ಸಲ್ಮಾನ್ ಐಶ್ವರ್ಯಾ ಸಂಬಂಧ: ವಿವೇಕ್ ಒಬೆರಾಯ್ ಹೇಳಿದ್ದೇನು?
ಬಾಲಿವುಡ್ನ ದಿವಾ ಐಶ್ವರ್ಯಾ ರೈ ಹಾಗೂ ನಟ ವಿವೇಕ್ ಒಬೆರಾಯ್ ರಿಲೆಷನ್ಶಿಪ್ ವಿಷಯ ಒಂದು ಕಾಲದಲ್ಲಿ ಭಾರೀ ಸುದ್ದಿಯಾಗಿತ್ತು. ಸಲ್ಮಾನ್ ಖಾನ್ ಜೊತೆ ಆಫೇರ್ ಮುರಿದುಕೊಂಡ ನಂತರದ ದಿನಗಳಲ್ಲಿ ನಟಿ ವಿವೇಕ್ಗೆ ಹತ್ತಿರವಾಗಿದ್ದರು. ಆದರೆ ಇವರ ಲವ್ ಸ್ಟೋರಿ ಅಸಹ್ಯಕರ ರೀತಿಯಲಲ್ಲಿ ಕೊನೆಗೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಸಲ್ಮಾನ್ ಖಾನ್. ಎಂಟರ್ಟೈನ್ ವೆಬ್ಸೈಟ್ಗೆ ಈ ಬಗ್ಗೆ ವಿವೇಕ್ ವಿವರಿಸಿದರು.
ಸಲ್ಮಾನ್ ಖಾನ್ ಜೊತೆ ಆಫೇರ್ ಮುರಿದುಕೊಂಡ ನಂತರ ದಿನಗಳಲ್ಲಿ ನಟಿ ವಿವೇಕ್ಗೆ ಹತ್ತಿರವಾಗಿದ್ದರು
ಆದರೆ ಇವರ ಪ್ರತೀಯೂ ಅಸಹ್ಯಕರ ರೀತಿಯಲ್ಲಿ ಕೊನೆಗೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಸಲ್ಮಾನ್ ಖಾನ್.
ದಶಕಕ್ಕೂ ಹೆಚ್ಚು ಸಮಯದ ಹಿಂದೆ ವಿವೇಕ್ ಒಬೆರಾಯ್ ಕರೆದಿದ್ದ ಪತ್ರಿಕಾಗೋಷ್ಠಿ ಬಿ ಟೌನ್ನಲ್ಲಿ ಸಖತ್ ದೊಡ್ಡ ಸುದ್ದಿಯಾಗಿತ್ತು.
ಸಲ್ಮಾನ್ ಖಾನ್ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು ವಿವೇಕ್. ಈಗ, 16 ವರ್ಷಗಳ ನಂತರವೂ ದಬಾಂಗ್ ನಟನಿಂದ ಆ ವಿಷಯಕ್ಕೆ ಕ್ಷಮೆ ಕೋರುತ್ತಿದ್ದಾರೆ ವಿವೇಕ್.
ಸಂದರ್ಶನವೊಂದರಲ್ಲಿ, ವಿವೇಕ್ ತಮ್ಮ ಪ್ರಧಾನಿ ನರೇಂದ್ರ ಮೋದಿ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದ್ದಾಗ, ಅವರು ಕೆಲಸ ಮತ್ತು ಜೀವನದ ಬಗ್ಗೆ ಮಾತನಾಡಿದರು.
ಸಲ್ಮಾನ್ ಖಾನ್ ಅವರಿಗೆ ಟ್ರುತ್ ಸೀರಮ್ ನೀಡಿದರೆ ನೀವು ಏನು ಕೇಳುತ್ತಿರಿ ಎಂದು ಬಾಲಿವುಡ್ ಹಂಗಮಾ ವಿವೇಕ್ ಒಬೆರಾಯ್ಗೆ ಕೇಳಿತು. ಇದಕ್ಕೆ ವಿವೇಕ್ ಉತ್ತರಿಸುತ್ತಾ, ನೀವು ನಿಜವಾಗಿಯೂ ಕ್ಷಮೆಯನ್ನು ನಂಬುತ್ತೀರಾ?' ಎಂದು ಉತ್ತರಿಸಿದ್ದರು.
ವಿವೇಕ್ ಅನೇಕ ಸಂದರ್ಭಗಳಲ್ಲಿ ಸಲ್ಮಾನ್ ಜೊತೆ ಮಾತನಾಡಲು ಮತ್ತು ಕ್ಷಮೆ ಕೋರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರ ನಡುವಿನ ಅಂತರವನ್ನು ನಿವಾರಿಸಲು ಅವರು ಒಂದೆರಡು ಬಾರಿ ಪ್ರಯತ್ನಿಸಿದರು, ಆದರೆ ಸಲ್ಮಾನ್ ಒಪ್ಪಲಿಲ್ಲ ಎಂದು ವರದಿಗಳು ಹೇಳುತ್ತವೆ.
ಕೆಲವು ತಿಂಗಳ ಹಿಂದೆ, ಫರಾಹ್ ಖಾನ್ ಜೊತೆ ತೇರೆ ಮೇರೆ ಬೀಚ್ ಮೇ ಎಂಬ ಶೋನ ಸಂದರ್ಶನದಲ್ಲಿ, ವಿವೇಕ್ ಇಡೀ ವಿವಾದವನ್ನು ತೆರೆದಿಟ್ಟಿದ್ದರು.
ಪತ್ರಿಕಾಗೋಷ್ಠಿಯನ್ನು ಕರೆಯುವ ಬಗ್ಗೆ ಮಾತನಾಡಿದ ವಿವೇಕ್, ಪತ್ರಿಕಾಗೋಷ್ಠಿಗಾಗಿ ಮಾಧ್ಯಮ ಜನರ ಮುಂದೆ ಕುಳಿತ ಕೂಡಲೇ ತಾನು ತಪ್ಪು ಮಾಡಿದೆ ಎಂದು ತಿಳಿಯಿತು ಎಂದು ಹೇಳಿದರು. ಅದನ್ನು ಪರಸ್ಟರ ನಿಭಾಯಿಸಬೇಕಾಗಿತ್ತು ಮತ್ತು ಈ ರೀತಿ ಅಲ್ಲ ಎಂದು ಅರಿವಾಯಿತು ಅವನು ಅವರು ತಮ್ಮ ಆಪ್ತ ಸ್ನೇಹಿತ ಸೋಹೈಲ್ ಖಾನ್, ಮಧ್ಯಪ್ರವೇಶಿಸಿ ಈ ವಿಷಯವನ್ನು ಪರಿಹರಿಸಲು ಕೇಳಿಕೊಂಡಿದ್ದರು. ಆದರೆ ನಾನು ತಾಳ್ಮೆ ತೋರಲಿಲ್ಲ,' ಎಂದು ಹೇಳಿದ್ದಾರೆ ವಿವೇಕ್.
ಅಷ್ಟೇ ಅಲ್ಲ. ಅದೇ ಸಂದರ್ಶನದಲ್ಲಿ, ವಿವೇಕ್ ಐಶ್ವರ್ಯಾ ರೈ ಅವರನ್ನು 'ಪ್ಲಾಸ್ಟಿಕ್' ಎಂದು ಕರೆಯುವ ಮೂಲಕ ತೆಗೆಳಿದರು. 'ಪ್ಲಾಸ್ಟಿಕ್ ಸ್ಮೈಲ್, ಪ್ಲಾಸ್ಟಿಕ್ ಹಾರ್ಟ್, ಎಲ್ಲಾ' ಎಂದು ವಿವೇಕ್ ಹೇಳಿದ್ದರು.
ಐಶ್ವರ್ಯಾ ಸಲ್ಮಾನ್ ನಂತರ, ವಿವೇಕ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು, ಆದರೆ ಈ ಪತ್ರಿಕಾಗೋಷ್ಠಿಯ ನಂತರ, ನಟಿ ಇವರನ್ನೂ ಬಿಟ್ಟುಬಿಟ್ಟರು ಎಂದು ಹೇಳಲಾಗಿದೆ.
ನಂತರ, ಪತ್ರಿಕಾಗೋಷ್ಠಿಗಾಗಿ ವಿವೇಕ್ ಬಾಲಿವುಡ್ನಲ್ಲಿ ಭಾರಿ ಏಟು ತಿನ್ನಬೇಕಾಯಿತು. ಉದ್ಯಮದಲ್ಲಿ ಬಹಿಷ್ಕರಿಸಲ್ಪಟ್ಟರು.