MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಗೀತ ಗೋವಿಂದಂ' ಸಿನಿಮಾಗೆ ಮೊದಲ ಆಯ್ಕೆ ಬೇರೊಬ್ಬ ನಟಿ.. ಆದ್ರೆ ರಶ್ಮಿಕಾ ಮಂದಣ್ಣ ಪಾಲಾಗಿದ್ದು ಹೇಗೆ? ಸೀಕ್ರೆಟ್ ಹೊರಬಿತ್ತು!

'ಗೀತ ಗೋವಿಂದಂ' ಸಿನಿಮಾಗೆ ಮೊದಲ ಆಯ್ಕೆ ಬೇರೊಬ್ಬ ನಟಿ.. ಆದ್ರೆ ರಶ್ಮಿಕಾ ಮಂದಣ್ಣ ಪಾಲಾಗಿದ್ದು ಹೇಗೆ? ಸೀಕ್ರೆಟ್ ಹೊರಬಿತ್ತು!

ಟಾಲಿವುಡ್‌ನ ಸೂಪರ್ ಹಿಟ್ ‘ಗೀತ ಗೋವಿಂದಂ’ ಚಿತ್ರಕ್ಕೆ ವಿಜಯ್ ದೇವರಕೊಂಡ ಎದುರು ನಾಯಕಿಯಾಗಿ ಮೊದಲು ಆಯ್ಕೆ ಮಾಡಿದ್ದು ಲಾವಣ್ಯ ತ್ರಿಪಾಠಿ ಅವರನ್ನು. ಲಾವಣ್ಯ ಆಗಲೇ ಟಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದರು. ಆದರೆ, ಈ ಸಿನಿಮಾ ರಶ್ಮಿಕಾ ಮಂದಣ್ಣ ಪಾಲಾಗಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್ ಸ್ಟೋರಿ..

2 Min read
Author : Shriram Bhat
Published : Mar 14 2026, 10:58 AM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಕೈಬಿಟ್ಟ ಅದೃಷ್ಟ, ಒಲಿದ ಕೀರ್ತಿ: ಲಾವಣ್ಯ ತ್ರಿಪಾಠಿ ಬೇಡ ಅಂದ ಸಿನಿಮಾ ರಶ್ಮಿಕಾ ಪಾಲಿಗೆ ವರವಾಯಿತು!

ಸಿನಿಮಾ ರಂಗದಲ್ಲಿ ಒಂದು ಮಾತಿದೆ, "ಇಲ್ಲಿ ಯಾರ ಹಣೆಬರಹ ಯಾವಾಗ ಬದಲಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ." ಇದಕ್ಕೆ ತಾಜಾ ಉದಾಹರಣೆ ಎಂದರೆ ಅದು 'ಗೀತ ಗೋವಿಂದಂ' ಸಿನಿಮಾ.

28
Image Credit : Instagram

ಇಂದು ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರ ಈ ಯಶಸ್ಸಿನ ಹಿಂದೆ ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ಅವರ ಒಂದು ಸಣ್ಣ ನಿರ್ಧಾರವಿದೆ ಎಂದರೆ ನೀವು ನಂಬಲೇಬೇಕು!

Related Articles

Related image1
Rashmika Mandanna: ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು? ಈಗ ಎಲ್ಲಾ ಕಿರುಕುಳದ ಮಿತಿಗಳನ್ನೂ ಮೀರಲಾಗಿದೆ; ರಶ್ಮಿಕಾ ಸಿಡಿಮಿಡಿ!
Related image2
ನೋವು ನುಂಗಿಕೊಂಡು ಭಾರತದ ನಂ.1 ನಟಿಯಾದ ರಶ್ಮಿಕಾ ಮಂದಣ್ಣ 'ಟಾಕ್ಸಿಕ್‌ ವ್ಯಕ್ತಿ'ಗೆ ಸೈಲೆಂಟಾಗಿ ಕಲಿಸಿದ ಪಾಠ ಇದು!?
38
Image Credit : Instagram

ಒಬ್ಬರ ನಿರ್ಧಾರ, ಇನ್ನೊಬ್ಬರ ಲಾಟರಿ!

ನಿರ್ದೇಶಕ ಪರಶುರಾಮ್ 'ಗೀತ ಗೋವಿಂದಂ' ಚಿತ್ರದ ಕಥೆ ಸಿದ್ಧಪಡಿಸಿದಾಗ, ವಿಜಯ್ ದೇವರಕೊಂಡ ಎದುರು ನಾಯಕಿಯಾಗಿ ಮೊದಲು ಆಯ್ಕೆ ಮಾಡಿದ್ದು ಲಾವಣ್ಯ ತ್ರಿಪಾಠಿ ಅವರನ್ನು. ಲಾವಣ್ಯ ಆಗಲೇ ಟಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅಥವಾ ಡೇಟ್ಸ್ ಸಮಸ್ಯೆಯಿಂದ ಲಾವಣ್ಯ ಈ ಚಿತ್ರವನ್ನು ಕೈಬಿಟ್ಟರು.

48
Image Credit : Instagram

ಆ ಒಂದು 'ನೋ' (No) ರಶ್ಮಿಕಾ ಮಂದಣ್ಣ ಅವರ ಜೀವನವನ್ನೇ ಬದಲಿಸಿತು. ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಈ ಚಿತ್ರಕ್ಕೆ ಗೀತಾ ಆಗಿ ಎಂಟ್ರಿ ಕೊಟ್ಟರು. ಅಷ್ಟೇ, ಚಿತ್ರ ತೆರೆಕಂಡ ಮೇಲೆ ಸೃಷ್ಟಿಸಿದ ಇತಿಹಾಸ ನಮಗೆಲ್ಲ ಗೊತ್ತೇ ಇದೆ.

ಇಂಕೇಂ ಇಂಕೇಂ ಕಾವಾಲೆ ಹಾಡು ಹಳ್ಳಿ ಹಳ್ಳಿಯಲ್ಲೂ ಮೊಳಗಿತು. ರಶ್ಮಿಕಾ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

58
Image Credit : Rashmika Mandanna

ಲಾವಣ್ಯ ಹೇಳಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಲಾವಣ್ಯ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಹೌದು, ಆ ಚಿತ್ರಕ್ಕೆ ಮೊದಲು ನಾನೇ ನಾಯಕಿ ಆಗಬೇಕಿತ್ತು, ಆದರೆ ಕೆಲವು ಕಾರಣಗಳಿಂದ ನಾನು ನಟಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಒಪ್ಪಿಕೊಂಡಿದ್ದಾರೆ.

68
Image Credit : Asianet News

ಆದರೆ ಈ ಬಗ್ಗೆ ಅವರಿಗೆ ಯಾವುದೇ ವಿಷಾದವಿಲ್ಲ. ಯಾಕೆಂದರೆ, ಸಿನಿಮಾದಲ್ಲಿ ಯಾರಿಗೆ ಯಾವ ಪಾತ್ರ ಸಿಗಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ ಎಂಬುದು ಅವರ ನಂಬಿಕೆ.

78
Image Credit : Instagram

ಇಂದು ಲಾವಣ್ಯ ತ್ರಿಪಾಠಿ ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ಸೊಸೆಯಾಗಿ, ವರುಣ್ ತೇಜ್ ಪತ್ನಿಯಾಗಿ ವೈಯಕ್ತಿಕ ಜೀವನದಲ್ಲಿ ಸುಖವಾಗಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿದ್ದಾರೆ.

88
Image Credit : Asianet News

ಅಂದು ಲಾವಣ್ಯ ಆ ಸಿನಿಮಾವನ್ನು ಒಪ್ಪಿಕೊಂಡಿದ್ದರೆ, ಇಂದು ರಶ್ಮಿಕಾ ಅವರ ಸ್ಥಾನ ಹೇಗಿರುತ್ತಿತ್ತು ಎಂಬುದು ಒಂದು ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ! ಇದೇ ಅಲ್ವಾ ಸಿನಿಮಾ ಅಂದ್ರೆ? "ಒಬ್ಬರ ಕೈಬಿಟ್ಟ ಅವಕಾಶ, ಇನ್ನೊಬ್ಬರ ಬದುಕಿನ ತಿರುವು!"

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮನರಂಜನಾ ಸುದ್ದಿ
ಟಾಲಿವುಡ್
Latest Videos
Recommended Stories
Recommended image1
Ram Charan: ಫ್ಯಾನ್ಸ್‌ಗೆ ಡಬಲ್ ಧಮಾಕಾ! ಹುಟ್ಟುಹಬ್ಬಕ್ಕೆ ರಾಮ್ ಚರಣ್ ಕಡೆಯಿಂದ 2 ಬಿಗ್ ಗಿಫ್ಟ್: ಏನದು?
Recommended image2
ಡೀಲ್ ಕ್ಯಾನ್ಸಲ್! ₹120 ಕೋಟಿ ಒಪ್ಪಂದದಿಂದ ಹಿಂದೆ ಸರಿದ ಅಮೆಜಾನ್ ಪ್ರೈಮ್? ಜನ ನಾಯಗನ್ ಚಿತ್ರತಂಡಕ್ಕೆ ಶಾಕ್!
Recommended image3
Vadivelu Speech: ಆಗ ಕ್ಯಾಪ್ಟನ್... ಈಗ ದಳಪತಿನಾ? ಡಿಎಂಕೆ ವೇದಿಕೆಯಲ್ಲಿ ವಿಜಯ್ ವಿರುದ್ಧ ವಡಿವೇಲು ವಾಗ್ದಾಳಿ!
Related Stories
Recommended image1
Rashmika Mandanna: ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು? ಈಗ ಎಲ್ಲಾ ಕಿರುಕುಳದ ಮಿತಿಗಳನ್ನೂ ಮೀರಲಾಗಿದೆ; ರಶ್ಮಿಕಾ ಸಿಡಿಮಿಡಿ!
Recommended image2
ನೋವು ನುಂಗಿಕೊಂಡು ಭಾರತದ ನಂ.1 ನಟಿಯಾದ ರಶ್ಮಿಕಾ ಮಂದಣ್ಣ 'ಟಾಕ್ಸಿಕ್‌ ವ್ಯಕ್ತಿ'ಗೆ ಸೈಲೆಂಟಾಗಿ ಕಲಿಸಿದ ಪಾಠ ಇದು!?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved