- Home
- Entertainment
- Cine World
- ಕಣ್ಣಪ್ಪ ಚಿತ್ರದಲ್ಲಿ ಶಿವರಾಜ್ ಕುಮಾರ್ ಈಶ್ವರನ ಪಾತ್ರ ಮಾಡಬೇಕಿತ್ತು. ಆದರೆ ಆಗಿದ್ದೇನು!
ಕಣ್ಣಪ್ಪ ಚಿತ್ರದಲ್ಲಿ ಶಿವರಾಜ್ ಕುಮಾರ್ ಈಶ್ವರನ ಪಾತ್ರ ಮಾಡಬೇಕಿತ್ತು. ಆದರೆ ಆಗಿದ್ದೇನು!
‘ನನಗೆ ಮೋಹನ್ ಬಾಬು ಹಾಗೂ ವಿಷ್ಣು ಮಂಚು ಒಳ್ಳೆಯ ಸ್ನೇಹಿತರು. ‘ಕಣ್ಣಪ್ಪ’ ಚಿತ್ರದಲ್ಲಿ ಬರುವ ಈಶ್ವರನ ಪಾತ್ರಕ್ಕೆ ಮೊದಲು ನನಗೇ ಕೇಳಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪಾತ್ರದಲ್ಲಿ ನಟಿಸಲು ಆಗಿಲ್ಲ. ಸಂಭಾವನೆ ವಿಚಾರಕ್ಕಲ್ಲ’ ಎಂದು ಶಿವಣ್ಣ ಹೇಳಿದರು.

ತೆಲುಗಿನ ‘ಕಣ್ಣಪ್ಪ’ ಚಿತ್ರ ಜೂನ್ 27ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆದಿದೆ.
ಈ ಸಂದರ್ಭದಲ್ಲಿ, ‘ನನಗೆ ಮೋಹನ್ ಬಾಬು ಹಾಗೂ ವಿಷ್ಣು ಮಂಚು ಒಳ್ಳೆಯ ಸ್ನೇಹಿತರು. ‘ಕಣ್ಣಪ್ಪ’ ಚಿತ್ರದಲ್ಲಿ ಬರುವ ಈಶ್ವರನ ಪಾತ್ರಕ್ಕೆ ಮೊದಲು ನನಗೇ ಕೇಳಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪಾತ್ರದಲ್ಲಿ ನಟಿಸಲು ಆಗಿಲ್ಲ. ಸಂಭಾವನೆ ವಿಚಾರಕ್ಕಲ್ಲ’ ಎಂದು ಶಿವಣ್ಣ ಹೇಳಿದರು. ಶಿವರಾಜ್ ಕುಮಾರ್ ನಟಿಸಬೇಕಿದ್ದ ಈಶ್ವರ ಪಾತ್ರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾಡಿದ್ದಾರೆ.
ನಟ ವಿಷ್ಣು ಮಂಚು ಮಾತನಾಡಿ, ‘ನಾನು ಬದಲಾಗಿರುವ ತಾಂತ್ರಿಕತೆ ಹಾಗೂ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ‘ಕಣ್ಣಪ್ಪ’ ಚಿತ್ರವನ್ನು ಮಾಡಿದ್ದೇನೆ’ ಎಂದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಚಿತ್ರದ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಹಾಜರಿದ್ದರು.
ಶಿವಣ್ಣ ಚಿತ್ರದಲ್ಲಿ ವಿಲನ್ ರೋಲ್ ಮಾಡಬೇಕು: ಮೋಹನ್ ಬಾಬು ಅವರಿಗೆ ಕನ್ನಡ ಚಿತ್ರದಲ್ಲಿ ಪಾತ್ರ ಮಾಡುವ ಆಸೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ. ‘ಕನ್ನಡ ಚಿತ್ರದಲ್ಲಿ ನಟಿಸಬೇಕು ಎಂಬುದು ಬಹು ವರ್ಷಗಳ ಕನಸು. ಅಂಬರೀಶ್ ಅವರಿಗೂ ಪಾತ್ರ ಕೊಡುವಂತೆ ಕೇಳುತ್ತಿದ್ದೆ.
ರಾಜ್ ಕುಮಾರ್ ಅವರನ್ನು ಕೇಳುವ ದೈರ್ಯ ಇರಲಿಲ್ಲ. ನನ್ನ ಆಸೆ ಹಾಗೆ ಉಳಿದುಕೊಂಡಿದೆ. ಕೊನೇ ಪಕ್ಷ ಶಿವರಾಜ್ ಕುಮಾರ್ ಚಿತ್ರದಲ್ಲಿ ವಿಲನ್ ಪಾತ್ರ ಮಾಡುವುದಕ್ಕಾದರೂ ಅವಕಾಶ ಕೊಡಲಿ’ ಎಂದರು ಮೋಹನ್ ಬಾಬು.