ನಾಗ ಚೈತನ್ಯ ಸಂಸ್ಕಾರ ಹೊಗಳಿದ ತಮನ್ನಾ, ಸಮಂತಾ ಕಾಲೆಳೆದ್ರಾ?
ತಮನ್ನಾ ಭಾಟಿಯಾ (Tamannaah Bhatia ) ತೆಲುಗು, ತಮಿಳು ಅಷ್ಟೇ ಅಲ್ಲ ಹಿಂದಿಯಲ್ಲೂ ಕೆಲಸ ಮಾಡುತ್ತಿರುವ ದಕ್ಷಿಣದ ನಟಿಯರಲ್ಲಿ ಒಬ್ಬರು. ಅವರು ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ಸ್ಟಾರ್ಗಳೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು ಮತ್ತು ಅವರು ತುಂಬಾ ಗೌರವಾನ್ವಿತರು ಎಂದು ಹೇಳಿದರು. ದಕ್ಷಿಣದ ಸೂಪರ್ಸ್ಟಾರ್ಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾರೆ ಎಂದು ನಟಿ ಹೊಗಳಿದ್ದಾರೆ.
ಮಿಲ್ಕಿ ಬ್ಯೂಟಿ ಎಂದೇ ಫೇಮಸ್ ಆಗಿರುವ ನಟಿ ತಮನ್ನಾ ಭಾಟಿಯಾ, ಸೌತ್ ಸ್ಟಾರ್ಗಳೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ ಹಾಗೂ ದಕ್ಷಿಣದ ಸೂಪರ್ಸ್ಟಾರ್ಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾರೆ ಎಂದಿದ್ದಾರೆ.
'ರಾಮ್ ಚರಣ್, ನಾಗ ಚೈತನ್ಯ ಮತ್ತು ಇತರ ನಟರನ್ನು ಅವರ ಪೋಷಕರು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ ಎಂದು ನಟಿ ವ್ಯಕ್ತಪಡಿಸಿದ್ದಾರೆ. ನಾನು ದೊಡ್ಡ ಸ್ಟಾರ್ ಆಗುತ್ತೇನೆ ಎಂದು ಮೊದಲು ನಂಬಿದವರು ಚಿರಂಜೀವಿ' ಎಂದು ಬಹಿರಂಗಪಡಿಸಿದ್ದಾರೆ.
'ಚಿರಂಜೀವಿ ಮೊದಲ ವ್ಯಕ್ತಿಗಳಲ್ಲಿ ಒಬ್ಬರು, 'ನೀವು ಸ್ಟಾರ್ ಆಗುತ್ತೀರಿ' ಎಂದು ನನಗೆ ಹೇಳಿದರು. ಇದು ನಾನು ರಾಮ್ ಚರಣ್ ಜೊತೆ ಕೆಲಸ ಮಾಡುತ್ತಿದ್ದಾಗ ಆಗ ನಾನು ಹೆಸರು ಮಾಡಿರಲಿಲ್ಲ' ಎಂದು ನಟಿ ಹೇಳಿದ್ದಾರೆ.
ಸೌತ್ ನಟರು ಸೆಟ್ಗಳಲ್ಲಿ ಹೇಗೆ ಪರಿಗಣನೆ ಮತ್ತು ಗೌರವ ಹೊಂದಿದ್ದಾರೆ ಎಂಬುದನ್ನು ಹಂಚಿಕೊಂಡ ನಟಿ, 'ನಾನು ರಾಮ್ ಚರಣ್ ಅಥವಾ (ನಾಗ) ಚೈತನ್ಯ, ನಾಗಾರ್ಜುನ ಸರ್ ಅವರ ಮಗನನ್ನು ನೋಡಿದ್ದೇನೆ, ಅವರೆಲ್ಲರೂ ತಮ್ಮ ಹುಡುಗರನ್ನು ತುಂಬಾ ಸಂಸ್ಕಾರ ನೀಡಿ, ಬೆಳೆಸಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರದ್ದು ಒಳ್ಳೆಯ ನಡತೆ, ಸುಸಂಸ್ಕೃತ, ಗೌರವಾನ್ವಿತರು. ನನ್ನ ಪ್ರಕಾರ, ಸಾಮಾನ್ಯವಾಗಿ ಜಗತ್ತಿನಲ್ಲಿ ಮಹಿಳೆಯರ ಬಗ್ಗೆ ಗೌರವ ಅಪರೂಪ ಮತ್ತು ಕೆಲವೊಮ್ಮೆ ನಮ್ಮ ದೇಶದಲ್ಲಿ ಕಡಿಮೆ. ಆದರೆ ನಾನು ಅಲ್ಲಿ ಕೆಲಸ ಮಾಡಿದ ಕೆಲವು ಪುರುಷರೊಂದಿಗೆ ನನಗೆ ಅನಿಸುತ್ತದೆ, ಅವರು ತುಂಬಾ ಸಭ್ಯರು ಸೆಟ್ನಲ್ಲಿರುವ ಮಹಿಳೆ ಆರಾಮವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.ಚಿರಂಜೀವಿ ಸರ್ ಅವರಲ್ಲಿ ಒಬ್ಬರು' ಎಂದು ತಮನ್ನಾ ಹೇಳಿದ್ದಾರೆ.
ಮುಂಬರುವ ಚಿತ್ರ ಜೈಲರ್ನಲ್ಲಿ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಿದ್ದಾರೆ ತಮನ್ನಾ ಭಾಟಿಯಾ. ರಜನಿಕಾಂತ್ ಅವರು ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಸರ್ಪ್ರೈಸ್ ನೀಡಿದ ವಿಷಯವನ್ನು ನಟಿರ್ಯವನ್ನು ಹಂಚಿಕೊಂಡರು. ಕೇವಲ ಒಂದು ದಿನ ಕೆಲಸ ಮಾಡಿದರೂ ಅವರು ಆಕೆಯ ಬಗ್ಗೆ ಯೋಚಿಸಿ ನನಗೆ ಪುಸ್ತಕವನ್ನು ಖರೀದಿಸಿದರು ಎಂದು ತಮನ್ನಾ ಬಹಿರಂಗಪಡಿಸಿದ್ದಾರೆ
'ಈ ಸೂಪರ್ಸ್ಟಾರ್ಗಳು ಕೇವಲ ಅಂತಹ ಸೂಪರ್ಸ್ಟಾರ್ಗಳಲ್ಲ ಎಂದು ನಾನು ಅರಿತುಕೊಂಡೆ. ಏಕೆಂದರೆ ಅವರು ನಿಜವಾಗಿಯೂ ಮನುಷ್ಯರನ್ನು ಮನುಷ್ಯರಂತೆ ನಡೆಸಿಕೊಳ್ಳುತ್ತಿದ್ದಾರೆ. ಲಿಂಗ ಮತ್ತು ಬೇರೆಯ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಒಬ್ಬರನ್ನೊಬ್ಬರು ಮನುಷ್ಯರಂತೆ ನಡೆಸಿಕೊಳ್ಳುವುದಿಲ್ಲ. ನಮ್ಮ ಸಿಬ್ಬಂದಿಯಲ್ಲಿಯೂ ಸರಿಯಾಗಿ ನಡೆಸಿಕೊಳ್ಳದಿರುವುದನ್ನು ನಾನು ನೋಡಿದಾಗ ನನಗೆ ತುಂಬಾ ಕಷ್ಟವಾಗುತ್ತದೆ' ಎಂದು ನಟಿ ಹಂಚಿಕೊಂಡಿದ್ದಾರೆ.
ಜೈಲರ್ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ಲಾಲ್, ಶಿವ ರಾಜ್ಕುಮಾರ್, ಜಾಕಿ ಶ್ರಾಫ್ ಮತ್ತು ಮುಂತಾದವರು ನಟಿಸಿದ್ದಾರೆ.
ಇದಲ್ಲದೆ, ನಟಿ ಚಿರಂಜೀವಿ ಅವರ ಭೋಲಾ ಶಂಕರ್ನ ಭಾಗವಾಗಿದ್ದಾರೆ. ಕೀರ್ತಿ ಸುರೇಶ್ ಮತ್ತು ಸುಶಾಂತ್ ಕೂಡ ಚಿತ್ರದಲ್ಲಿದ್ದಾರೆ. ಜೊತೆಗೆ ನಟಿ ಅರುಣ್ ಗೋಪಿ ನಿರ್ದೇಶನದ ನಟ ದಿಲೀಪ್ ಜೊತೆ ಮಲಯಾಳಂ ಚಿತ್ರ ಬಾಂದ್ರಾ ಚಿತ್ರೀಕರಣದಲ್ಲಿದ್ದಾರೆ.