ಸಾಯಿ ಪಲ್ಲವಿಯನ್ನೇ ಹಿಂದಿಕ್ಕೆ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ?
ಟಾಲಿವುಡ್ನಲ್ಲಿ ಶುರುವಾಯ್ತು ಪೈಪೋಟಿ. ಸಾಯಿ ಪಲ್ಲವಿ ನಿರಾಕರಿಸಿದ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ. ಹೇಗಿದೆ ನೆಟ್ಟಿಗರ ರಿಯಾಕ್ಷನ್...
ಸ್ಯಾಂಡಲ್ವುಡ್ ಸುಂದರಿ ರಶ್ಮಿಕಾ ಮಂದಣ್ಣ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಅದುವೇ ನಟ ಶಿರ್ವಾನಂದ್ ಜೊತೆ ಎನ್ನಲಾಗಿದೆ.
![article_image2](https://static-ai.asianetnews.com/images/01ekj3ntmp8fz6zbr8qk4hyp52/egz9d42ueaahmix-jpg_300x330xt.jpg)
ಕೆಲ ದಿನಗಳ ಹಿಂದೆ ಕಿಶೋರ್ ತಿರುಮಲಾ ತಮ್ಮ ಹೊಸ ಚಿತ್ರ 'ಅದವಲ್ಲು ಮೀಕು ಜೋಹರ್ಲು' ಎಂದು ಘೋಷಿಸಿದರು.
ಈ ಚಿತ್ರದಲ್ಲಿ ಶಿರ್ವಾನಂದ್ಗೆ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೀಗ ಪಾತ್ರಗಳಲ್ಲಿ ಕೊಂಚ ಬದಲಾವಣೆ ಆಗಿದೆ ಎನ್ನಲಾಗಿದೆ.
ಸಾಯಿ ಪಲ್ಲವಿ ಡೇಟ್ಸ್ ಇಲ್ಲದ ಕಾರಣ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಸಾಯಿ ಪಲ್ಲವಿ ಸ್ಥಾನಕ್ಕೆ ನಟಿ ರಶ್ಮಿಕಾ ಮಂದಣ್ಣ ಬಂದಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 25ರಂದು ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಚಿತ್ರದ ಮೊದಲ ಶೆಡ್ಯೂಲ್ನನ್ನು ತಿರುಪತಿಯಲ್ಲಿ ಚಿತ್ರೀಕರಣ ಆನಂತರ ತಿಮ್ಮಪ್ಪನ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಸದ್ಯಕ್ಕೆ ಪುಷ್ಪ ಚಿತ್ರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಶೀಘ್ರವೇ ತಂಡ ಸೇರಲಿದ್ದಾರೆ.