್ನಲ್ಲಿ ಯಾವ ವೇಗದ ಬೌಲರ್ನ್ನು ವೈಭವ್ ಸೂರ್ಯವಂಶಿ ಬಿಟ್ಟಿಲ್ಲ. ಯಾಕೆ ಅವರನ್ನು ಬೆಂಚ್ ಮೇಲೆ ಕೂರಿಸುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ ಎಂದರು. ಹಾಗೆಯೇ ಯಾಕೆ ವೈಭವ್ ಸೂರ್ಯವಂಶಿಯನ್ನು ಆಡಿಸಬೇಕೆಂದು ಸಹ ರವಿಶಾಸ್ತ್ರಿ ಹೇಳಿದರು.
ಯಾಕೆ ಆಡಿಸಬೇಕು?
ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಒತ್ತಡಗಳಿಲ್ಲ. ಯುವ ಆಟಗಾರನಾಗಿರುವ ವೈಭವ್ಗೆ ಕೇವಲ 15 ವರ್ಷ, ಅವರಿಗೆ ಯಾವುದೇ ಭಯವಿಲ್ಲ. ಆರಂಭದ 2-3 ಓವರ್ಗಳಿಗೆ ಹೋದರೂ ತಂಡದಲ್ಲಿ ಸ್ಥಾನ ಸಿಗುತ್ತದೆ. ಅದಕ್ಕಾಗಿಯೇ ವೈಭವ್ ಸೂರ್ಯವಂಶಿ ಅವರನ್ನು ಆಟವಾಡಿಸಬೇಕುನ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಶೀಘ್ರದಲ್ಲಿಯೇ ಚೊಚ್ಚಲ ಪ್ರವೇಶ ಸಾಧ್ಯತೆ
ಇದೇ ವೇಳೆ ನಿರೂಪಕ, ಪ್ಯಾಂಟ್ ತೆಗೆದು ಕೈಯಲ್ಲಿ ಕೊಡೋದು ಅಂದ್ರೆ ಏನರ್ಥ ಎಂದು ರವಿಶಾಸ್ತ್ರಿ ಅವರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಯಾರನ್ನಾದರೂ ಸೋಲಿಸೋದು ಅಥವಾ ಅವರ ಮೇಲೆ ಪ್ರಾಬಲ್ಯ ಸಾಧಿಸುವುದು ಎಂದರ್ಥ ಎಂದು ಹೇಳಿದರು. ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಮೊದಲ T20I ಗೆ ಸಹ ಪ್ರವೇಶಿಸಲಿಲ್ಲ. ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 1 ರನ್ಗೆ ಔಟಾದರು. ಸತತ ವೈಫಲ್ಯಗಳ ನಂತರ, ವೈಭವ್ ಶೀಘ್ರದಲ್ಲೇ ತಮ್ಮ ಚೊಚ್ಚಲ ಪ್ರವೇಶ ಮಾಡಬಹುದೆಂಬ ಭರವಸೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

