ಪ್ರಭಾಸ್, ಜ್ಯೂ.ಎನ್ಟಿಆರ್, ವೆಂಕಟೇಶ್ಗೆ ಕನ್ನಡದ ಈ ನಟಿಯೇ ಹೀರೋಯಿನ್ ಆಗಬೇಕಂತೆ!
ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್ನ ಸಿನಿಮಾ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ಜೋಡಿಯ ಬಗ್ಗೆ ಹೊಸ ಸುದ್ದಿಯೊಂದು ವೈರಲ್ ಆಗಿದೆ.

ಅಲ್ಲು ಅರ್ಜುನ್, ತ್ರಿವಿಕ್ರಮ್ ಸಿನಿಮಾ ಮುಂದೂಡಿಕೆ
ಗುಂಟೂರು ಕಾರಂ ನಂತರ ತ್ರಿವಿಕ್ರಮ್ ಶ್ರೀನಿವಾಸ್ ಅವರ ಮುಂದಿನ ಸಿನಿಮಾ ಅಲ್ಲು ಅರ್ಜುನ್ ಜೊತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲು ಅರ್ಜುನ್ ಅಟ್ಲಿ ಜೊತೆ ಸಿನಿಮಾ ಮಾಡಲು ಮುಂದಾದರು. ಹಾಗಾಗಿ ತ್ರಿವಿಕ್ರಮ್ ಬೇರೆ ನಟನ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.
ತ್ರಿವಿಕ್ರಮ್, ವೆಂಕಿ ಕಾಂಬಿನೇಷನ್
ತ್ರಿವಿಕ್ರಮ್ ನಿರ್ದೇಶನದಲ್ಲಿ ವೆಂಕಟೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಆದರೆ, ಈ ಸಿನಿಮಾಗೆ ಕನ್ನಡತಿ ನಾಯಕಿ ಆಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಸಿನಿಮಾ ಘೋಷಣೆಯಾದರೆ ಕನ್ನಡತಿಯೇ ನಾಯಕಿ ಆಗುವುದು ಬಹುತೇಕ ಖಚಿತವಾಗಿದೆ.
ತೆಲುಗು ಮೂರು ಸ್ಟಾರ್ಗಳ ಜೊತೆ ಕನ್ನಡತಿ
ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಿಂದ ಖ್ಯಾತಿಗೆ ಬಂದ ನಟಿ ರುಕ್ಮಿಣಿ ವಸಂತ್ ಇದೀಗ ತೆಲುಗಿನ ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೆಷನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಈಗಾಗಲೇ ತ್ರಿವಿಕ್ರಮ್ ಅವರು ಕಥೆ ಹೇಳಿದ್ದಾರಂತೆ. ಆದರೆ, ರುಕ್ಮಿಣಿ ಈಗಾಗಲೇ NTR ಮತ್ತು ಪ್ರಶಾಂತ್ ನೀಲ್ ಸಿನಿಮಾದಲ್ಲಿದ್ದಾರೆ. ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರಕ್ಕೂ ಇವರು ಆಯ್ಕೆ ಆಗಿದ್ದಾರೆ.
ಶೀಘ್ರದಲ್ಲೇ ಘೋಷಣೆ
ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್ನ ಸಿನಿಮಾ ಈ ಹಿಂದೆ ಘೋಷಣೆಯಾಗಿತ್ತು. ಆದರೆ ಕಾರಣಾಂತರಗಳಿಂದ ನಿಲ್ಲುತ್ತಿತ್ತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಹರಿಕ ಮತ್ತು ಹಾಸಿನಿ ಕ್ರಿಯೇಷನ್ಸ್ ಈ ಚಿತ್ರ ನಿರ್ಮಿಸಲಿದೆಯಂತೆ.
ಬ್ಲಾಕ್ಬಸ್ಟರ್ ನಂತರ ವೆಂಕಿ
ವೆಂಕಟೇಶ್ ಅವರ 'ಸಂಕ್ರಾಂತಿಗೆ ವಸ್ತುನ್ನಾಂ' ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ವೆಂಕಿ ಮತ್ತು ತ್ರಿವಿಕ್ರಮ್ ಈ ಹಿಂದೆ 'ನುವ್ವು ನಾಕು ನಚ್ಚಾವ್', 'ಮಲ್ಲಿಶ್ವರಿ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.