ಪುಷ್ಪಾ 2 ಕಾಲ್ತುಳಿತ ಪ್ರಕರಣ ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ
ಟೀಕೆಗಳನ್ನು ಎದುರಿಸುತ್ತಿರುವ ಅಲ್ಲು ಅರ್ಜುನ್ ಮತ್ತು ಪುಷ್ಪ 2 ಚಿತ್ರತಂಡವು ಕಾಲ್ತುಳಿತ ಪ್ರಕರಣದಲ್ಲಿ ಮೃತ ಮಹಿಳೆ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ನೀಡಿದೆ. ಅಲ್ಲು ಅರವಿಂದ್ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಈ ಮೊತ್ತವನ್ನು ಹಸ್ತಾಂತರಿಸಿದರು.

ಸಂಧ್ಯಾ ಥಿಯೇಟರ್ ಘಟನೆ
ಈ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟರು. ಅವರ ಮಗ ಶ್ರೀ ತೇಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲ್ತುಳಿತ ಉಂಟಾಗಿದ್ದರಿಂದ ಮಹಿಳೆ ಸಾವನ್ನಪ್ಪಿದ್ದರು.
ಕಾಲ್ತುಳಿತದಲ್ಲಿ ಮೃತ ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ ವೈಯಕ್ತಿಕವಾಗಿ ₹25 ಲಕ್ಷ ನೆರವು ಘೋಷಿಸಿದ್ದರ. ಆದರೆ, ಪರಿಹಾರ ತಕ್ಷಣ ನೀಡದ ಕಾರಣ ಟೀಕೆಗಳು ವ್ಯಕ್ತವಾಗಿದ್ದವು.
ಪುಷ್ಪ 2 ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಘೋಷಿಸಿದ್ದ ₹2 ಕೋಟಿ ನೆರವನ್ನು ಚೆಕ್ ಮೂಲಕ ನೀಡಿದ್ದಾರೆ. ಚಿತ್ರದ ನಿರ್ಮಾಪಕ ದಿಲ್ ರಾಜು, ಅಲ್ಲು ಅರವಿಂದ್, ಇಳಮಂಜಿಲಿ ರವಿ ಭೇಟಿ ನೀಡಿದರು.
ಅಲ್ಲು ಅರ್ಜುನ್ ನೆರವು
ಈ ₹2 ಕೋಟಿಯಲ್ಲಿ ಅಲ್ಲು ಅರ್ಜುನ್ ₹1 ಕೋಟಿ, ಪುಷ್ಪ 2 ನಿರ್ಮಾಪಕರು ಮತ್ತು ಸುಕುಮಾರ್ ತಲಾ ₹50 ಲಕ್ಷ ನೀಡಿದ್ದಾರೆ. ಇಂದು ಚೆಕ್ ಹಸ್ತಾಂತರಿಸಲಾಗಿದೆ.
ಅಲ್ಲು ಅರವಿಂದ್
ಅಲ್ಲು ಅರವಿಂದ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಶ್ರೀ ತೇಜ್ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ತಂದೆಗೆ ಧೈರ್ಯ ತುಂಬಿದ್ದಾಗಿ ತಿಳಿಸಿದರು.
₹2 ಕೋಟಿ ನೀಡುವ ಮುನ್ನ ಮೈತ್ರಿ ಮೂವೀಸ್ ₹50 ಲಕ್ಷ ನೆರವು ಘೋಷಿಸಿತ್ತು. ಚೆಕ್ ಅನ್ನು ಶ್ರೀ ತೇಜ್ ತಂದೆಗೆ ನೀಡಲಾಯಿತು. ಈ ಮೂಲಕ ಪರಿಹಾರ ವಿಳಂಬ ಆರೋಪಕ್ಕೆ ಉತ್ತರ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.