MalayalamNewsableKannadaKannadaPrabhaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Indian Celebrities: ಕನ್ನಡ ನಟಿಯೂ ಸೇರಿ ವಿಮಾನ ದುರಂತದಲ್ಲಿ ಮೃತಪಟ್ಟ ಸೆಲೆಬ್ರಿಟಿಗಳು

Indian Celebrities: ಕನ್ನಡ ನಟಿಯೂ ಸೇರಿ ವಿಮಾನ ದುರಂತದಲ್ಲಿ ಮೃತಪಟ್ಟ ಸೆಲೆಬ್ರಿಟಿಗಳು

ಇಂದು ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಪತನವಾಗಿದೆ. ಈ ಹಿಂದೆ ಕೂಡ ವಿಮಾನ ಅಪಘಾತ ಆಗಿ ಭಾರತೀಯ ನಟ-ನಟಿಯರು ಸಾವನ್ನಪ್ಪಿದ್ದಾರೆ. ಹಾಗಾದರೆ ಅವರು ಯಾರು ಯಾರು? 

2 Min read
Padmashree Bhat
Published : Jun 12 2025, 03:37 PM IST | Updated : Jun 12 2025, 06:16 PM IST
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
111
ಯಾರು? ಯಾರು?
Image Credit : meta ai and instagram

ಯಾರು? ಯಾರು?

ಏರ್‌ಕ್ರ್ಯಾಶ್‌ನಲ್ಲಿ ಸಾವನ್ನಪ್ಪಿದ ಸೆಲೆಬ್ರಿಟಿಗಳಲ್ಲಿ ಕನ್ನಡ ನಟಿ ಕೂಡ ಸೇರಿದ್ದಾರೆ ಎನ್ನೋದನ್ನು ನೆನಪಿಡಬೇಕು.

211
ವೈ.ಎಸ್. ರಾಜಶೇಖರ ರೆಡ್ಡಿ
Image Credit : meta ai and instagram

ವೈ.ಎಸ್. ರಾಜಶೇಖರ ರೆಡ್ಡಿ

2009ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರು ಬೆಲ್ 430 ಟ್ವಿನ್-ಎಂಜಿನ್ ಹೆಲಿಕಾಪ್ಟರ್ ಅಪಘಾತದಲ್ಲಿ. ತನಿಖೆಯಲ್ಲಿ ಹೆಲಿಕಾಪ್ಟರ್ ವಾಯು ಯೋಗ್ಯವಾಗಿರಲಿಲ್ಲ ಎಂದು ಹೇಳಲಾಯ್ತು. ಪೈಲಟ್‌ಗಳ ಕಳಪೆ ನಿರ್ಧಾರದಿಂದ ಹೆಲಿಕಾಪ್ಟರ್ ಅಪಘಾತ ಆಯ್ತು.

Related Articles

Shanghai Airport: ಮೇಕಪ್​ ಮಾಡ್ಕೊಂಡು ಏರ್​ಪೋರ್ಟ್​ಗೆ ಹೋಗ್ತೀರಾ? ನಿಮ್ಗೂ ಹೀಗೇ ಆಗ್ಬೋದು ಹುಷಾರ್​!
Shanghai Airport: ಮೇಕಪ್​ ಮಾಡ್ಕೊಂಡು ಏರ್​ಪೋರ್ಟ್​ಗೆ ಹೋಗ್ತೀರಾ? ನಿಮ್ಗೂ ಹೀಗೇ ಆಗ್ಬೋದು ಹುಷಾರ್​!
Bengaluru Airport: ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ನ ವಿಶೇಷತೆ ಬಲ್ಲೀರಾ?
Now Playing
Bengaluru Airport: ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ನ ವಿಶೇಷತೆ ಬಲ್ಲೀರಾ?
311
ಇಂದರ್ ಠಾಕೂರ್
Image Credit : meta ai and instagram

ಇಂದರ್ ಠಾಕೂರ್

1985ರಲ್ಲಿ ಏರ್ ಇಂಡಿಯಾ ವಿಮಾನ ಕನಿಷ್ಕ-182ರ ಅಪಘಾತದಲ್ಲಿ ನಾದಿಯಾ ಕೆ ಪಾರ್ ಸಿನಿಮಾದಲ್ಲಿ ತಮ್ಮ ಪಾತ್ರದಿಂದಲೇ ಗುರುತಿಸಿಕೊಂಡ ನಟ ಇಂದರ್ ಠಾಕೂರ್ ನಿಧನರಾದರು. ಆಗ ಇವರ ಜೊತೆಗೆ ಇಡೀ ಕುಟುಂಬವಿತ್ತು. ಈ ದುರಂತದಲ್ಲಿ 329 ಜನರು ಸಾವನ್ನಪ್ಪಿದ್ದಾರೆ.

411
ತರುಣಿ ಸಚದೇವ್
Image Credit : meta ai and instagram

ತರುಣಿ ಸಚದೇವ್

ರಸನಾ ಗರ್ಲ್ ಎಂದು ಹೆಸರು ಪಡೆದಿದ್ದ ನಟಿ ತರುಣಿ ಸಚದೇವ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ 14ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತರುಣಿಯ ಜನ್ಮದಿನ , ಮರಣದಿನ ಒಂದೇ ಆಗಿತ್ತು ಎನ್ನೋದು ವಿಶೇಷ. ಅವರು ಮೇ 14, 1998ರಂದು ಜನಿಸಿದ್ದು, ಮೇ 14, 2012ರಂದು ನಿಧನರಾಗಿದ್ದಾರೆ.

511
ಸೌಂದರ್ಯ
Image Credit : meta ai and instagram

ಸೌಂದರ್ಯ

ಏಪ್ರಿಲ್ 17, 2004ರಂದು ನಟಿ ಸೌಂದರ್ಯ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಕರೀಂನಗರಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದರು. ಬೆಂಗಳೂರಿನ ಜಕ್ಕೂರ್ ಏರ್‌ಫೀಲ್ಡ್‌ನಿಂದ ಟೇಕ್ ಆಫ್ ಆದ ಬಳಿಕ, 100 ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ ಅಪಘಾತ ಆಯ್ತು.

611
ಸಂಜಯ್‌ ಗಾಂಧಿ
Image Credit : Getty

ಸಂಜಯ್‌ ಗಾಂಧಿ

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಆಕ್ಟಿವ್‌ ಆಗಿದ್ದರು. ಜೂನ್ 23, 1980 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ಮಾಡುತ್ತಿದ್ದಾಗ, ವಿಮಾನ ಕಂಟ್ರೋಲ್‌ ತಪ್ಪಿತು.

711
ಮಾಧವರಾವ್ ಸಿಂಧಿಯಾ
Image Credit : instagram

ಮಾಧವರಾವ್ ಸಿಂಧಿಯಾ

ದೇಶದ ಮಾಜಿ ರೈಲ್ವೆ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001 ರಂದು ಕಾನ್ಪುರದಲ್ಲಿ ರಾಜಕೀಯ ರ್ಯಾಲಿಗೆ ಹೋಗುತ್ತಿದ್ದಾಗ ವಿಮಾನ ಅಪಘಾತ ಆಗಿತ್ತು.

811
ಒ.ಪಿ. ಜಿಂದಾಲ್, ಸುರೇಂದರ್ ಸಿಂಗ್
Image Credit : instagram

ಒ.ಪಿ. ಜಿಂದಾಲ್, ಸುರೇಂದರ್ ಸಿಂಗ್

ಹರಿಯಾಣದ ವಿದ್ಯುತ್ ಸಚಿವ, ಕೈಗಾರಿಕೋದ್ಯಮಿ ಒ.ಪಿ. ಜಿಂದಾಲ್, ಕೃಷಿ ಸಚಿವ ಸುರೇಂದರ್ ಸಿಂಗ್ ಇಬ್ಬರೂ ಕೂಡ 2005ರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ದೆಹಲಿಯಿಂದ ಚಂಡೀಗಢಕ್ಕೆ ಕಿಂಗ್ ಕೋಬ್ರಾ ಹೆಲಿಕಾಪ್ಟರ್ ಹೋಗುತ್ತಿದ್ದಾಗ, ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ಅಪಘಾತ ನಡೆದಿದೆ.

911
ದೋರ್ಜಿ ಖಂಡು
Image Credit : instagram

ದೋರ್ಜಿ ಖಂಡು

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. 2007ರಿಂದ ಸಾಯುವವರೆಗೆ ಅವರು ಸಿಎಂ ಆಗಿದ್ದರು. ಪವನ್ ಹನ್ಸ್ ಹೆಲಿಕಾಪ್ಟರ್ ಕಂಟ್ರೋಲ್‌ ತಪ್ಪಿ ಅಪಘಾತಕ್ಕೀಡಾಯಿತು. ಇದಾಗಿ ಐದು ದಿನಗಳ ನಂತರ ತವಾಂಗ್‌ನಲ್ಲಿ ವಿಮಾನದ ಅವಶೇಷಗಳು ಪತ್ತೆಯಾದವು. ಭಾರತೀಯ ಆರ್ಮಿಯಲ್ಲಿಯೂ ಇವರು ಕೆಲಸ ಮಾಡಿದ್ದರು.

1011
ಹೋಮಿ ಬಾಬಾ
Image Credit : instagram

ಹೋಮಿ ಬಾಬಾ

ಭಾರತೀಯ ವಿಜ್ಞಾನಿ ಹೋಮಿ ಜಹಾಂಗೀರ್‌ ಬಾಬಾ ಅವರು ಏರ್‌ಇಂಡಿಯಾ ಫ್ಲೈಟ್‌101 ಕ್ರ್ಯಾಶ್‌ನಲ್ಲಿ ನಿಧನರಾದರು. ಜೆನಿವಾ ಏರ್‌ಟ್ರಾಫಿಕ್‌ಕಂಟ್ರೋಲರ್‌ಜೊತೆಗೆ ಮಿಸ್‌ಕಮ್ಯುನಿಕೇಶನ್‌ಆಗಿ ಈ ಘಟನೆ ನಡೆದಿದೆ.

1111
ಸಿಡಿಎಸ್ ಬಿಪಿನ್ ರಾವತ್
Image Credit : instagram

ಸಿಡಿಎಸ್ ಬಿಪಿನ್ ರಾವತ್

ಡಿಸೆಂಬರ್ 8, 2021 ರಂದು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಸುಲೂರಿನಿಂದ ವೆಲ್ಲಿಂಗ್ಟನ್‌ಗೆ ಹೆಲಿಕಾಪ್ಟರ್ ಮೂಲಕ ಹೋಗುತ್ತಿದ್ದಾಗ, ತಮಿಳುನಾಡಿನ ಕೂನೂರಿನಲ್ಲಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಅವರ ಪತ್ನಿ, ಇತರ 11 ಜನರು ಸಹ ವಿಮಾನದಲ್ಲಿದ್ದರು.

About the Author

Padmashree Bhat
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಏರ್ ಇಂಡಿಯಾ
ವಿಮಾನ ನಿಲ್ದಾಣ
ವಿಮಾನಯಾನ ಸಂಸ್ಥೆಗಳು
ಸೆಲೆಬ್ರಿಟಿಗಳು
 
Recommended Stories
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved