ರಾಜಮೌಳಿ ಸೆಟ್ಟಿಗೆ ಆಲಿಯಾ ಭಟ್ ಬರೋದು ಖಾತ್ರಿ
ಆರಂಭದಿಂದಲೂ ನಾಯಕಿಯರ ಕಾರಣಕ್ಕೆ ಪದೇ ಪದೇ ‘ಆರ್ಆರ್ಆರ್’ ಶೂಟಿಂಗ್ ಪ್ಲಾನ್ ಬದಲಾವಣೆ ಮಾಡಿಕೊಳ್ಳುತ್ತಿದ್ದ ನಿರ್ದೇಶಕ ರಾಜ್ಮೌಳಿಗೆ ಕೊನೆಗೂ ಆಲಿಯಾ ಭಟ್ ಡೇಟ್ಸ್ ಸಿಕ್ಕಿದೆ.
దర్శక ధీరుడు రాజమౌళి సంతాపం తెలిపారు. `ఆయన ఆకస్మిక మరణ వార్త నన్ను షాక్కి గురి చేసింది. ఇది చాలా విషాదకరం. ఆయనతో కలిసి పని చేయడం గొప్ప అనుభూతుల్ని మిగిల్చింది. విలక్షణ నటన, మీదైన కామెడీ, విలనిజంతో దశాబ్దాలుగా మాకు వినోదం పంచినందుకు థ్యాంక్స్` అని ట్వీట్ చేశారు.
ಲಾಕ್ಡೌನ್, ತಾವೇ ಕೊರೋನಾಗೆ ತುತ್ತಾಗಿದ್ದರ ಜತೆಗೆ ನಾಯಕಿಯರ ಕಾರಣಕ್ಕೆ ಸಾಕಷ್ಟುತಡವಾಗಿಯೇ ಶೂಟಿಂಗ್ ಸೆಟ್ ಹೋಗುತ್ತಿದ್ದಾರೆ ಟಾಲಿವುಡ್ ಜಕ್ಕಣ್ಣ.
ರಾಮ್ಚರಣ್ ತೇಜ ಹಾಗೂ ಜ್ಯೂ.ಎನ್ಟಿಆರ್ ಸೇರಿದಂತೆ ಘಟಾನುಘಟಿ ತಾರಾಗಣವೇ ಚಿತ್ರದಲ್ಲಿದೆ. ಅಲ್ಲದೆ ಬಾಲಿವುಡ್ನಲ್ಲಿ ಸಾಕಷ್ಟುಬ್ಯುಸಿಯಾಗಿರುವ ಆಲಿಯಾ ಭಟ್, ಬಾಹುಬಲಿ ಸೂತ್ರದಾರನ ಕೈಗೆ ಸಿಗುವುದೇ ಕಷ್ಟಎನ್ನುವಂತಾಗಿತ್ತು.
ಆದರೆ, ಆಲಿಯಾ ಭಟ್ ಕಾಲಿಶೀಟ್ ಸಿಕ್ಕಿದ್ದರಿಂದ ಶೂಟಿಂಗ್ ಪ್ಲಾನ್ನಲ್ಲಿ ಸಾಕಷ್ಟುಬದಲಾವಣೆ ಮಾಡಿಕೊಂಡು ಆ್ಯಕ್ಷನ್ ಕಟ್ ಹೇಳುವುದಕ್ಕೆ ರಾಜ್ಮೌಳಿ ಸಜ್ಜಾಗಿದ್ದಾರೆ.
ಚಿತ್ರೀಕರಣ ಆರಂಭವಾದ ಕೂಡ ಮೊದಲಿಗೆ ಆಲಿಯಾ ಭಟ್ ಅಭಿನಯದ ದೃಶ್ಯಗಳನ್ನೇ ಚಿತ್ರೀಕರಣ ಮಾಡಲಿದ್ದಾರೆ. ಅದಕ್ಕಾಗಿ ಸೆಟ್ಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.
ಒಂದು ತಿಂಗಳ ಕಾಲ್ಶೀಟ್ ಮಾತ್ರವೇ ನೀಡಿದ್ದು, ಈ ಒಂದು ತಿಂಗಳಲ್ಲಿ ಅಲಿಯಾ ಭಟ್ ಹಾಗೂ ರಾಮ್ಚರಣ್ ತೇಜ ಅವರ ಕಾಂಬಿನೇಷನ್ನಲ್ಲಿ ಎಷ್ಟುಸಾಧ್ಯವೋ ಅಷ್ಟುಚಿತ್ರೀಕರಣ ಮಾಡಿಕೊಳ್ಳುವ ಐಡಿಯಾ ರಾಜ್ಮೌಳಿ ಅವರದ್ದು.
ಹೀಗೆ ಕೊನೆಗೂ ಸಿಕ್ಕ ಆಲಿಯಾ ಭಟ್ ಅವರ ಕಾಲ್ಶೀಟ್ ವ್ಯರ್ಥವಾಗದಿರಲು ನಿರ್ದೇಶಕರು ಎಚ್ಚರ ವಹಿಸುತ್ತಿದ್ದು, ನವೆಂಬರ್ ತಿಂಗಳಲ್ಲಿ ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಸೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.