MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

ನಾಗ ಚೈತನ್ಯ - ಸಮಂತಾ ವಿಚ್ಛೇದನೆ ಪಡೆದು ಬೇರೆಯಾದ ನಂತರ, ಚೈತನ್ಯ ಅವರ ಮೇಲೆ ತಾಯಿ ಲಕ್ಷ್ಮಿಗೆ ಸ್ವಲ್ಪವೂ ಒಲವಿಲ್ಲದಂತಾಗಿದೆ. ಮಾಜಿ ಸೊಸೆ ಮೇಲೆ ಯಾವುದೇ ತಪ್ಪಿಲ್ಲ ಎಂದು ಅರಿತುಕೊಂಡ ಲಕ್ಷ್ಮಿ, ಇದೀಗ ಮಗನ ಮೇಲೆ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

2 Min read
Govindaraj S
Published : Aug 24 2024, 07:10 PM IST
Share this Photo Gallery
  • FB
  • TW
  • Linkdin
  • Whatsapp
17

ನಾಗಾರ್ಜುನ ಮತ್ತು ಅವರ ಮೊದಲ ಪತ್ನಿ ಲಕ್ಷ್ಮೀ ದಗ್ಗುಬಾಟಿ ಅವರ ಮಗ ನಾಗ ಚೈತನ್ಯ. ಈ ಹಿಂದೆ 2017ರಲ್ಲಿ ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

27

ನಾಗ ಚೈತನ್ಯ ಇದೀಗ ಅವರ ಪ್ರೇಯಸಿ ಶೋಭಿತಾ ಧುಲಿಪಾಲ ಜೊತೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆಗಸ್ಟ್ 8 ರಂದು ನಾಗಾರ್ಜುನ ಅವರ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿತು. ಇದನ್ನು ನಾಗಾರ್ಜುನ ಖಚಿತಪಡಿಸಿದ್ದರು.


 

37

ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗಿದೆ. ಇದರಲ್ಲಿ ನಾಗಾರ್ಜುನ, ಅಮಲಾ, ಅಖಿಲ್ ಮತ್ತು ಧುಲಿಪಾಲ ಕುಟುಂಬದವರ ಫೋಟೋಗಳು ಇದ್ದರೂ, ಮಗನ ನಿಶ್ಚಿತಾರ್ಥದಲ್ಲಿಲಕ್ಷ್ಮೀ ದಗ್ಗುಬಾಟಿ ಮತ್ತು ಅವರ ಕುಟುಂಬದ ಯಾರೂ ಭಾಗವಹಿಸಿಲ್ಲ ಎನ್ನಲಾಗಿದೆ.

47

ಲಕ್ಷ್ಮೀ ದಗ್ಗುಬಾಟಿ ನಾಗಾರ್ಜುನ ಅವರನ್ನು ತೆರೆದ ನಂತರ ಅಮೆರಿಕದಲ್ಲಿ ನೆಲೆಸಿದರು. ಜೊತೆಗೆ ಎರಡನೇ ಮದುವೆಯನ್ನೂ ಮಾಡಿಕೊಂಡರು. ಪದವಿ ಮುಗಿಯುವವರೆಗೂ ಚೈತನ್ಯ ತಾಯಿಯೊಂದಿಗೆ ಇದ್ದರು. ನಂತರ ನಟನೆಯಲ್ಲಿ ಆಸಕ್ತಿ ತೋರಿಸಿದ ನಂತರ ನಾಗಾರ್ಜುನರೊಂದಿಗೆ ಬಂದು ಸೇರಿಕೊಂಡರು. ಅಮಲಾ ಯಾವುದೇ ತಾರತಮ್ಯ ಮಾಡದೆ ನಾಗ ಚೈತನ್ಯ ಅವರನ್ನೂ ತನ್ನ ಮಗನಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.


 

57

ಈ ನಡುವೆ ಮಗನ ನಿಶ್ಚಿತಾರ್ಥಕ್ಕೆ ತಾಯಿ ಲಕ್ಷ್ಮಿ ಬಾರದಿರಲು ಬಲವಾದ ಕಾರಣವಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಸಮಂತಾ ಜೊತೆ ನಾಗ ಚೈತನ್ಯ ಬೇರೆಯಾಗಿದ್ದನ್ನು ಲಕ್ಷ್ಮೀ ದಗ್ಗುಬಾಟಿ ನಿಜಕ್ಕೂ ಇಷ್ಟಪಡಲಿಲ್ಲ ಮತ್ತು ಸಮಂತಾಳನ್ನು ತನ್ನ ಸೊಸೆಯಾಗಿ ಸ್ವೀಕರಿಸಿದಂತೆ ಶೋಭಿತಾಳನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.  

67

ಅದೇ ರೀತಿ ವಿಚ್ಛೇದನ ಪ್ರಕರಣದಲ್ಲಿ ಸಮಂತಾ ತಪ್ಪೇನೂ ಇಲ್ಲ, ಇದರಲ್ಲಿ ನಾಗ ಚೈತನ್ಯದೇ ತಪ್ಪಿದೆ ಎಂದು ಲಕ್ಷ್ಮಿ ಭಾವಿಸುತ್ತಾರೆ. ಸಮಂತಾ ಪರ ನಿರಂತರವಾಗಿ ಲಕ್ಷ್ಮೀ ದಗ್ಗುಬಾಟಿ ಇರುವುದರಿಂದ ಮಗ ನಾಗ ಚೈತನ್ಯ ಜೊತೆ ಮಾತನಾಡುತ್ತಿಲ್ಲ ಎನ್ನಲಾಗುತ್ತಿದೆ. ಅವರ ಮೇಲೆ ತೀವ್ರ ಸಿಟ್ಟಿನಲ್ಲಿದ್ದಾರೆ ಎನ್ನಲಾಗಿದೆ.


 

77

ಸಮಂತಾ ಮಯೋಸಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾಗ ಸಮಂತಾಳನ್ನು ಲಕ್ಷ್ಮೀ ದಗ್ಗುಬಾಟಿ ಅವರೇ ಕಾಳಜಿಯಿಂದ ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಮಂತಾ ಮೇಲಿನ ಪ್ರೀತಿಯಿಂದಲೋ ಅಥವಾ ನಾಗ ಚೈತನ್ಯ ಮೇಲಿನ ಕೋಪದಿಂದಲೋ ಲಕ್ಷ್ಮೀ ದಗ್ಗುಬಾಟಿ ಚೈತನ್ಯ - ಶೋಭಿತಾ ಮದುವೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ವರದಿಗಳು ಹೇಳುತ್ತಿವೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಾಗ ಚೈತನ್ಯ
ಟಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved