ರಾಖಿ ಸಾವಂತ್ ವಿರುದ್ಧ ವಂಚನೆ ಆರೋಪ: FIR ದಾಖಲು!
ಬಾಲಿವುಡ್ ನಟಿ ರಾಖಿ ಸಾವಂತ್ ವಿವಾದಗಳಿಗೆ ಫೇಮಸ್. ತಮ್ಮ ಆವತಾರ, ಮಾತು , ಹೇಳಿಕೆಗಳಿಂದ ಸದಾ ನ್ಯೂಸ್ನಲ್ಲಿರುವ ನಟಿ ಇವರು. ಈಗ ಮತ್ತೆ ರಾಖಿ ಹೆಡ್ಲೈನ್ಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರಣ ರಾಖಿ ಸಾವಂತ್ ವಿರುದ್ಧ ವಂಚನೆ ಆರೋಪದ ಎಫ್ಐಆರ್ ದಾಖಲಿಸಲಾಗಿದೆ.
ಬಿಗ್ ಬಾಸ್ 14 ಸ್ಪರ್ಧಿ ರಾಖಿ ಸಾವಂತ್ ಮತ್ತು ಆಕೆಯ ಸಹೋದರ ರಾಕೇಶ್ ಸಾವಂತ್ ವಿರುದ್ಧ ದೆಹಲಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ.
14 ಲಕ್ಷ ರೂ ಗೆದ್ದಿರುವ ಬಿಗ್ ಬಾಸ್ 14 ಫೈನಲಿಸ್ಟ್ ರಾಖಿ ಸಾವಂತ್ ಮತ್ತು ಆಕೆಯ ಸಹೋದರ ರಾಕೇಶ್ ಸಾವಂತ್ ಮೇಲೆ ಫ್ರಾಡ್ ಕೇಸ್ ಹಾಕಲಾಗಿದೆ.
ಬಾಲಿವುಡ್ ಹಂಗಾಮಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿವೃತ್ತ ಬ್ಯಾಂಕ್ ಉದ್ಯೋಗಿಯಿಂದ 6 ಲಕ್ಷ ರೂ ತೆಗೆದುಕೊಂಡಿದ್ದಕ್ಕಾಗಿ ರಾಖಿ ಸಾವಂತ್ ಮತ್ತು ಆಕೆಯ ಸಹೋದರ ರಾಕೇಶ್ ವಿರುದ್ಧ ದೂರು ದಾಖಲಾಗಿದೆ.
ದೆಹಲಿಯ ವಿಕಸ್ಪುರಿ ಪೊಲೀಸ್ ಠಾಣೆಯಲ್ಲಿ ಶೈಲೇಶ್ ಶ್ರೀವಾಸ್ತವ ಅವರು 2017 ರಲ್ಲಿ ಎಫ್ಐಆರ್ ದಾಖಲಿಸಿದ್ದರು.
ಗುರ್ಮೀತ್ ರಾಮ್ ರಹೀಮ್ ಅವರ ಜೀವನವನ್ನು ಆಧರಿಸಿದ ಚಲನಚಿತ್ರವನ್ನು ಸಹ ನಿರ್ಮಿಸುವ ಮತ್ತು ಡ್ಯಾನ್ಸ್ ಸಂಸ್ಥೆಯನ್ನು ತೆರೆಯುವ ಉದ್ದೇಶದಿಂದ ರಾಖಿ ಸಹೋದರ ಅವರು ರಾಜ್ ಖತ್ರಿ ಅವರನ್ನು ಶೈಲೇಶ್ ಶ್ರೀವಾಸ್ತವ ಭೇಟಿಯಾದರು ಎಂದು ವರದಿಯಾಗಿದೆ.
ಆದರೆ ಅದು ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ರಾಕೇಶ್ ಮತ್ತು ರಾಜ್ ಶೈಲೇಶ್ ಅವರಿಂದ 6 ಲಕ್ಷ ರೂ ಪಡೆದಿದ್ದರು ಮತ್ತು ರೂ. 7 ಲಕ್ಷ ರೂ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಿದ್ದರು.
ಬ್ಯಾಂಕ್ ತಲುಪಿದಾಗ ಶೈಲೇಶ್ ಅವರು ಸುಳ್ಳು ಸಹಿಯಿಂದ ಮೋಸ ಹೋಗಿದ್ದಾರೆಂದು ಅರಿತುಕೊಂಡರು ಮತ್ತು ಕಾಲ್ ಮಾಡಿದಾಗ, ಇಬ್ಬರೂ ಅವರ ಫೋನ್ ಸ್ವೀಕರಿಸಲಿಲ್ಲ.
ಆದ್ದರಿಂದ ವಂಚನೆಗಾಗಿ ಶೈಲೇಶ್ ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.