ವಿಶೇಷ ವ್ಯಕ್ತಿ ಮೀಟ್ ಮಾಡಲು ಉದಯಪುರಕ್ಕೆ ಹೋದ ಕಂಗನಾ: ಯಾರದು?
ತಮ್ಮ ನೇರ ನುಡಿ ಮತ್ತು ವಿವಾದತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್ನ ನಟಿ ಕಂಗನಾ ರಣಾವತ್ ಈಗ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅವರ ಫೇವರೆಟ್ ರಾಜ್ಯವಾದ ರಾಜಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿಗೆ ತಲುಪಿದ ತಕ್ಷಣ ಕಂಗನಾ ಹಾರ್ಟ್ ಇಮೋಜಿ ಜೊತೆ, ಅಲ್ಲಿಗೆ ಅವರು ಯಾವುದೇ ಮಹತ್ವ ಕಾರಣಕ್ಕಾಗಿ ಬಂದಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಏಕೆಂದರೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಬಂದಿದ್ದಾಗಿಯೂ ಹೇಳಿದ್ದಾರೆ. ಅವರ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು ಉಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಕಂಗನಾ ರಣಾವತ್ ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಚಾರ್ಟರ್ ವಿಮಾನದಿಂದ ರಾಜಸ್ಥಾನಕ್ಕೆ ಆಗಮಿಸಿದ್ದು, ಹಾರ್ಟ್ ಇಮೋಜಿ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಕಂಗನಾ ರಣಾವತ್ ಗುರುವಾರ ಖಾಸಗಿ ಚಾರ್ಟರ್ ವಿಮಾನದಲ್ಲಿ ಲೇಕ್ಸಿಟಿ ಉದಯಪುರ ತಲುಪಿದ್ದಾರೆ. ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಕಂಗನಾ ತನ್ನ ಸಹೋದರನ ಮದುವೆ ಸಮಾರಂಭಕ್ಕೆ ಉದಯಪುರಕ್ಕೆ ಬಂದಿದ್ದರು.
ಕಂಗನಾ ಮುಂಬರುವ ಚಿತ್ರ ತೇಜಸ್ ಶೂಟಿಂಗ್ ಜೋಧ್ಪುರದಲ್ಲಿ ನಡೆಯುತ್ತಿದೆ. ತಮ್ಮ ಶೆಡ್ಯೂಲ್ ಪೂರ್ಣಗೊಳಿಸಿ, ಉದಯಪುರಕ್ಕೆ ತೆರಳಿದ್ದಾರೆ.
ಈ ಬಾರಿ ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಉದಯಪುರಕ್ಕೆ ಬಂದಿದ್ದೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕ್ಷಣದಿಂದ ಜನರು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ನಟಿ ಯಾರನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಇನ್ನೂ ಸ್ಪಷ್ಟಪಡಿಸಿಲ್ಲ
ತಾನು ರಾಜಸ್ಥಾನವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಕಂಗನಾ ಈ ಮೊದಲು ಹಲವು ಬಾರಿ ಹೇಳಿದ್ದಾರೆ. ಅನೇಕ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಮಣಿಕರ್ಣಿಕಾ ಚಿತ್ರವೂ ಇಲ್ಲಿಯೇ ಶೂಟ್ ಆಗಿದ್ದು.
ಕೆಲವು ದಿನಗಳ ಹಿಂದೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ತೇಜಸ್ ಸಿನಿಮಾದ ಪೋಟೊದಲ್ಲಿ ಅವರು ಆರ್ಮಿ ಯೂನಿಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದರು.
ಈ ಚಿತ್ರದಲ್ಲಿ ತೇಜಸ್ ಗಿಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದರಲ್ಲಿ ಅವರು ಸಿಖ್ ಸೈನಿಕನ ಪಾತ್ರವನ್ನು ನಿರ್ವಹಿಸುತ್ತಿದ್ದು, ಜಬಾನ್ಜ್ ಮಹಿಳಾ ಫೈಟರ್ ಪೈಲಟ್ ಆಗಿದ್ದಾರಂತೆ.
ಅವರು ಭಾರತೀಯ ವಾಯುಪಡೆಯ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾಯಿತು. ಸಿನಿಮಾ ಜೋಧ್ಪುರ-ಜೈಸಲ್ಮೇರ್ ಮತ್ತು ಉದಯಪುರದಲ್ಲಿ ಚಿತ್ರೀಕರಿಸಲಾಗುತ್ತಿದೆ.