ಐಟಿ ದಾಳಿ: ವಿತ್ತ ಸಚಿವೆ ಟ್ವೀಟ್ಗೆ ತಾಪ್ಸಿ ಪನ್ನು ಹೀಗೆ ರೀಯ್ಯಾಕ್ಟ್ ಮಾಡೋದಾ?
ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಾಳಿ ಬಗ್ಗೆ ಟ್ವೀಟ್ ಮಾಡಿದ್ದರು. ಅದಕ್ಕೆ ತಾಪ್ಸಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದರು. ಬಾಲಿವುಡ್ ನಟಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದೇನು ಗೊತ್ತಾ?
ಮಾರ್ಚ್ 3 ರಂದು ಬಾಲಿವುಡ್ ನಟಿ ತಾಪ್ಸಿ ಪನ್ನು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ತಾಪ್ಸಿಯನ್ನು ಹೊರತುಪಡಿಸಿ, ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್ ಮತ್ತು ವಿಕಾಸ್ ಬಹಲ್ ಅವರ ಮೇಲೆ ಸಹ ಐಟಿ ಇಲಾಖೆ ದಾಳಿ ಮಾಡಿದೆ.
ತಾಪ್ಸೀ ಮನೆ ಮೇಲೆ ಐಟಿ ದಾಳಿ ಆದ ಬಗ್ಗೆ ಹೆಸರನ್ನು ಪ್ರಸ್ತಾಪಿಸದೇ ವಿತ್ತ ಸಚಿವೆ ಟ್ವೀಟ್ ಮಾಡಿದ್ದರು. ಇದಕ್ಕೆ ತಾಪ್ಸೀ ಟಾಂಗ್ ನೀಡಿದ್ದರು.
ತಾಪ್ಸೀ ಕಾಮೆಂಟ್ ಬಗ್ಗೆ ಮತ್ತೆ ನಿರ್ಮಲಾ ಅವರನ್ನು ಪ್ರಶ್ನಿಸಿದಾಗ, ಇಂಥದ್ದೇ ಐಟಿ ದಾಳಿ 2013ರಲ್ಲಿಯೂ ನಡೆದಿತ್ತು ಎಂಬುದನ್ನು ಮಾತ್ರ ಹೇಳಿದ್ದಾರೆಯೇ ಹೊರತು, ಯಾವ ಹೆಸರನ್ನೂ ಉಲ್ಲೇಖಿಸಿರಲಿಲ್ಲ.
ತಾಪ್ಸೀ ಪನ್ನು ಅವರು ಪ್ಯಾರಿಸ್ನಲ್ಲಿ 5 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಆರೋಪವಿದೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಐಟಿ ದಾಳಿಯಿಂದ ಉಂಟಾದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ ಮತ್ತು ದಾಳಿಗಳ ಕುರಿತು ಹಣಕಾಸು ಸಚಿವರ ಟ್ವೀಟ್ ಬಗ್ಗೆಯೂ ಅಭಿಪ್ರಾಯ ವ್ಯಕ್ಚಪಡಿಸಿದ್ದಾರೆ.
'ಐಟಿ ದಾಳಿ ನಡೆದಾಗ, ಪ್ರೊಸಿಜರ್ಸ್ ಅನುಸರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಏನಾದರೂ ತಪ್ಪಿದ್ದರೆ ಅದು ಹೊರಬರುತ್ತದೆ, ನಾನು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ, ಶಿಕ್ಷೆಯನ್ನು ಅನುಭವಿಸುತ್ತೇನೆ,' ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಬದ್ಲಾ ನಟಿ.
ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾಗಿ ಮತ್ತು ಆಕೆ ಕುಟುಂಬ ಐಟಿ ಇಲಾಖೆಗೆ ಸಹಕರಿಸಿದೆ ಎಂದು ಬಹಿರಂಗ ಪಡಿಸಿದ್ದಾರೆ ತಾಪ್ಸಿ.
ನಿರ್ಮಲಾ ಸೀತಾರಾಮನ್ ಈ ದಾಳಿಗಳಿಗೆ ಸಂಬಂಧಿಸಿದಂತೆ ಇದು ಒಂದು ಕಾರ್ಯವಿಧಾನ ಮತ್ತು ಸೆನ್ಸೇಷನಲ್ ಸುದ್ದಿ ಮಾಡಬಾರದು ಎಂದು ಟ್ವೀಟ್ ಮಾಡಿದ್ದು ಖುಷಿಯಾಯಿತು ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಪ್ಸಿ ಅವರು ಮುಂದಿನ ದಿನಗಳಲ್ಲಿ ಹಸೀನಾ ದಿಲ್ರುಬಾ, ರಶ್ಮಿ ರಾಕೆಟ್, ಲೂಪ್ ಲ್ಯಾಪೆಟಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.