MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಒಂದಿನ ರಾತ್ರಿ ಪೂರ್ತಿ ನ್ಯೂಸ್ ಪೇಪರ್ ಆಫೀಸ್ ಹೊರಗಿದ್ದರಂತೆ ಅಮಿತಾಭ್!

ಒಂದಿನ ರಾತ್ರಿ ಪೂರ್ತಿ ನ್ಯೂಸ್ ಪೇಪರ್ ಆಫೀಸ್ ಹೊರಗಿದ್ದರಂತೆ ಅಮಿತಾಭ್!

ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ (Amitabh Bachchan) ಈ ದಿನಗಳಲ್ಲಿ  KBC13 ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಮಾತಾನಾಡುವಾಗ ಅಮಿತಾಬ್‌ ಹಲವು ವೈಯಕ್ತಿಕ ವಿಷಯಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಬಿಗ್‌ ಬಿ ಅವರು ನಾಟಕಗಳಲ್ಲಿ  ಕೆಲಸ ಮಾಡುವ ದಿನಗಳ ಒಂದು ಕಥೆಯನ್ನು ವಿವರಿಸಿದರು. ಆ ದಿನಗಳಲ್ಲಿ  ಅಮಿತಾಬ್ ಬಚ್ಚನ್ ಪತ್ರಿಕೆಯ ಕಚೇರಿಯ ಹೊರಗೆ ರಾತ್ರಿಯಿಡಿ ಕಾಯುತ್ತಿದ್ದರು ಎಂದು ಹೇಳಿದ್ದಾರೆ. ನಟನ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ವಿವರ.

2 Min read
Suvarna News | Asianet News
Published : Oct 08 2021, 06:10 PM IST
Share this Photo Gallery
  • FB
  • TW
  • Linkdin
  • Whatsapp
17

ಕೌನ್ ಬನೇಗಾ ಕರೋಡ್ಪತಿ 13 ರ ಇತ್ತೀಚಿನ ಸಂಚಿಕೆಯಲ್ಲಿ, ಮೆಗಾಸ್ಟಾರ್ (Megastar) ಮತ್ತು ಪ್ರೆಸೆಂಟರ್ ಅಮಿತಾಬ್ ಬಚ್ಚನ್ ಅವರ ತಮ್ಮ ನಟನೆಯ (Acting) ಆರಂಭಿಕ ದಿನಗಳ ಬಗ್ಗೆ ರಿವೀಲ್‌ ಮಾಡಿದ್ದರು. ಚಿರಾಗ್ ಮಂಡೋಟ್, ಎಂಬ ಸ್ವರ್ಧಿ ತಮ್ಮ  ಹೆಸರನ್ನು ಟಿವಿ ಮತ್ತು ಪೇಪರ್‌ ಅಲ್ಲಿ ನೋಡುವುದು ಅವರ ಕನಸು ಎಂದು ಹೇಳಿದ್ದರು. ಇದು ಅಮಿತಾಬ್‌ ಬಚ್ಚನ್‌ ಅವರಿಗೆ ಅವರ ಜೀವನದ ಹಳೆ ದಿನಗಳನ್ನು ನೆನಪಿಸಿತು.

27

ಸೂಪರ್‌ಸ್ಟಾರ್‌ (Super Star) ಮೊದಲು ಹೇಗೆ ನಾಟಕ ಕಲಾವಿದರಾಗಿ (Actor) ಕೆಲಸ ಮಾಡಲು ಪ್ರಾರಂಭಿಸಿದರು, ಅವರು ಪ್ರಮುಖ ಪತ್ರಿಕೆಗಳಲ್ಲಿ ಅವರ ನಾಟಕಗಳ ವಿಮರ್ಶೆಗಳನ್ನು ಓದಿ ಹೇಗೆ ಸಂಭ್ರಮಿಸಿದರು ಎಂಬುದನ್ನು ನೆನಪಿಸಿಕೊಂಡರು

37

ಅವರು ಥಿಯೇಟರ್‌ಗಳಲ್ಲಿ (Theaters) ಕೆಲಸ ಮಾಡುತ್ತಿದ್ದ ದಿನಗಳ ಒಂದು ಕಥೆಯನ್ನು ಹೇಳಿದರು. ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಇಡೀ ರಾತ್ರಿ ಪತ್ರಿಕೆಯ ಕಚೇರಿಯ ಹೊರಗೆ ಕಾಯುತ್ತಿದ್ದರು ಮತ್ತು ಏಕೆ ಎಂಬುದನ್ನು ಬಹಿರಂಗಪಡಿಸಿದರು.

47

'ಪದವಿ (Graduation) ಪಡೆದ ನಂತರ, ನಾನು ರಂಗಭೂಮಿ ಕಲಾವಿದರಾಗಿ (theatre artiste) ಕೆಲಸ ಮಾಡಿದಾಗ, ಗೌರವಾನ್ವಿತ ಪತ್ರಿಕೆಯಲ್ಲಿ ನಮ್ಮ ನಾಟಕದ ವಿಮರ್ಶೆಯನ್ನು ಓದಲು ನಮಗೆ ತುಂಬಾ ಸಂತೋಷವಾಗುತ್ತಿತ್ತು' ಎಂದು ಬಿಗ್ ಬಿ ವಿವರಿಸಿದರು. 

57

ಹೇಗೆ ವಿಮರ್ಷೆ ಮಾಡಿದ್ದಾರೆ ಎಂದು ತಿಳಿಯಲು ಅವರು ಪತ್ರಿಕೆಗಳ ಮುದ್ರಣ ಕಚೇರಿಯ ಹೊರಗೆ ಕಾಯುತ್ತಿದ್ದೇವು. ಪೂರ್ತಿ ರಾತ್ರಿ ಅಲ್ಲೇ ಕಳೆದು ಬೆಳಿಗ್ಗೆ ಪೇಪರ್‌ಗಳು ತಲುಪಿದ ತಕ್ಷಣ ಅವುಗಳನ್ನು ಕದಿಯುತ್ತಿದ್ದರು ಮತ್ತು ಅವರ ಹೆಸರುಗಳನ್ನು ಅದರಲ್ಲಿ ನೋಡುತ್ತಿದ್ದರು ಎಂದು ಅವರು ಹೇಳಿದರು.


 

67

ಕಾರ್ಯಕ್ರಮದಲ್ಲಿ, ನಟ ತನ್ನ ಮುಂಬರುವ ಪ್ರಾಜೆಕ್ಟ್ ಬಗ್ಗೆ ಕೆಲವು ವಿವರಗಳನ್ನು ಬಹಿರಂಗಪಡಿಸಿದರು. ಶೋನ ಸ್ಟರ್ಧಿ ಹಿಮಾಲಯ ಟ್ರಕ್ಕಿಂಗ್‌ (Himalayan Trekking)  ಹೋಗುವ ಆಸೆ ಹೊಂದಿದ್ದು, ಪತ್ನಿ ತಮಗೆ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.  ಬಿಗ್ ಬಿ  ತನ್ನ ಮುಂದಿನ ಚಿತ್ರವು ಸ್ಪರ್ಧಿಯ ಈ ಆಸಕ್ತಿಯನ್ನು ಆಧರಿಸಿದೆ ಎಂದು ಅವರು ಬಹಿರಂಗಪಡಿಸಿದರು.

77

ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics) ಚಿನ್ನ ಗೆದ್ದ (Gold) ನೀರಜ್ ಚೋಪ್ರಾ (Neeraj Chopra) ಮತ್ತು ಭಾರತೀಯ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಪ್ರದರ್ಶನದ ಸಮಯದಲ್ಲಿ, ಬಚ್ಚನ್  ಸ್ಥಳೀಯ ಭಾಷೆಯಾದ ಹರಿಯಾನ್ವಿಯಲ್ಲಿ ಬಾಲಿವುಡ್ (Bollywood) ಡೈಲಾಗ್‌ ಹೇಳಲು ಕೇಳಿಕೊಂಡಿದ್ದರು. ಈ ಸಾಲಗಳು ನಟನ  ಸೂಪರ್ ಹಿಟ್ (Superhit) ಬಾಲಿವುಡ್ ಚಿತ್ರ ಸಿಲ್ಸಿಲಾದಿಂದ  ತೆಗೆದುಕೊಳ್ಳಲಾಗಿತ್ತು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved