- Home
- Entertainment
- Cine World
- ನೆಗೆಟಿವ್ ಪಿಆರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ನಾಗ ಚೈತನ್ಯ: ಅಷ್ಟಕ್ಕೂ ಹೇಳಿದ್ದೇನು?
ನೆಗೆಟಿವ್ ಪಿಆರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ನಾಗ ಚೈತನ್ಯ: ಅಷ್ಟಕ್ಕೂ ಹೇಳಿದ್ದೇನು?
ಟಾಲಿವುಡ್ನಲ್ಲಿ ನಡೆಯುತ್ತಿರುವ ನೆಗೆಟಿವ್ ಪಿಆರ್ ಬಗ್ಗೆ ನಟ ನಾಗ ಚೈತನ್ಯ ಮಾತನಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಟಾಲಿವುಡ್ನಲ್ಲಿ ನಡೆಯುತ್ತಿರುವ ನೆಗೆಟಿವ್ ಪಿಆರ್ ಬಗ್ಗೆ ನಟ ನಾಗ ಚೈತನ್ಯ ಮಾತನಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ 'ತಂಡೇಲ್' ಸಿನಿಮಾ ಶುಕ್ರವಾರ ತೆರೆಕಂಡಿದೆ. ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. 80 ಕೋಟಿ ಬಜೆಟ್ನ ಈ ಚಿತ್ರ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕು.
'ತಂಡೇಲ್' ಸಿನಿಮಾ ಪ್ರಚಾರದ ವೇಳೆ ನಾಗ ಚೈತನ್ಯ ನೆಗೆಟಿವ್ ಪಿಆರ್ ಬಗ್ಗೆ ಮಾತನಾಡಿದರು. ಟಾಲಿವುಡ್ನಲ್ಲಿ ನಡೆಯುತ್ತಿರುವ ನೆಗೆಟಿವ್ ಪಿಆರ್, ಪಿಆರ್ ಟೀಮ್ಗಳ ಹಾವಳಿ, ಮೀಮ್ಸ್ ಪೇಜ್ಗಳ ಬಗ್ಗೆ ಚೈತನ್ಯ ಮಾತನಾಡಿದರು.
ಇತರ ನಟರ ಚಿತ್ರಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ನಟರಿದ್ದಾರೆ ಎಂದು ಚೈತನ್ಯ ಹೇಳಿದರು. ಪ್ರತಿ ನಟನೂ ಪಿಆರ್ ಟೀಮ್ಗೆ ಖರ್ಚು ಮಾಡುವುದು ಸಹಜ. ಆದರೆ ಅದು ತಮ್ಮ ಸಿನಿಮಾ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದರು.
ನೆಗೆಟಿವ್ ಪಿಆರ್ಗೆ ಖರ್ಚು ಮಾಡುವ ಬದಲು ಆ ಹಣದಲ್ಲಿ ಟ್ರಿಪ್ ಹೋಗಿ ಅಥವಾ ನಟನೆ ಕಲಿತುಕೊಳ್ಳಿ ಎಂದು ಚೈತನ್ಯ ಹೇಳಿದರು. ಚೈತನ್ಯ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.