ವಾಟ್ಸಾಪ್ನಲ್ಲಿ ತಪ್ಪು ಮಾಹಿತಿ: ಸಹನಟರ ವಿರುದ್ಧ ಸಿಡಿದೆದ್ದ ಹಾಸ್ಯನಟ ವಡಿವೇಲು
ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ಹಾಸ್ಯ ನಟ ವಡಿವೇಲು ತಮ್ಮ ಸಹನಟರಿಬ್ಬರ ವಿರುದ್ಧ ದೂರು ನೀಡಿದ್ದಾರೆ...
ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಹಾಸ್ಯ ನಟ ಮತ್ತೊಬ್ಬ ಹಾಸ್ಯ ನಟನ ವಿರುದ್ಧ ದೂರು ನೀಡಿರುವುದು.
ಹಾಸ್ಯ ನಟ ಮನೋಬಲ 'ವೇಸ್ಟ್ ಪೇಪರ್' ಯೂಟ್ಯೂಬ್ ಚಾನೆಲ್ನಲ್ಲಿ ವಡಿವೇಲು ಸಂದರ್ಶನ ನೀಡಿದ್ದರು .
ಆನಂತರ ಅದೇ ಚಾನೆಲ್ನಲ್ಲಿ ನಟ ಸಿಂಗಮುತ್ತು ಸಂದರ್ಶನ ಕೂಡ ಮಾಡಿದ್ದಾರೆ.
ಸಿಂಗಮುತ್ತು ನಟ ವಡಿವೇಲು ಬಗ್ಗೆ ಮಾತನಾಡಿದ್ದಾರೆ, ಇದನ್ನು ವಾಟ್ಸಾಪ್ ಗ್ರೂಪ್ವೊಂದರಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋ ಶೇರ್ ಮಾಡಿದಕ್ಕೆ ಸಿಂಗಮುತ್ತು ವಿರುದ್ಧ ಮಾನನಷ್ಟ ಮೊಕದ್ದಮೆ ಎಂದು ದೂರು ನೀಡಿದ್ದಾರೆ.
ಮನೋಬಲ ಹಾಗೂ ಸಿಂಗಮುತ್ತು ವಿರುದ್ಧ ನಟರ ಸಂಘದಲ್ಲಿ ದೂರು ನೀಡಿದ್ದಾರೆ.
ವಡಿವೇಲು, ಮನೋಬಲ ಹಾಗೂ ಸಿಂಗಮುತ್ತು ಒಟ್ಟಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸಿಂಗಮುತ್ತು ಕಷ್ಟದಲ್ಲಿ ಇದ್ದಾಗ ವಡಿವೇಲು ಸಹಾಯ ಮಾಡಿಲ್ಲ ಎಂದು ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.
ಸಿಂಗಮುತ್ತು ಸುಳ್ಳು ಮಾತನಾಡಿದ್ದಾರೆ ಎಂದು ವಡಿವೇಲು ಹೇಳಿದರೂ ವಿಡಿಯೋ ಡಿಲೀಟ್ ಮಾಡಿಲ್ಲ.
ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು ಕಾಲಿವುಡ್ ಟಾಕ್ ಆಫ್ ದಿ ಟೌನ್ ಆಗಿದೆ.