ಅಬ್ಬಬ್ಬಾ.. ಆ ಸಿನಿಮಾದ ಲಾಭದಿಂದ ಅಗರಂಗೆ 10 ಕೋಟಿ ದೇಣಿಗೆ ನೀಡಿದ ನಟ ಸೂರ್ಯ!
ಸೂರ್ಯ ನಟಿಸಿದ್ದ 'ರೆಟ್ರೋ' ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದ ಲಾಭದಿಂದ 10 ಕೋಟಿ ರೂಪಾಯಿಗಳನ್ನು ಅಗರಂ ಫೌಂಡೇಶನ್ಗೆ ದೇಣಿಗೆ ನೀಡಿದ್ದಾರೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ಸೂರ್ಯ ನಟಿಸಿದ 'ರೆಟ್ರೋ' ಚಿತ್ರ ಮೇ 1 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್ ರಾಜ್, ನಾಸರ್, ಜೋಜು ಜಾರ್ಜ್, ಜಯರಾಮ್ ಮುಂತಾದ ದಿಗ್ಗಜ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ 2D ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಸೂರ್ಯ 'ರೆಟ್ರೋ' ಚಿತ್ರದ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. 65 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ಮೊದಲ ವಾರದಲ್ಲೇ ಲಾಭ ಗಳಿಸಿದೆ. ಇದರಿಂದ ಚಿತ್ರತಂಡ ಸಂತಸಗೊಂಡಿದೆ. ನಿರ್ಮಾಪಕ ಮತ್ತು ನಟ ಸೂರ್ಯಗೆ ಈ ಚಿತ್ರ ಉತ್ತಮ ಲಾಭ ತಂದುಕೊಟ್ಟಿದೆ.
'ರೆಟ್ರೋ' ಚಿತ್ರದ ಯಶಸ್ಸನ್ನು ಚಿತ್ರತಂಡ ಆಚರಿಸಿಕೊಂಡಿದೆ. ಚೆನ್ನೈನಲ್ಲಿ ನಡೆದ ಯಶಸ್ಸಿನ ಸಮಾರಂಭದಲ್ಲಿ ಸೂರ್ಯ, ಕಾರ್ತಿಕ್ ಸುಬ್ಬರಾಜ್ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಿತ್ತು. ಕೇಕ್ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡಕ್ಕೆ ನಿರ್ಮಾಪಕ ಸೂರ್ಯ ಭರ್ಜರಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟವನ್ನು ಮಾದಂಬಟ್ಟಿ ರಂಗರಾಜ್ ಅವರು ತಯಾರಿಸಿದ್ದರು.
ಸೂರ್ಯ ಅವರು ಅಗರಂ ಎಂಬ ಒಂದು ಟ್ರಸ್ಟ್ ನಡೆಸುತ್ತಿದ್ದಾರೆ. ಇದರ ಮೂಲಕ ಅನೇಕ ಬಡ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾರೆ. 'ರೆಟ್ರೋ' ಚಿತ್ರದ ಲಾಭದಿಂದ 10 ಕೋಟಿ ರೂ.ಗಳನ್ನು ಅಗರಂ ಟ್ರಸ್ಟ್ಗೆ ದೇಣಿಗೆ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಗರಂ ಫೌಂಡೇಶನ್ ಮೂಲಕ ಓದಿದ ಅನೇಕ ಬಡವರು ಇಂದು ವೈದ್ಯರು ಮತ್ತು ಎಂಜಿನಿಯರ್ಗಳಾಗಿದ್ದಾರೆ ಎಂಬುದು ಗಮನಾರ್ಹ.