ಮುಗಿಲ್ಪೇಟೆ ಸಿನಿಮಾ ನಟಿ ಕಯಾದು ಲೋಹರ್, ಹೃದಯ ಕದ್ದ ನಟ ಯಾರು?
ಕನ್ನಡ ಚಿತ್ರರಂಗದ ಮುಗಿಲ್ ಪೇಟೆ ಸಿನಿಮಾದ ಮೂಲಕ ಸಿನಿಜರ್ನಿ ಆರಂಭಿಸಿದ ಅಸ್ಸಾಂ ಮೂಲದ ನಟಿ ಕಯಾದು ಲೋಹರ್ ಅವರು ಇದೀಗ ಡ್ರ್ಯಾಗನ್ ಸಿನಿಮಾದ ಮೂಲಕ ಇಡೀ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಆದರೆ, ಸಿನಿಮಾದಲ್ಲಿ ಉನ್ನತ ಹಂತಕ್ಕೆ ತಲುಪುವ ಮುನ್ನವೇ ತನ್ನ ಹೃದಯವನ್ನು ಗೆದ್ದ ನಟ ಯಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡದ ಖ್ಯಾತ ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಜೊತೆಗೆ ನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ನಟಿ ಕಯಾದು ಲೋಹರ್ ನಂತರ ಮಲೆಯಾಳಂ, ಮರಾಠಿ ನಂತರ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಿ ಆಗಿದ್ದಾರೆ. ಇದೀಗ ನಿರ್ದೇಶಕ ಅಶ್ವಥ್ ಮಾರಿಮುತ್ತು ನಿರ್ದೇಶನದಲ್ಲಿ ಪ್ರದೀಪ್ ರಂಗನಾಥನ್ ಹೀರೋ ಆಗಿ ನಟಿಸಿರುವ ಡ್ರ್ಯಾಗನ್ ಸಿನಿಮಾ ಮೂಲಕ ನಟಿ ಕಯಾದು ಲೋಹರ್ ತಮಿಳು ಪ್ರೇಕ್ಷಕರ ಮನ ಗೆದ್ದಿದ್ದಾರೆ.
24 ವರ್ಷ ವಯಸ್ಸಿನ ಇವರು ಮೊದಲು ಪರಿಚಯವಾಗಿದ್ದು ಕನ್ನಡ ಚಿತ್ರಗಳ ಮೂಲಕ. ಸಿನಿಮಾ ಮೇಲಿನ ಆಸಕ್ತಿಯಿಂದ 20ನೇ ವಯಸ್ಸಿನಲ್ಲಿಯೇ ಮುಗಿಲ್ಪೇಟೆ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದು ಹೆಚ್ಚಿನ ಖ್ಯಾತಿ ತಂದುಕೊಡಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಕನ್ನಡದ ನಂತರ ಮಲಯಾಳಂ, ಮರಾಠಿ ಚಿತ್ರಗಳಲ್ಲಿ ನಟಿಸಿದ ನಂತರ ಈಗ ತಮಿಳಿನಲ್ಲಿ ಪರಿಚಯವಾಗಿದ್ದಾರೆ. ಇವರು ನಟಿಸಿದ ಡ್ರ್ಯಾಗನ್ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಯಿತು.
ಕಯಾದು ಮೊದಲ ತಮಿಳು ಚಿತ್ರರಂಗದಲ್ಲಿ ನಟಿಸಿದ ಮೊದಲ ಸಿನಿಮಾದ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಚಿತ್ರದ ಯಶಸ್ಸಿನ ನಂತರ, ನಟ ಅಥರ್ವ ಹೀರೋ ಆಗಿ ನಟಿಸುತ್ತಿರುವ ಇದಯಂ ಮುರಳಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಮಿಶ್ಕಿನ್, ಕಯಾದು ತಮ್ಮ ನಿರ್ದೇಶನದಲ್ಲಿ ನಟಿಸಬೇಕಿತ್ತು. ಆದರೆ ಅವರು ತುಂಬಾ ಸುಂದರವಾಗಿದ್ದರಿಂದ ಅವರನ್ನು ರಿಜೆಕ್ಟ್ ಮಾಡಿದೆ. ನಾನು ಹುಡುಕುತ್ತಿದ್ದದ್ದು ತುಂಬಾ ನೈಜವಾದ, ಸ್ಥಳೀಯ ಮುಖ ಚಹರೆ ಹೊಂದಿರುವ ವ್ಯಕ್ತಿಯನ್ನು ಎಂದು ಅವರು ರಿಜೆಕ್ಟ್ ಮಾಡಿದ ಕಾರಣವನ್ನು ತಿಳಿಸಿದರು.
ನಟಿ ಕಯಾದು ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಅವರ ಸೆಲೆಬ್ರಿಟಿ ಕ್ರಷ್ ಯಾರು ಎಂದು ಕೇಳಿದಾಗ, ಈ ಯಾವುದೇ ಅನುಮಾನವಿಲ್ಲದೆ ಹೇಳುತ್ತೇನೆ. ನನ್ನ ಮೊದಲ ಕ್ರಷ್ ತಳಪತಿ ವಿಜಯ್. ಅವರು ನಟಿಸಿದ ತೆರಿ ಸಿನಿಮಾ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.