'ಅಫೇರ್ , ಅಬಾರ್ಶನ್' ವಿಚ್ಛೇದನದ ನಂತರ ಮೌನ ಮುರಿದ ಸಮಂತಾ
ಹೈದರಾಬಾದ್( ಅ. 08) ನಟಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಇದೆ ಮೊದಲ ಸಾರಿ ಎಂಬಂತೆ ಸಮಂತಾ ತಮ್ಮ ಮನದಾಳ ಹೊರಗೆ ಹಾಕಿದ್ದಾರೆ.
ವಿಚ್ಛೇದನದ ಬಳಿಕ ಸಮಂತಾ ಮೇಲೆ ಹಲವಾರು ವದಂತಿಗಳು ಕೇಳಿಬಂದಿದ್ದವು. ಇದೆಲ್ಲದಕ್ಕೆ ಸಮಂತಾ ಉತ್ತರ ನೀಡುವ ಯತ್ನ ಮಾಡಿದ್ದಾರೆ. ಹಾಗಾದರೆ ಅವರ ಅಂತರಾಳ ಏನು?
ವಿಚ್ಛೇದನದ ವಿಚಾರವೇ ನನ್ನನ್ನು ದೀರ್ಘಕಾಲ ಕಾಡಲಿದೆ. ಈ ರೀತಿಯ ವದಂತಿಗಳು ನನ್ನ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಲಾಗುತ್ತಿದೆ. ಇದನ್ನು ಹೀಗೆ ಬಿಟ್ಟರೆ ನನ್ನ ವಿರುದ್ಧದ ವದಂತಿಗಳು ಕೊನೆಯಾಗುವುದಿಲ್ಲ. ಯಾರೂ ಇಂಥವುಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಮಿಂಚಿದ ಸಮಂತಾ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಕಾರಣಾಂತರಗಳಿಂದ ಜೋಡಿ ಬೇರೆ ಬೇರೆಯಾಗಿತ್ತು.
Samantha
ಸಹಜವಾಗಿಯೇ ಸಂಸಾರದ ನಡುವಿನ ಗೊಂದಲ ಇಂಡಸ್ಟ್ರಿ ಮಟ್ಟಿಗೆ ದೊಡ್ಡ ಸುದ್ದಿಯಾಗಿ ಮಾರ್ಪಟ್ಟಿತ್ತು. ಒಂದು ಕಡೆ ಸಮಂತಾ ಮೇಲೆ ಹೇಗೆ ವದಂತಿಗಳು ಹರಿದಾಡಿದ್ದವೋ ಇನ್ನೊಂದು ಕಡೆ ನಾಗಚೈತನ್ಯ ಮೇಲೂ ವದಂತಿಗಳ ದಾಳಿ ಆಗಿತ್ತು.