MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸೂಪರ್ ಸ್ಟಾರ್ ರಜನಿಕಾಂತ್ ಎನರ್ಜಿಗೆ ಈ ಯೋಗ ಮುದ್ರೆಯೇ ಕಾರಣವಂತೆ: ಏನಿದು ಸೀಕ್ರೇಟ್?

ಸೂಪರ್ ಸ್ಟಾರ್ ರಜನಿಕಾಂತ್ ಎನರ್ಜಿಗೆ ಈ ಯೋಗ ಮುದ್ರೆಯೇ ಕಾರಣವಂತೆ: ಏನಿದು ಸೀಕ್ರೇಟ್?

ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ವರ್ಷಗಳಿಂದ ತಮ್ಮ ಬೆರಳುಗಳನ್ನು ಬಳಸಿ ಒಂದು ಮುದ್ರೆಯನ್ನು ಪಾಲಿಸುತ್ತಿದ್ದಾರೆ. ಅದರ ಹಿನ್ನೆಲೆ ಏನು ಗೊತ್ತಾ?

1 Min read
Govindaraj S
Published : Oct 17 2024, 10:34 AM IST
Share this Photo Gallery
  • FB
  • TW
  • Linkdin
  • Whatsapp
16

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿ ನಂತರ ನಿರ್ದೇಶಕ ಕೆ.ಬಾಲಚಂದರ್ ಅವರಿಂದ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟವರು ರಜನಿಕಾಂತ್. 1975 ರಲ್ಲಿ ಬಿಡುಗಡೆಯಾದ ಅಪೂರ್ವ ರಾಗಗಳು ಚಿತ್ರದ ಮೂಲಕ ರಜನಿಕಾಂತ್ ನಟರಾಗಿ ಪರಿಚಿತರಾದರು. ಆ ಚಿತ್ರದ ನಂತರ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡರು.

26

ಆರಂಭಿಕ ಹಂತದಲ್ಲಿ ಖಳನಾಯಕ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ ರಜನಿಗೆ ದೊಡ್ಡ ತಿರುವು ನೀಡಿದ ಚಿತ್ರ 16 ವಯದಿನಿಲೆ. ಈ ಚಿತ್ರದಲ್ಲಿ ಕಮಲ್, ಶ್ರೀದೇವಿ ಜೊತೆ ನಟಿಸಿದ್ದರು. 1978 ರಲ್ಲಿ ಬಾಸ್ಕರ್ ನಿರ್ದೇಶನದಲ್ಲಿ ಬಿಡುಗಡೆಯಾದ ಭೈರವಿ ಚಿತ್ರದ ಮೂಲಕ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು.

36

ರಜನಿಕಾಂತ್ ಅವರ ಶೈಲಿಗೆಂದೇ ಪ್ರತ್ಯೇಕ ಅಭಿಮಾನಿ ಬಳಗವೇ ರೂಪುಗೊಂಡಿತು. ಹೀಗೆ ಹಂತ ಹಂತವಾಗಿ ಮಾಸ್ ಹೀರೋ ಆಗಿ ರೂಪುಗೊಂಡ ರಜನಿ, ತಮ್ಮ ಚಿತ್ರಗಳಲ್ಲಿ ಪಂಚ್ ಡೈಲಾಗ್‌ಗಳನ್ನು ಹೇಳಿ ಅದರಲ್ಲೂ ಟ್ರೆಂಡ್ ಸೆಟ್ಟರ್ ಆದರು. ಹೀಗೆ ತಮ್ಮ ಪಟ್ಟುಹಿಡಿದ ಪ್ರಯತ್ನದಿಂದ ಭರ್ಜರಿ ಯಶಸ್ಸು ಗಳಿಸಿದ ರಜನಿಕಾಂತ್ ಇಂದಿಗೂ ನಂಬರ್ 1 ನಟರಾಗಿ ಮೆರೆಯುತ್ತಿದ್ದಾರೆ.

 

46

ರಜನಿಕಾಂತ್ ಆಧ್ಯಾತ್ಮದ ಮೇಲೆ ಅಪಾರ ನಂಬಿಕೆ ಇಟ್ಟವರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಷ್ಟೇ ಅಲ್ಲ, ಅವರು ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಧ್ಯಾನ ಮಾಡುವುದು ಕೂಡ ಒಂದು ಕಾರಣ ಎನ್ನಲಾಗುತ್ತದೆ. ಹೀಗಿರುವ ರಜನಿಕಾಂತ್, ಆಗಾಗ್ಗೆ ತಮ್ಮ ಹೆಬ್ಬೆರಳು ಮತ್ತು ತೋರುಬೆರಳನ್ನು ಸೇರಿಸಿ ಒಂದು ಮುದ್ರೆಯನ್ನು ಪಾಲಿಸುತ್ತಿರುವುದನ್ನು ಅನೇಕರು ಗಮನಿಸಿರಬಹುದು.

56

ರಜನಿಕಾಂತ್ ಇದನ್ನು ಆಗಾಗ್ಗೆ ಪಾಲಿಸುತ್ತಿರುವುದರ ಹಿಂದೆ ಒಂದು ಕುತೂಹಲಕಾರಿ ಮಾಹಿತಿ ಇದೆ. ಅದೇನೆಂದರೆ, ಅವರು ಪಾಲಿಸುವ ಈ ಕೈ ಮುದ್ರೆಯ ಹೆಸರು ಚಿನ್ ಮುದ್ರೆ. ಆಗಾಗ್ಗೆ ಆ ಎರಡು ಬೆರಳುಗಳನ್ನು ಸೇರಿಸಿ ಇಟ್ಟಾಗ ಮೆದುಳಿನ ನರಗಳು ಚೆನ್ನಾಗಿ ಕೆಲಸ ಮಾಡುತ್ತವೆಯಂತೆ.

66

ಚಿನ್ ಮುದ್ರೆಯಿಂದ ನೆನಪಿನ ಶಕ್ತಿ ಹೆಚ್ಚುವುದಲ್ಲದೆ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆಯಂತೆ. ಜೊತೆಗೆ ನಿದ್ರಾಹೀನತೆ, ಕೋಪ, ತಲೆನೋವು ಮುಂತಾದವುಗಳನ್ನು ಈ ಮುದ್ರೆ ನಿವಾರಿಸುತ್ತದೆಯಂತೆ. ಅಷ್ಟೇ ಅಲ್ಲ, ನರಗಳಿಗೆ ಶಾಂತಿ ನೀಡಿ ಗಮನ ಚದುರದಂತೆ ಇರಲು ಈ ಚಿನ್ ಮುದ್ರೆ ಸಹಾಯ ಮಾಡುತ್ತದೆಯಂತೆ. ಆದ್ದರಿಂದಲೇ ರಜನಿ ಅದನ್ನು ತಪ್ಪದೆ ಪಾಲಿಸುತ್ತಿದ್ದಾರೆ.

 

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ರಜನೀಕಾಂತ್
ಯೋಗ
ಧ್ಯಾನ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved