- Home
- Entertainment
- Cine World
- ಸಂಕ್ರಾಂತಿ ಸ್ಟಾರ್ವಾರ್ಸ್: ಖೈದಿ ನಂತರ ಸೂಪರ್ಸ್ಟಾರ್ ಕೃಷ್ಣ ಟಕ್ಕರ್ಗೆ ಸೋತ ಚಿರಂಜೀವಿ!
ಸಂಕ್ರಾಂತಿ ಸ್ಟಾರ್ವಾರ್ಸ್: ಖೈದಿ ನಂತರ ಸೂಪರ್ಸ್ಟಾರ್ ಕೃಷ್ಣ ಟಕ್ಕರ್ಗೆ ಸೋತ ಚಿರಂಜೀವಿ!
ಸೂಪರ್ಸ್ಟಾರ್ ಕೃಷ್ಣ, ಚಿರಂಜೀವಿಗೆ ಭರ್ಜರಿ ಸೋಲುಣಿಸಿದ್ರು. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ಚಿತ್ರದಲ್ಲಿ ಚಿರಂಜೀವಿ ಸೋತಿದ್ದು ಹೇಗೆ ಅಂತ ನೋಡೋಣ.

ತಡವಾಗಿ ಬಂದ್ರೂ ಕೃಷ್ಣ, ಶೋಭನ್ ಬಾಬು, ಕೃಷ್ಣಂರಾಜುಗೆ ಚಿರಂಜೀವಿ ಟಕ್ಕರ್ ಕೊಟ್ಟರು. ಒಮ್ಮೆ ಮಾತ್ರ ಸೂಪರ್ಸ್ಟಾರ್ ಕೃಷ್ಣ, ಚಿರಂಜೀವಿಗೆ ಭರ್ಜರಿ ಸೋಲುಣಿಸಿದ್ರು. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ಚಿತ್ರದಲ್ಲಿ ಚಿರಂಜೀವಿ ಸೋತಿದ್ದು ಹೇಗೆ ಅಂತ ನೋಡೋಣ.
1985ರ ಸಂಕ್ರಾಂತಿಗೆ ಕೃಷ್ಣ ಅಭಿನಯದ 'ಅಗ್ನಿಪರ್ವತ' ಬಿಡುಗಡೆಯಾಗಿ ಭರ್ಜರಿ ಗೆಲುವು ಸಾಧಿಸಿತು. ಆಗ ಕೃಷ್ಣ ಸ್ಟಾರ್ಡಮ್ ಉತ್ತುಂಗದಲ್ಲಿತ್ತು. ಮಾಸ್ ಮತ್ತು ಆಕ್ಷನ್ ಚಿತ್ರಗಳಿಂದ ಬಾಕ್ಸ್ ಆಫೀಸ್ ಅಲುಗಾಡಿಸುತ್ತಿದ್ದರು.
'ಅಗ್ನಿಪರ್ವತ' ಚಿತ್ರಕ್ಕೆ ಕೆ. ರಾಘವೇಂದ್ರ ರಾವ್ ನಿರ್ದೇಶನ, ಅಶ್ವಿನೀದತ್ ನಿರ್ಮಾಣ. ಕೃಷ್ಣ ಜೊತೆಗೆ ರಾಧಾ, ವಿಜಯಶಾಂತಿ ಅಭಿನಯ. 'ಅಗ್ನಿಪೆಟ್ಟಿ ಉಂದಾ?' ಡೈಲಾಗ್ಗೆ ಥಿಯೇಟರ್ಗಳು ಝುಮ್ ಅಂದವು.
ಕೃಷ್ಣ ಚಿತ್ರದ ಜೊತೆಗೆ ಚಿರಂಜೀವಿ 'ಚಟ್ಟಂತೋ ಪೋರಾಟ' ರಿಲೀಸ್ ಆಯ್ತು. 'ಖೈದಿ' ಚಿತ್ರದಿಂದ ಸ್ಟಾರ್ ಆಗಿದ್ದ ಚಿರಂಜೀವಿ, ಗೆಲುವಿನ ನಾಗಾಲೋಟದಲ್ಲಿದ್ದರು. ಆದ್ರೆ 'ಚಟ್ಟಂತೋ ಪೋರಾಟ' ಸೋತು, ಚಿರಂಜೀವಿಗೆ ಹಿನ್ನಡೆಯಾಯ್ತು.
ಚಿರಂಜೀವಿ 75ನೇ ಚಿತ್ರ 'ಚಟ್ಟಂತೋ ಪೋರಾಟ'. ಕೆ. ಬಾಪಯ್ಯ ನಿರ್ದೇಶನ, ಕೆ. ದೇವಿ ವರಪ್ರಸಾದ್ ನಿರ್ಮಾಣ. ಮಾಧವಿ, ಸುಮಲತಾ, ರಾವ್ ಗೋಪಾಲರಾವ್ ಅಭಿನಯವಿತ್ತು. ಚಿತ್ರ ಸೋತರೂ, 'ದೊಂಗ' ಚಿತ್ರದಿಂದ ಚಿರಂಜೀವಿ ಗೆಲುವಿನ ನಗೆ ಬೀರಿದರು.