- Home
- Entertainment
- Cine World
- ತೆಲುಗು ಹುಡುಗಿಯರು ಟಾಲಿವುಡ್ಗೆ ಹೆಚ್ಚಾಗಿ ಬರಬೇಕು.. ಅಲ್ಲು ಅರ್ಜುನ್ ಮಾತಿಗೆ ಟಾಂಟ್ ಕೊಟ್ಟ ಶ್ರೀಲೀಲಾ!
ತೆಲುಗು ಹುಡುಗಿಯರು ಟಾಲಿವುಡ್ಗೆ ಹೆಚ್ಚಾಗಿ ಬರಬೇಕು.. ಅಲ್ಲು ಅರ್ಜುನ್ ಮಾತಿಗೆ ಟಾಂಟ್ ಕೊಟ್ಟ ಶ್ರೀಲೀಲಾ!
ಸ್ಯಾಂಡಲ್ವುಡ್ನ ಕಿಸ್ ಬ್ಯೂಟಿ ಶ್ರೀಲೀಲಾ 'ಸ್ಲಮ್ ಡಾಗ್ ಹಸ್ಬೆಂಡ್' ಪ್ರೀ-ರಿಲೀಸ್ ಇವೆಂಟ್ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ಗೆ ಟಾಂಟ್ ಕೊಟ್ಟಿದ್ದರು. ಅಷ್ಟಕ್ಕೂ ಶ್ರೀಲೀಲಾ, ಅಲ್ಲು ಅರ್ಜುನ್ ಬಗ್ಗೆ ಏನ್ ಹೇಳಿದ್ರು..

ಪೆಲ್ಲಿ ಸಂದಡಿ ಮೂಲಕ ತೆಲುಗಿಗೆ ಪಾದಾರ್ಪಣೆ
ಸ್ಯಾಂಡಲ್ವುಡ್ನ ಕಿಸ್ ಬ್ಯೂಟಿ ಶ್ರೀಲೀಲಾ ಯಾವ ನಾಯಕಿಯರಿಗೂ ಸಾಧ್ಯವಾಗದ ರೀತಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸಂದಡಿ ಚಿತ್ರದ ಮೂಲಕ ತೆಲುಗಿಗೆ ಶ್ರೀಲೀಲಾ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಂತರ ಶ್ರೀಲೀಲಾ ರವಿತೇಜ, ಮಹೇಶ್ ಬಾಬು, ರಾಮ್, ಬಾಲಕೃಷ್ಣ, ನಿತಿನ್ ಮುಂತಾದ ನಾಯಕರ ಸಿನಿಮಾಗಳಲ್ಲಿ ನಟಿಸಿದ್ದರು. ಈ ನಡುವೆ ಶ್ರೀಲೀಲಾ ಅವರ ಹಳೆಯ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಆಗಿದ್ದೇನು?
ಟಾಲಿವುಡ್ನ ಹಿರಿಯ ನಟ ಬ್ರಹ್ಮಾಜಿ ಪುತ್ರ ಸಂಜಯ್ ರಾವ್ ನಾಯಕನಾಗಿ ನಟಿಸಿರುವ 'ಸ್ಲಮ್ ಡಾಗ್ ಹಸ್ಬೆಂಡ್' ಚಿತ್ರದ ಪ್ರೀರಿಲೀಸ್ ಇವೆಂಟ್ಗೆ ಮುಖ್ಯ ಅತಿಥಿಯಾಗಿ ಶ್ರೀಲೀಲಾ ಬಂದಿದ್ದರು. ಈ ವೇಳೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ಶ್ರೀಲೀಲಾ ಮಾತಾಡಿದ್ದು ವೈರಲ್ ಆಗಿತ್ತು. ಅಲ್ಲು ಅರ್ಜುನ್ ಹೇಳಿದಂತೆ, ತೆಲುಗು ಹುಡುಗಿಯರು ಹೆಚ್ಚಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇದು ನಿಜ ಹಾಗೂ ಒಳ್ಳೆಯದು. ನಾನು ಸ್ಕ್ರಿಪ್ಟ್ ಅನ್ನು ಹೇಗೆ ಆರಿಸಿಕೊಳ್ಳುತ್ತಿದ್ದೇನೆ ಎಂದು ನಟಿ ಪ್ರಣವಿ ನನ್ನನ್ನು ಕೇಳುತ್ತಿದ್ದಾರೆ.
ಸಿನಿಮಾ ಒಂದು ಗೌರವಾನ್ವಿತ ವೃತ್ತಿ
ನನ್ನ ಕುಟುಂಬಕ್ಕೆ ಶೈಕ್ಷಣಿಕ ಹಿನ್ನೆಲೆ ಇದೆ. ಹಾಗೆ ಇಲ್ಲಿಗೆ ಬರುವುದು ಒಂದು ದಿಟ್ಟ ಹೆಜ್ಜೆ. ಆದರೆ ಇಲ್ಲಿರುವ ಎಲ್ಲರೂ ನನ್ನನ್ನು ಬೆಂಬಲಿಸುತ್ತಿದ್ದಾರೆ. ಸಿನಿಮಾ ಒಂದು ಗೌರವಾನ್ವಿತ ವೃತ್ತಿ. ನಾವು ನಮ್ಮ ಮಿತಿಗಳನ್ನು ನಿಗದಿಪಡಿಸಿದರೆ, ಯಾರೂ ನಮ್ಮನ್ನು ತಡೆಯುವುದಿಲ್ಲ. 'ಸ್ಲಮ್ ಡಾಗ್ ಹಸ್ಬೆಂಡ್' ಚಿತ್ರ ದೊಡ್ಡ ಹಿಟ್ ಆಗಲಿ ಎಂದು ನಾನು ಬಯಸುತ್ತೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಶ್ರೀಲೀಲಾ ಹೇಳಿದ್ದರು.
ಅಲ್ಲು ಅರ್ಜುನ್ ಹೇಳಿದ್ದೇನು?
ನಟಿ ವೈಷ್ಣವಿ ಚೈತನ್ಯ, ನಟ ಆನಂದ್ ದೇವರಕೊಂಡ ಅಭಿನಯದ 'ಬೇಬಿ' ಚಿತ್ರವನ್ನು ನೋಡಿ ತುಂಬಾ ಖುಷಿಪಟ್ಟೆ. ಆಗ ನನಗೆ ಅನಿಸಿದ್ದೆನೆಂದರೆ, ಕೊನೆಗೂ ತೆಲುಗು ಹುಡುಗಿಯರು ಟಾಲಿವುಡ್ಗೆ ಬರುವ ಸಮಯ ಬಂತು. ಇದನ್ನ ನಾನು ಮನಸ್ಸು ಪೂರ್ತಿಯಾಗಿ ಹೇಳುತ್ತಿದ್ದೇನೆ. ನನಗೆ ಎಷ್ಟು ಸಂತೋಷ ಆಯ್ತೆಂದರೆ, ಶ್ರೀಲೀಲಾ ಎಂಬ ಹುಡುಗಿ ಬರ್ತಾರೆ, ಹೀರೋಯಿನ್ ಆಗಿ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಲ್ಲಿ ನಟಿಸ್ತಾರೆ, ಹಾಗೆ ವೈಷ್ಣವಿ ಕೂಡಾ ಸಿನಿರಂಗಕ್ಕೆ ಬಂದಿದ್ದಾರೆ.
ತೆಲುಗು ಹುಡುಗಿಯರು ಟಾಲಿವುಡ್ನಲ್ಲಿ ಮಿಂಚಬೇಕು
ಈ ಮೂಲಕ ತೆಲುಗು ಹುಡುಗಿಯರು ಟಾಲಿವುಡ್ಗೆ ಬಂದು ಸಿನಿಮಾ ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದರು. ನಾನು ಈ ಸಮಾರಂಭಕ್ಕೆ ಹಾಜರಾಗಲು ನಟಿ ವೈಷ್ಣವಿಯೇ ಪ್ರಮುಖ ಕಾರಣ. ತೆಲುಗು ಹುಡುಗಿಯರು ಟಾಲಿವುಡ್ನಲ್ಲಿ ಮಿಂಚಬೇಕು ಮತ್ತು ಶ್ರೇಷ್ಠರಾಗಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ. ನಾನು ವೈಷ್ಣವಿ ಜೊತೆ ಅಲಾ ವೈಕುಂಠಪುರಮುಲೂ ಚಿತ್ರದಲ್ಲಿ ನಟಿಸಿದಾಗ, ಇಂತಹ ಹುಡುಗಿ ನಾಯಕಿಯಾಗುವ ದಿನ ಬರುತ್ತದೆ ಎಂದು ಭಾವಿಸಿದ್ದೆ.
ಹೆಣ್ಣುಮಕ್ಕಳನ್ನು ಚಿತ್ರರಂಗಕ್ಕೆ ಕಳುಹಿಸಿ
ಎಲ್ಲಾ ತೆಲುಗು ಹುಡುಗಿಯರು ಟಾಲಿವುಡ್ಗೆ ಪ್ರವೇಶಿಸಿ ಮುಖ್ಯವಾಹಿನಿಯ ಸಿನಿಮಾ ಮಾಡಬೇಕೆಂದು ನಾನು ಬಯಸುತ್ತೇನೆ. ಟಾಲಿವುಡ್ ದೇಶದಲ್ಲಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ತೆಲುಗು ಚಿತ್ರರಂಗವು ಪ್ರವರ್ತಕ ಪಾತ್ರವನ್ನು ವಹಿಸುತ್ತಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು ಚಿತ್ರರಂಗಕ್ಕೆ ಕಳುಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದರು.