ಕರಣ್ ಶೋ ಬಗ್ಗೆ ರಣಬೀರ್ ಹೀಗಾ ಹೇಳೋದು? ಧೈರ್ಯ ಮೆಚ್ಚಬೇಕು!
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ಕರಣ್ ಜೋಹರ್ಗೆ ಸಂಬಂಧಿಸಿದ ವಿಷಯವೊಂದು ಸದ್ದು ಮಾಡುತ್ತಿದೆ. ಕರಣ್ ಜೋಹರ್ ಶೋ ಬಗ್ಗೆ ಕೇಳಿದಾಗ ರಣಬೀರ್ ಹೇಳಿರುವ ಹೇಳಿಕೆಯ ವೀಡಿಯೋ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ನಟ ಹೇಳಿದ್ದೇನು?
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಕರಣ್ ಜೋಹರ್ ಅವರನ್ನು ಹಲವು ಕಾರಣಗಳಿಗಾಗಿ ದೂಷಿಸಲಾಗಿದೆ, ಅವುಗಳಲ್ಲಿ ಒಂದು ಅವರ ಟಾಕ್ ಶೋ.
ಅವರ ಶೋನಲ್ಲಿ ಬರುವ ಬಹಳಷ್ಟು ಸೆಲೆಬ್ರಿಟಿಗಳು ವಿಭಿನ್ನ ಆಟಗಳನ್ನು ಆಡುವಾಗ, ಬಹಳಷ್ಟು ಗಾಸಿಪ್ಗಳು ಹುಟ್ಟಿಕೊಂಡವು.
ಕರಣ್ ಅವರ ಚಾಟ್ ಶೋಗೆ ಸಂಬಂಧಿಸಿದಂತೆ ಎಐಬಿಯ ಪ್ರಶ್ನೆಗಳಿಗೆ ರಣಬೀರ್ ಕಪೂರ್ ನೀಡಿದ ಉತ್ತರ ವೈರಲ್ ಆಗಿದೆ.
ಅದರಲ್ಲಿ ರಣಬೀರ್ ಶೋನಲ್ಲಿ ಪಾಲ್ಗೊಳ್ಳಲು ಕರಣ್ ಬಲವಂತಗೊಳಿಸಿದ್ದಾರೆನ್ನಲಾಗಿದೆ.
ರಣಬೀರ್ಗೆ ಕಾರ್ಯಕ್ರಮದಿಂದ ನೀವು ಬೇಸತ್ತಿದ್ದೀರಾ ಎಂದು ಕೇಳಿದಾಗ 'ಹೌದು' ಎಂದು ಉತ್ತರಿಸಿದ್ದರು.
'ಈ ಸೀಸನ್ನಲ್ಲಿ ನನ್ನನ್ನು ಬಲವಂತಪಡಿಸಲಾಯಿತು. ಶೋನಲ್ಲಿ ಪಾಲ್ಗೊಳ್ಳಲು ನನಗಿಷ್ಟವಿಲ್ಲವೆಂದು ಕರಣ್ಗೆ ಹೇಳಿದ್ದೆ. ವಾಸ್ತವವಾಗಿ ನಾನು ಮತ್ತು ಅನುಷ್ಕಾ ಪ್ರೊಟೆಸ್ಟ್ ಮಾಡಲು ಮತ್ತು ಇಡೀ ಚಲನಚಿತ್ರೋದ್ಯಮವನ್ನು ಒಟ್ಟಿಗೆ ನಿಲ್ಲಿಸಲು ರೆಡಿಯಾಗಿದ್ದೆವು. ನ್ಯಾಯಕ್ಕಾಗಿ ಅಲ್ಲ. ಕರಣ್ ಮ್ಮಿಂದ ಹಣ ಸಂಪಾದಿಸುತ್ತಿದ್ದಾರೆ, ನಾವು ಬರುತ್ತೇವೆ. ವರ್ಷವಿಡೀ ಟಾರ್ಗೆಟ್ ಆಗುತ್ತೇವೆ. ಇದು ಸರಿಯಲ್ಲ' ಎಂದು ಹೇಳಿದ್ದಾರೆ ರಣಬೀರ್ ಕಪೂರ್.
ಕರಣ್ ಶೋನಲ್ಲಿ ಸೆಲೆಬ್ರೆಟಿಗಳು ಗೆಲ್ಲುವ ಗಿಫ್ಟ್ ಹ್ಯಾಪರ್ಗಳು ಏನು ಎಂದು ಅವರನ್ನು ಕೇಳಿದಾಗ, 'ಏನೂ ಇಲ್ಲ, ಘಂಟಾ. ಅದೇ ಐಫೋನ್ ಅನ್ನು ನೀವು ಪಡೆಯುತ್ತಿರಿ' ಎಂದು ರಣಬೀರ್ ಹೇಳಿದ್ದರು.
ಸುಶಾಂತ್ ನಿಧನದ ನಂತರ, ಕಾಫಿ ವಿತ್ ಕರಣ್ ಅವರ ಕಾರ್ಯಕ್ರಮದಿಂದ ಸಾಕಷ್ಟು ಎಡಿಟೆಡ್ ವೀಡಿಯೊಗಳು ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿವೆ.