ರೈತ ಪ್ರತಿಭಟನೆ ವಿರೋಧಿಸಿ ಕಂಗನಾ ಕಳ್ಕೊಂಡಿದ್ದು 15 ಕೋಟಿ
First Published Feb 5, 2021, 5:52 PM IST
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ರೈತ ಪ್ರತಿಭಟನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ರೈತರ ಪ್ರತಿಭಟನೆಯ ಕುರಿತು ತನ್ನ ನಿಲುವಿನಿಂದಾಗಿ ಈಕೆ ಕಳೆದುಕೊಂಡಿದ್ದೆಷ್ಟು ಗೊತ್ತಾ..?

ಸೆಲೆಬ್ರಿಟಿಗಳು ಎಂದರೇನೇ ಹಾಗೆ, ಅವರ ಜೀವನವೇ ಪಬ್ಲಿಕ್ ಆಗಿಬಿಟ್ಟಿರುತ್ತದೆ. ಏನಂದರೂ, ಸುಮ್ಮನಿದ್ದರೂ ಅದಯ ಅವರನ್ನು ಬಾಧಿಸುತ್ತದೆ.

ಪ್ರತಿ ಬಾರಿ ಮಾತಾಡಿ, ಮಾತಾಡಿ ಈ ಬಾಲಿವುಡ್ ಕ್ವೀನ್ ಹೆವಿ ಲಾಸ್ ಅನುಭವಿಸಿದ್ದಾರೆ.

ನಟಿ ಕಂಗನಾ ರಣಾವತ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್, ನೆಪೊಟಿಸಂ, ಡ್ರಗ್ಸ್ ಇತ್ಯಾದಿ ಇತ್ಯಾದಿ ಮಾತನಾಡಿ ಸುದ್ದಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ದೇಶದಲ್ಲಿ ಏನೇ ಆದರೂ, ಎಲ್ಲೇ ಆದರೂ ರಿಯಾಕ್ಟ್ ಮಾಡ್ತಿದ್ದಾರೆ.

ಹೀಗೆ ರಿಯಾಕ್ಟ್ ಮಾಡಿ ನಟಿ ತಮ್ಮ ಖ್ಯಾತಿಯನ್ನೇನೋ ಹೆಚ್ಚಿಸ್ಕೊಂಡ್ರು, ಆದ್ರೆ ಅದಾಯದ ಕಥೆ ಏನು..?

ರೈತರ ಪ್ರತಿಭಟನೆ ವಿರೋಧಿಸಿ ಟ್ವೀಟ್ ಮಾಡಿ ಮಾತನಾಡಿದ್ದರಿಂದ ನಟಿ ಭಾರೀ ನಷ್ಟ ಅನುಭವಿಸಿದ್ದಾರೆ.

ಈ ಬಗ್ಗೆ ತನ್ನ ನಿಲುವಿನಿಂದಾಗಿಯೇ 15 ಕೋಟಿ ರೂಪಾಯಿಯ ಜಾಹೀರಾತು ಆಫರ್ ಮಿಸ್ ಮಾಡ್ಕೊಂಡಿದ್ದಾರೆ ಕಂಗನಾ