MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಜಗದೀಪ್‌ ಧನಕರ್‌ ರಾಜಕೀಯ ಎಂಟ್ರಿಗೆ ಅಡಿಪಾಯ ಹಾಕಿದ್ದೇ Actor Salman Khan ಕೇಸ್!‌ ಏನದು?

ಜಗದೀಪ್‌ ಧನಕರ್‌ ರಾಜಕೀಯ ಎಂಟ್ರಿಗೆ ಅಡಿಪಾಯ ಹಾಕಿದ್ದೇ Actor Salman Khan ಕೇಸ್!‌ ಏನದು?

ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಪ್ ಧನಕರ್ ಅವರು ರಾಜಕೀಯ ಕ್ಷೇತ್ರದಲ್ಲಿ ಗಮನ ಸೆಳೆಯುವ ಮೊದಲು, ಸಾಧಕ ವಕೀಲರಾಗಿದ್ದರು. ಅವರ ವಕೀಲ ವೃತ್ತಿಯ ಸಾಧನೆ ಕುರಿತು ಚರ್ಚೆಯಾಗ್ತಿದೆ. 

2 Min read
Padmashree Bhat
Published : Jul 26 2025, 02:42 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : celebrity instagram

ದೇಶದ ಎರಡನೇ ಉನ್ನತ ಸಾಂವಿಧಾನಿಕ ಹುದ್ದೆ ಉಪರಾಷ್ಟ್ರಪತಿ ಹುದ್ದೆಗೆ ಏರುವ ಮೊದಲು, ಧನಕರ್ ಒಬ್ಬ ಅನುಭವಿ ವಕೀಲರಾಗಿದ್ದರು. 2018 ರಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಜಾಮೀನು ಪಡೆಯಲು ಧನಕರ್ ಸಹಾಯ ಮಾಡಿದ್ದರು. ಈ ಪ್ರಕರಣ ಇಂದಿಗೂ ಎಲ್ಲರ ಗಮನ ಸೆಳೆದಿದೆ.

26
Image Credit : Instagram

ಜೋಧ್‌ಪುರದ ಕಂಕಾನಿ ಗ್ರಾಮದ ಬಳಿ "ಹಮ್ ಸಾಥ್ ಸಾಥ್ ಹೈ" ಸಿನಿಮಾ ಶೂಟಿಂಗ್‌ ವೇಳೆ ನಡೆದಿತ್ತು. ಆಗ, ಎರಡು ಕಪ್ಪು ಜಿಂಕೆಗಳನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಾಣಿಗಳು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಪ್ರಜಾತಿಗಳಾಗಿವೆ. ಈ ಸಿನಿಮಾದಲ್ಲಿ ನಟಿಸಿದ್ದ ಸಹ ನಟರಾದ ಸೈಫ್ ಅಲಿ ಖಾನ್, ಟಬು, ನೀಲಮ್, ಸೋನಾಲಿ ಬೇಂದ್ರೆಯನ್ನು ಈ ಕೇಸ್‌ನಿಂದ ಖುಲಾಸೆಗೊಳಿಸಲಾಗಿತ್ತು. ಜೋಧ್‌ಪುರದ ಟ್ರಯಲ್ ಕೋರ್ಟ್ ಏಪ್ರಿಲ್ 5, 2018 ರಂದು ಸಲ್ಮಾನ್ ಖಾನ್ ಅವರನ್ನು ದೋಷಿಯೆಂದು ಘೋಷಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Related Articles

Related image1
ಜೀವ ಬೆದರಿಕೆ ಬೆನ್ನಲ್ಲೇ, ಜನಪ್ರಿಯ ಬಾಂದ್ರಾ ಅಪಾರ್ಟ್‌ಮೆಂಟ್‌ ದುಬಾರಿ ಬೆಲೆಗೆ ಮಾರಾಟ ಮಾಡಿದ ಸಲ್ಮಾನ್‌ ಖಾನ್‌!
Related image2
Bigg Boss 19: ಸಲ್ಮಾನ್‌ ಖಾನ್‌ ಶೋನಲ್ಲಿ ಈ ಬಾರಿ ಯಾರು ಯಾರು ಬರ್ತಾರೆ ಗೊತ್ತಾ?
36
Image Credit : @salman khan

ಸಲ್ಮಾನ್ ಖಾನ್ ಅವರ ಕಾನೂನು ತಂಡವನ್ನು ದೇವ್ ಆನಂದ್ ಗೆಹ್ಲೋಟ್ ಮುನ್ನಡೆಸಿದ್ದರು, ಮತ್ತು ಧನಕರ್ ಅವರ ಕಾನೂನು ಪರಿಣತಿಯನ್ನು ಜಾಮೀನು ಪ್ರಕ್ರಿಯೆಗಾಗಿ ತಂದರು. ಅವರ ಕಾರ್ಯತಂತ್ರದ ಕಾನೂನು ಹಸ್ತಕ್ಷೇಪ ನಿರ್ಣಾಯಕವಾಯಿತು.

46
Image Credit : Asianet News

ಏಪ್ರಿಲ್ 7, 2018 ರಂದು ಸಲ್ಮಾನ್‌ ಖಾನ್‌ಗೆ ಶಿಕ್ಷೆ ವಿಧಿಸಿದ 2 ದಿನಗಳ ಬಳಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರು ಜಾಮೀನು ಮಂಜೂರು ಮಾಡಿದರು. ಸಲ್ಮಾನ್‌ ಖಾನ್‌ ಅವರು ಜೋಧ್‌ಪುರ ಸೆಂಟ್ರಲ್ ಜೈಲಿನಲ್ಲಿ 2 ರಾತ್ರಿಗಳನ್ನು ಕಳೆದಿದ್ದರು.

56
Image Credit : @Salman Khan

ಕೋರ್ಟ್ ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು, ಏಪ್ರಿಲ್ 7, 2018 ರಂದು ಕೋರ್ಟ್‌ನಲ್ಲಿ ಹಾಜರಾಗಬೇಕು ಎಂಬ ಷರತ್ತಿನ ಜೊತೆಗೆ ರೂ. 50,000 ವೈಯಕ್ತಿಕ ಬಾಂಡ್‌ ಹಾಗೂ ತಲಾ ರೂ. 25,000 ರ ಎರಡು ಖಾತರಿಗಳ ಮೇಲೆ ಜಾಮೀನು ನೀಡಲಾಯ್ತು.

66
Image Credit : our own

ಈ ಪ್ರಕರಣದಲ್ಲಿ ಧನಕರ್‌ರ ಪಾಲು, ಕಾನೂನು ಚಾತುರ್ಯ ಎದ್ದು ಕಂಡಿತು. ಇದು ಅವರ ವಕೀಲ ವೃತ್ತಿಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿದ್ದು, ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿತ್ತು. ಆಮೇಲೆ ಅವರು ಪಶ್ಚಿಮ ಬಂಗಾಳದ ಗವರ್ನರ್ ಆಗಿ ಕೆಲಸ ಆರಂಭಿಸಿ, 2022 ರಲ್ಲಿ ಭಾರತದ ಉಪರಾಷ್ಟ್ರಪತಿಯಾದರು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸಲ್ಮಾನ್ ಖಾನ್
ಮನರಂಜನಾ ಸುದ್ದಿ
ಬಾಲಿವುಡ್
ಕ್ರೈಮ್ ನ್ಯೂಸ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved